ಮುಂಬರುವ ಕುಂಭಮೇಳಕ್ಕೆ ಬರುವ ಪ್ರತಿಯೊಬ್ಬ ಭಕ್ತರವರೆಗೆ ಹಿಂದೂ ರಾಷ್ಟ್ರದ ವಿಚಾರವನ್ನು ತಲುಪಿಸೋಣ ! – ವಿಶ್ವನಾಥ ಕುಲಕರ್ಣಿ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಎರಡನೇ ದಿನ (ಜೂನ್ ೨೫)

ಎರಡನೇ ದಿನದ ೨ನೇ ಸತ್ರ : ರಾಷ್ಟ್ರರಕ್ಷಣೆ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಹಿಂದೂಸಂಘಟನೆ

ವಿಶ್ವನಾಥ ಕುಲಕರ್ಣಿ

ವಿದ್ಯಾಧಿರಾಜ ಸಭಾಂಗಣ – ೧೪ ಜನವರಿ ೨೦೨೫ ರಿಂದ ಪ್ರಯಾಗರಾಜದಲ್ಲಿ ಕುಂಭಮೇಳವು ಪ್ರಾರಂಭವಾಗಲಿದೆ. ಈ ಕುಂಭಮೇಳಕ್ಕೆ ೪೦ ಕೋಟಿಗಿಂತ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಹಿಂದೂ ರಾಷ್ಟ್ರದ ಕಲ್ಪನೆಯನ್ನು ಈ ಪ್ರತಿಯೊಬ್ಬ ಭಕ್ತರವರೆಗೆ ತಲುಪಿಸಲು ನಾವು ಪ್ರಯತ್ನಿಸಲಿದ್ದೇವೆ. ಧರ್ಮಾಭಿಮಾನಿ ಹಿಂದೂಗಳು ಈ ಧರ್ಮ ಕಾರ್ಯಕ್ಕೆ ಸಮಯ ನೀಡಬೇಕು. ಹಿಂದೂಗಳ ಜಗತ್ತಿನ ಇದು ಅತಿದೊಡ್ಡ ಧಾರ್ಮಿಕ ಮೇಳವಾಗಿದೆ. ಕುಂಭಮೇಳದಲ್ಲಿ ಉಪಸ್ಥಿತರಿರುವವರ ಸಂಘಟನೆ ಮಾಡುವುದು, ವ್ಯಾಖ್ಯಾನಗಳನ್ನು ಆಯೋಜಿಸುವುದು, ದೇವಸ್ಥಾನಗಳ ವಿಶ್ವಸ್ಥರೊಂದಿಗೆ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆ ನಡೆಸುವುದು, ಕುಂಭಮೇಳದಲ್ಲಿ ಭಾಗವಹಿಸುವ ೧೦ ಸಾವಿರಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳವರೆಗೆ ಲವ್ ಜಿಹಾದ್, ಹಲಾಲ್ ಪ್ರಮಾಣಪತ್ರ ಇವುಗಳಿಂದಾಗುವ ಅಪಾಯ, ಹಿಂದೂ ರಾಷ್ಟ್ರದ ಆವಶ್ಯಕತೆಯ ಕುರಿತು ಮಾಹಿತಿ ನೀಡುವುದು, ಇದಕ್ಕಾಗಿ ಪ್ರಯತ್ನಿಸಲಿದ್ದೇವೆ. ಸಮವಿಚಾರಿ ಸಂತರ ಸಭೆಗಳನ್ನು ಆಯೋಜಿಸಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಿರ್ಧರಿಸಲಾಗುವುದು. ಎಲ್ಲಾ ಹಿಂದೂ ಸಂಘಟನೆಗಳ ನೆರವಿನೊಂದಿಗೆ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗುವುದು.