ದೂರಿನ ನಂತರ ಪರಾರಿ !
(ಇಮಾಮ್ ಎಂದರೆ ಮಸೀದಿಯಲ್ಲಿ ನಮಾಜ ಕಲಿಸುವವ)

ರಾಯಪುರ – ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ಮಸೀದಿಯೊಂದರ ಇಮಾಮ್ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಇಮಾಮ್ ಹೆಸರು ಗುಲಾಂ ಗೌಸ್ ಆಗಿದ್ದು, ನೀರು ಕೇಳಲು ಮಹಿಳೆಯ ಮನೆಗೆ ನುಗ್ಗಿದ್ದನು. ಪ್ರಸಾರ ಮಾಧ್ಯಮಗಳ ವರದಿಯ ಪ್ರಕಾರ, ಸೂರಜ್ಪುರ ಜಿಲ್ಲೆಯ ಚೌಕಿ ಪ್ರದೇಶದ ಬಸದೈಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಸೀದಿಯೊಂದರಲ್ಲಿ ಇಮಾಮ್ ಗುಲಾಮ್ ಘೌಸ್ ಸ್ಥಳೀಯ ಜನರಿಗೆ ನಮಾಜ್ ಕಲಿಸುತ್ತಿದ್ದ. 26 ವರ್ಷದ ಸಂತ್ರಸ್ತೆಯ ಮನೆ ಮಸೀದಿಯಿಂದ ಕಾಲ್ನಡಿಗೆಯ ದೂರದಲ್ಲಿದೆ. ಏಪ್ರಿಲ್ 10 ರಂದು ಸಂಜೆ, ಇಮಾಮ್ ಸಂತ್ರಸ್ತೆಯ ಮನೆಗೆ ಹೋಗಿ ತನ್ನ ಗಂಡನ ಬಗ್ಗೆ ಕೇಳುತ್ತಾ ಮನೆಗೆ ನುಗ್ಗಿದ. ಮಹಿಳೆ ಆತ ಪರಿಚಯಸ್ತ ಎಂದು ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾಳೆ. ಗುಲಾಂ ಗೌಸ್ ನೀರು ಕೇಳಿದ. ಮಹಿಳೆ ನೀರಿನಿಂದ ಹಿಂತಿರುಗಿದಾಗ, ಇಮಾಮ್ ಅವಳನ್ನು ಕೆಟ್ಟ ಉದ್ದೇಶದಿಂದ ಹಿಡಿದನು. ಸಂತ್ರಸ್ತೆಯು ವಿರೋಧಿಸಲು ಪ್ರಯತ್ನಿಸಿದಾಗ ಗುಲಾಂ ಗೌಸ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ನಂತರ ಮಹಿಳೆಯನ್ನು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸಂತ್ರಸ್ತೆ ತನ್ನ ಪತಿಗೆ ಘಟನೆಯನ್ನು ವಿವರಿಸಿದ್ದಾಳೆ.
ಸಂತ್ರಸ್ತೆಯ ಪತಿ ಇಮಾಮ್ ವಿರುದ್ಧ ಬಸದೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಗುಲಾಂ ಗೌಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ ತಕ್ಷಣ ಗುಲಾಂ ಗೌಸ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು‘ಭಾರತದಲ್ಲಿ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ’ ಎಂದು ಸುಳ್ಳು ವರದಿ ನೀಡುವ ಅಮೆರಿಕ ಈಗ ‘ಭಾರತದಲ್ಲಿ ಅಲ್ಪಸಂಖ್ಯಾತರಿಂದ ಇತರರು ಅಪಾಯದಲ್ಲಿದ್ದಾರೆ’ ಎಂದು ವರದಿ ಮಾಡುವ ಧೈರ್ಯ ತೋರಿಸುವುದೇ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !