10 ನೇ ತರಗತಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸನಾತನದ ಸಾಧಕರು

ಉಡುಪಿ ಜಿಲ್ಲೆಯ ಕು. ಸ್ವರೂಪ್ ನಾಯಕ್ ಇವರು 10 ನೇ ತರಗತಿಯ ಪರೀಕ್ಷೆಯಲ್ಲಿ  94.7 ಅಂಕ ಪಡೆದು ಉತ್ತೀರ್ಣ

ಕು. ಸ್ವರೂಪ್ ನಾಯಕ್

ಉಡುಪಿ – ಸ್ವರೂಪ ನಾಯಕ್ ಇವರು ಪರೀಕ್ಷೆ ಬರೆಯುವಾಗ ಗುರುಗಳಿಗೆ, ವಿಘ್ನ ಹರ್ತ ಗಣಪತಿಗೆ ಮತ್ತು ಶಾರದ ಮಾತೆಗೆ ಪ್ರಾರ್ಥನೆ ಮಾಡಿ ಬರೆಯುತ್ತಿದ್ದರು. ಅವರ ಪೋಷಕರು ಕೂಡ ಸಾಧನೆ ಮಾಡುತ್ತಿದ್ದು ಮಗನಿಗೆ ಸಾಧನೆಯ ದೃಷ್ಟಿಯಿಂದಲೇ ಓದುವುದು ಮತ್ತು ಪರೀಕ್ಷೆಯನ್ನು ಬರೆಯಲು ಪ್ರೋತ್ಸಾಹವನ್ನು ನೀಡುತ್ತಿದ್ದರು.

ಧಾರವಾಡ ಜಿಲ್ಲೆಯ ಕು. ಅನೂಷಾ ದೊಡ್ಮನಿ ಇವಳಿಗೆ 10 ನೇ ತರಗತಿಯ ಪರೀಕ್ಷೆಯಲ್ಲಿ  73.7 ಅಂಕ ಪಡೆದು ಉತ್ತೀರ್ಣ

ಕು. ಅನೂಷಾ ದೊಡ್ಮನಿ

ಧಾರವಾಡ – ಎಲ್ಲಾ ಗುರು ಚರಣಗಳಲ್ಲಿ ಸಮರ್ಪಸಿ ಪರೀಕ್ಷೆ ಬರೆದೆ ಮತ್ತು ಮನಸ್ಸಿನಲ್ಲಿ ಪ್ರಾರ್ಥಿಸುತಿದ್ದೆ. ಇದರಿಂದ ನನಗೆ ಫಲಿತಾಂಶದಲ್ಲಿ ಒಳ್ಳೆಯ ಅಂಕ ಸಿಕ್ಕಿತು. ಪ್ರಾಮಾಣಿಕವಾಗಿ ಬರೆದಿದ್ದಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕಿತು. ಗುರುಗಳ ಕೃಪೆಯಿಂದ 73.7% ಅಂಕಗಳು ದೊರಕಿದವು. ಶ್ರೀ ಗುರುಗಳ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.