
೧. ಗರ್ಭಗುಡಿಯ ವೈಶಿಷ್ಟ್ಯ : ದೇವಾಲಯಕ್ಕೆ ಛಾವಣಿÉಯಿಲ್ಲದಿದ್ದರೆ, ತೆರೆದ ಆಕಾಶದಲ್ಲಿ ‘ಓಂ’ ಶಬ್ದವು (ದೇವತೆಯ ತತ್ತ್ವ) ಕಣ್ಮರೆಯಾಗುತ್ತದೆ. ದೇವಾಲಯಕ್ಕೆ ಗೋಲಾಕಾರದ ಸುತ್ತಿನ ಗುಮ್ಮಟ ಇರುವುದರಿಂದ ಪ್ರತಿಧ್ವನಿಯು ವರ್ತುಲಾಕಾರದಲ್ಲಿ ತಿರುಗುತ್ತಿರುತ್ತದೆ. ಗರ್ಭಗುಡಿಗಳಿಗೆ ಕಿಟಕಿಗಳು ಇರುವುದಿಲ್ಲ ಮತ್ತು ಚಿಕ್ಕ ಬಾಗಿಲಿರುತ್ತದೆ, ಆದ್ದರಿಂದ ಪ್ರತಿಧ್ವನಿ ಅಲ್ಲಿಯೇ ಸುತ್ತುತ್ತಿರುತ್ತದೆ. ಅಂತಹ ಧ್ವನಿಯ ಪರಿಸರದಲ್ಲಿ, ಮನಸ್ಸಿನ ಆಲೋಚನೆಗಳು ಮುಚ್ಚಿಹೋಗುತ್ತವೆ.
೨. ಗೋಲಾಕಾರದ ಧ್ವನಿಯ ಪರಿಸರದಲ್ಲಿ ಮನಸ್ಸಿನ ವಿಚಾರಗಳು ನಿಂತುಹೋಗುವುದು : ತೆರದ ಆಕಾಶದಲ್ಲಿ ‘ಓಂ’, ‘ರಾಮ್’ ಮುಂತಾದ ಶಬ್ದಗಳು ಕಣ್ಮರೆಯಾಗುತ್ತವೆ; ಆದರೆ ದೇವಾಲಯದ ಗುಮ್ಮಟವು ಗೋಲಾಕಾರದಲ್ಲಿದ್ದಾಗ, ‘ಓಂ’ನ ಅನೇಕ ಪ್ರತಿಧ್ವ್ವನಿಗಳು ಮತ್ತೆ ಮತ್ತೆ ತಿರುಗುತ್ತಲೇ ಇರುತ್ತವೆ. ದೇವಾಲಯದ ನಿರ್ಮಾಣಕ್ಕೆ ತಬಲಾದಂತೆ ಧ್ವನಿಸುವ ಕಲ್ಲುಗಳನ್ನು ಆಯ್ಕೆ ಮಾಡಲಾಗುತ್ತದೆ. ವಿಶಿಷ್ಟ ಮಂತ್ರಗಳ ಉಚ್ಚಾರವು ಗೋಲಾಕಾರ ಧ್ವನಿ ಮತ್ತು ಪ್ರತಿಧ್ವನಿಗಳ ರೂಪದಲ್ಲಿ ಮಂತ್ರಯುಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಘಂಟಾನಾದವು ಸಹ ಗೋಲಾಕಾರವಾಗಿ ಸುತ್ತುತ್ತದೆ. ಅಂತಹ ಗೋಲಾಕಾರದ ಧ್ವನಿಯ ಪರಿಸರದಲ್ಲಿ ಮನಸ್ಸಿನಲ್ಲಿ ವಿಚಾರ ಬರುವುದು ನಿಂತುಹೋಗುತ್ತದೆ. ಪಾಶ್ಚಿಮಾತ್ಯರಿಗೆ ದೇವಾಲಯವು ಆರೋಗ್ಯದ ದೃಷ್ಟಿಯಿಂದ ಅಯೋಗ್ಯವೆನಿಸುತ್ತದೆ; ಏಕೆಂದರೆ ಒಳ ಹೋಗುವ ದಾರಿ ಕಿರಿದಾಗಿದೆ ಮತ್ತು ಒಂದೇ ಬಾಗಿಲನ್ನು ಹೊಂದಿದೆ. ಯಾವುದೇ ಗಾಳಿಯ ಚಲನೆ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾಗಿಲು, ಕಿಟಕಿಗಳಿದ್ದರೆ, ಧ್ವನಿ ವರ್ತುಲವನ್ನು ರಚಿಸಲಾಗುವುದಿಲ್ಲ.
– ದಿ. ಸದ್ಗುರು (ಡಾ.) ವಸಂತ ಬಾಳಾಜಿ ಆಠವಲೆ
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !
ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆಯ ಚಾಲನೆ
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!