ಕೆಲವು ದಿನಗಳ ಹಿಂದೆ ದೆಹಲಿಯಲ್ಲಿನ ೧೦೦ ಶಾಲೆಗಳು, ಹಾಗೂ ಕರ್ಣಾವತಿಯಲ್ಲಿನ ೭ ಶಾಲೆಗಳಿಗೂ ಕೂಡ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿತ್ತು!

ನವದೆಹಲಿ – ಕೆಲ ದಿನಗಳ ಹಿಂದಿನಿಂದ ಸುಳ್ಳು ಬೆದರಿಕೆ ನೀಡುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಈ ಹಿಂದೆ ದೆಹಲಿಯಲ್ಲಿನ ೧೦೦ ಶಾಲೆಗಳಿಗೆ, ಹಾಗೂ ಕರ್ಣಾವತಿಯ ೭ ಶಾಲೆಗಳಿಗೆ ಬಾಂಬ್ ಸ್ಫೋಟದಿಂದ ಧ್ವಂಸಗೊಳಿಸುವ ಬೆದರಿಕೆ ನೀಡಿರುವ ಇ-ಮೇಲ್ ದೊರೆತಿದ್ದವು.
ಈಗ ದೇಶದಲ್ಲಿನ ೧೩ ವಿಮಾನ ನಿಲ್ದಾಣಗಳನ್ನು ಧ್ವಂಸಗೊಳಿಸುವ ಬೆದರಿಕೆ ಬಂದಿದೆ. ಕೇಂದ್ರ ಔದ್ಯೋಗಿಕ ರಕ್ಷಣಾ ತಂಡಕ್ಕೆ ಮೇ ೧೨ ರಂದು ಈ ವಿಷಯದ ಬೆದರಿಕೆಯ ಇ-ಮೇಲ್ ದೊರೆತಿದ್ದು ಇದರ ತುರ್ತು ತನಿಖೆ ನಡೆಸಲಾಯಿತು. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲಕ್ಷ್ಮಣಪುರಿಯ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಾಗೂ ಜಮ್ಮು , ಜಯಪುರ, ಭೋಪಾಲ್, ಹಾಗೂ ಪಾಟಲಿಪುತ್ರ, ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟದ ಭಯ ಹುಟ್ಟಿದೆ. ಈ ಬೆದರಿಕೆ ಸುಳ್ಳಾಗಿದ್ದು ಮತ್ತು ಇ-ಮೇಲ್ ಕಳಿಸಿರುವವನನ್ನು ಹುಡುಕುವುದಕ್ಕಾಗಿ ಮುಂದಿನ ತನಿಖೆ ನಡೆಸಲಾಗುತ್ತಿದೆ. ಈ ಬೆದರಿಕೆ ಬಂದ ಬಳಿಕ ಲಕ್ಷ್ಮಣಪುರಿ ವಿಮಾನ ನಿಲ್ದಾಣದ ರಕ್ಷಣಾ ತಂಡ ಸಂಪೂರ್ಣ ವಿಮಾನ ನಿಲ್ದಾಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ ; ಆದರೆ ಬಾಂಬ್ ಬೆದರಿಕೆ ಮೌಲ್ಯಾಂಕನ ಸಮಿತಿಯು ಇದು ಸುಳ್ಳು ಬೆದರಿಕೆಯಾಗಿದೆ ಎಂದು ಹೇಳಿದೆ. ಇತರ ವಿಮಾನ ನಿಲ್ದಾಣಗಳಲ್ಲಿನ ಬೆದರಿಕೆಗಳು ಕೂಡ ಸುಳ್ಳಾಗಿರುವುದು ಕಂಡು ಬಂದಿದೆ ಎಂದು ಕೇಂದ್ರ ಆದ್ಯೋಗಿಕ ಸುರಕ್ಷಾ ತಂಡ ತಿಳಿಸಿದೆ.
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕರಿಂದ ನರಿಯ ಕಥೆಯ ಹಾಗೆ ಮೊದಲು ಸುಳ್ಳು ಬೆದರಿಕೆಗಳನ್ನು ನೀಡಲಾಗುತ್ತಿದೆಯೇ? ಎಂಬ ಅನುಮಾನ ಬರುತ್ತಿದೆ. |
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ