
ವಾರಣಾಸಿ – ಉತ್ತರಪ್ರದೇಶದ ದೇವಸ್ತಾನಗಳು ಮತ್ತು ಟ್ರಸ್ಟ್ ತಮ್ಮ ಬಾಕಿಯನ್ನು ಪಡೆಯಲು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದಾರೆ, ಇದು ಕೇಳಿ ದುಃಖವಾಗಿದೆ, ಎಂದು ಅಲಹಾಬಾದ್ ಉಚ್ಛ ನ್ಯಾಯಾಲಯ ಹೇಳಿದೆ. ಉಚ್ಛನ್ಯಾಯಾಲಯವು ‘ಠಾಕೂರ್ ರಂಗಜಿ ಮಹಾರಾಜ ವಿರಾಜಮಾನ ಮಂದಿರ‘ದ ಪರವಾಗಿ ದಾಖಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ವಿಷಾದ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗ್ರವಾಲ ಅವರು ಈ ಸಂಬಂಧ ನಿರೀಕ್ಷಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಕಡೆ ಅಗತ್ಯ ಕ್ರಮಕ್ಕಾಗಿ ಕಳುಹಿಸಿದ್ದಾರೆ.
ಉಚ್ಛನ್ಯಾಯಾಲಯವು ಉತ್ತರಪ್ರದೇಶ ಕಂದಾಯ ಇಲಾಖೆಯ ಸಚಿವರಿಗೆ ಕಳೆದ ೪ ವರ್ಷಗಳಿಂದ ವೃಂದಾವನದಲ್ಲಿರುವ ಕನಿಷ್ಠ ೯ ದೇವಾಲಯಗಳ ವಾರ್ಷಿಕ ಬಾಕಿ ವಿಷಯಕ್ಕೆ ಸ್ಪಷ್ಠೀಕರಣ ಕೊಡಲು ಕರೆಸಿದೆ. ದೇವಸ್ತಾನಗಳ ನಿಧಿ ರಾಜ್ಯದ ಖಜಾನೆಯಿಂದ ದೇವಸ್ಥಾನಗಳ ಖಾತೆಗೆ ನೇರ ಜಮಾ ಆಗಬೇಕಿತ್ತು. ಅರ್ಜಿದಾರರು ನ್ಯಾಯಾಲಯಕ್ಕೆ, ೯ ದೇವಸ್ಥಾನಗಳಿಗೆ ೯ ಲಕ್ಷದ ೧೨ ಸಾವಿರದ ೫೦೭ ರೂಪಾಯಿಗಳ ವಾರ್ಷಿಕ ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ವಿಭಾಗಿಯ ಪೀಠವು, ಕಳೆದ ೪ ವರ್ಷಗಳಿಂದ ದೇವಸ್ಥಾನಗಳಿಗೆ ವಾರ್ಷಿಕ ಪರಿಹಾರವನ್ನು ಹಸ್ತಾಂತರಿಸಿಲ್ಲ. ಆದ್ದರಿಂದ ಉಚ್ಛ ನ್ಯಾಯಾಲಯವು ಅಗತ್ಯ ಕ್ರಮಕ್ಕಾಗಿ ಈ ಪ್ರಕರಣವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಬಳಿ ಕಳುಹಿಸಿದೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ