ಮಹಿಳೆಯನ್ನು ಬೆತ್ತಲೆಗೊಳಿಸಿದ ಆರೋಪಿಗೆ ಜಾಮೀನು; ಜನರಿಂದ ಹೂಮಾಲೆ ಹಾಕಿ ಸ್ವಾಗತ !

ಜನರು ಆರೋಪಿಗೆ ಹಾರ ಹಾಕಿ, ಪಟಾಕಿ ಸಿಡಿಸುವ ಮೂಲಕ ಮತ್ತು ಸಿಹಿ ಹಂಚುವ ಮೂಲಕ ಸ್ವಾಗತ !

ಬೆಳಗಾವಿ – ಡಿಸೆಂಬರ10, 2023 ರಂದು ಬೆಳಗಾವಿ ತಾಲೂಕಿನ ಹೊಸ ವಂಟಮೂರಿನಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಬಸಪ್ಪ ನಾಯಕ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹಿಂಡಲಗಾ ಜೈಲಿನಿಂದ ಬಸಪ್ಪ ಹೊರ ಬಂದ ತಕ್ಷಣ ಆತನ ಕೊರಳಿಗೆ ಹಾರ ಹಾಕಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿತ್ತು. ಇವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಸಂಪಾದಕೀಯ ನಿಲುವು

ಸಮಾಜವೇ ಹೀಗಾದರೆ ಸಮಾಜದಲ್ಲಿ ನೈತಿಕತೆ ಉಳಿಯುತ್ತದೆಯೇ ? ಸಮಾಜಕ್ಕೆ ನೈತಿಕತೆ ಕಲಿಸದ ಎಲ್ಲ ಪಕ್ಷದ ಆಡಳಿತಗಾರರೇ ಇದಕ್ಕೆ ಕಾರಣರು !