ಹಿಂದುತ್ವನಿಷ್ಠರ ಶಿರಚ್ಛೇದಕ್ಕೆ 1 ಕೋಟಿ ರೂಪಾಯಿ ಸುಪಾರಿ !

  • ಸೂರತ್‌ನಲ್ಲಿ ಮೌಲ್ವಿ ಅಬು ಬಕರ್ ಬಂಧನ ಪ್ರಕರಣ

  • ಚುನಾವಣೆ ಹಿನ್ನೆಲೆಯಲ್ಲಿ ಭಾರತವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ನಡೆದಿತ್ತು !

(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ನವದೆಹಲಿ – ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರ ನೂಪುರ್ ಶರ್ಮಾ, ತೆಲಂಗಾಣದ ಬಿಜೆಪಿಯ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್, ‘ಸುದರ್ಶನ ನ್ಯೂಸ್’ ಸಂಪಾದಕ ಸುರೇಶ್ ಚವ್ಹಾಣಕೆ ಮತ್ತು ‘ಸನಾತನ ಸಂಘ’ದ ರಾಷ್ಟ್ರೀಯ ಅಧ್ಯಕ್ಷ ಉಪದೇಶ ರಾಣಾ ಅವರ ಶಿರಚ್ಛೇದಕ್ಕಾಗಿ ಮೌಲ್ವಿ ಅಬು ಬಕರ್ ಅಲಿಯಾಸ್ ಮುಹಮ್ಮದ್ ಸೊಹೈಲ್ ಸಂಚು ರೂಪಿಸಿದ್ದ. ಇದಕ್ಕಾಗಿ ಅವನಿಗೆ 1 ಕೋಟಿ ರೂಪಾಯಿ ಸುಪಾರಿ ನೀಡಲಾಗಿತ್ತು. ರಾಣಾನ ಈ ಹತ್ಯೆಯ ಸಂಚು ಅಂತಿಮ ಹಂತದಲ್ಲಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಮೇ 4 ರಂದು ಗುಜರಾತ್ ಪೊಲೀಸರು ಅವನನ್ನು ಸೂರತ್‌ನಿಂದ ಬಂಧಿಸಿದ ನಂತರ, ಹೆಚ್ಚಿನ ಮಾಹಿತಿ ಈಗ ಬೆಳಕಿಗೆ ಬರುತ್ತಿದೆ. ಈ ಹಿಂದುತ್ವನಿಷ್ಠರಿಂದ ದೊಡ್ಡ ಅಪರಾಧ ನಡೆಯುತ್ತಿದೆ ಎಂದು ಈ ಮೌಲ್ವಿ ನಂಬಿದ್ದ.

ಪೊಲೀಸರು ನೀಡಿದ ಮಾಹಿತಿ

1. ಮೌಲ್ವಿ ಅಬು ಬಕರ್ ನೇಪಾಳ ಮತ್ತು ಪಾಕಿಸ್ತಾನದ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದು, ಅಲ್ಲಿಂದ ಶಸ್ತ್ರಾಸ್ತ್ರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದ. ನೇಪಾಳದ ಭಯೋತ್ಪಾದನೆಯ ಹೆಸರು ಶಹಜಾದ್ ಆಗಿದೆ.

2. ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿರಲು ಮೌಲ್ವಿಗೆ ‘ಲಾವೋಸ್’ ದೇಶದ ಸಿಮ್ ಕಾರ್ಡ್ ಅನ್ನು ಸಹ ನೀಡಲಾಗಿತ್ತು, ಇದರಿಂದ ಭಾರತೀಯ ಏಜೆನ್ಸಿಗಳಿಗೆ ಆ ಸಂಖ್ಯೆಯಿಂದ ಯಾವುದೇ ಮಾಹಿತಿ ಸಿಗುವುದಿಲ್ಲ.

3. ಮೌಲ್ವಿ ಬಕರ್ ನಂದೂರ್‌ಬಾರ್‌ನವ. ಅವರು ಪ್ರಸ್ತುತ ಸೂರತ್‌ನ ಮದರಸಾದಲ್ಲಿ ಕೆಲಸ ಮಾಡುತ್ತಿದ್ದ, ಮತ್ತು ಕರ್ಜಾ-ಅಂಬೋಲಿ ಗ್ರಾಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ. ಇಲ್ಲಿನ ಕಾರ್ಖಾನೆಯೊಂದರಲ್ಲಿ ಮ್ಯಾನೇಜರ್ ಆಗಿಯೂ ಕೆಲಸ ಮಾಡುತ್ತಿದ್ದ.

4. ಮೌಲ್ವಿ ಬಕರ್ ಅವರ ಮನಸ್ಸಿನಲ್ಲಿ, ಭಾರತದಲ್ಲಿನ ಹಿಂದುತ್ವನಿಷ್ಠ ಸಂಘಟನೆಗಳು ಪ್ರವಾದಿ ಮುಹಮ್ಮದ್ ಅವರನ್ನು ಅಗೌರವಗೊಳಿಸುತ್ತಿವೆ ಎಂದು ಬಿಂಬಿಸಲಾಗಿತ್ತು. ಈ ಹಿಂದುತ್ವನಿಷ್ಠರನ್ನು ಕೊಲ್ಲಲು ಜಿಹಾದಿ ಭಯೋತ್ಪಾದಕರು ಮೌಲ್ವಿಯನ್ನು ‘ಉನ್ಹೆ ಸೀಧಾ ಕರೊ'(ಅವರಿಗೆ ಸರಿ ಮಾಡಿ) ಎಂಬ ಕೋಡ್ ಭಾಷೆಯನ್ನು ಬಳಸಿತ್ತು.

5. ಮೌಲ್ವಿಯ ಮೊಬೈಲ್ ನಿಂದ ಪಡೆದ ಮಾಹಿತಿಯ ಪ್ರಕಾರ, ಆತ ಸೇರಿದ್ದ ಭಯೋತ್ಪಾದಕ ಗುಂಪುಗಳ ಸಂಖ್ಯೆ ಇಂಡೋನೇಷ್ಯಾದಿಂದ ವಿಯೆಟ್ನಾಂ ಮತ್ತು ಕಜಕಿಸ್ತಾನ್ ವರೆಗೆ ಇತ್ತು.

ಸಂಪಾದಕೀಯ ನಿಲುವು

ಆಳವಾದ ತನಿಖೆಯ ನಂತರ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !