
ವಾರಣಾಸಿ – ಉತ್ತರಪ್ರದೇಶದ ದೇವಸ್ತಾನಗಳು ಮತ್ತು ಟ್ರಸ್ಟ್ ತಮ್ಮ ಬಾಕಿಯನ್ನು ಪಡೆಯಲು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದಾರೆ, ಇದು ಕೇಳಿ ದುಃಖವಾಗಿದೆ, ಎಂದು ಅಲಹಾಬಾದ್ ಉಚ್ಛ ನ್ಯಾಯಾಲಯ ಹೇಳಿದೆ. ಉಚ್ಛನ್ಯಾಯಾಲಯವು ‘ಠಾಕೂರ್ ರಂಗಜಿ ಮಹಾರಾಜ ವಿರಾಜಮಾನ ಮಂದಿರ‘ದ ಪರವಾಗಿ ದಾಖಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ವಿಷಾದ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗ್ರವಾಲ ಅವರು ಈ ಸಂಬಂಧ ನಿರೀಕ್ಷಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಕಡೆ ಅಗತ್ಯ ಕ್ರಮಕ್ಕಾಗಿ ಕಳುಹಿಸಿದ್ದಾರೆ.
ಉಚ್ಛನ್ಯಾಯಾಲಯವು ಉತ್ತರಪ್ರದೇಶ ಕಂದಾಯ ಇಲಾಖೆಯ ಸಚಿವರಿಗೆ ಕಳೆದ ೪ ವರ್ಷಗಳಿಂದ ವೃಂದಾವನದಲ್ಲಿರುವ ಕನಿಷ್ಠ ೯ ದೇವಾಲಯಗಳ ವಾರ್ಷಿಕ ಬಾಕಿ ವಿಷಯಕ್ಕೆ ಸ್ಪಷ್ಠೀಕರಣ ಕೊಡಲು ಕರೆಸಿದೆ. ದೇವಸ್ತಾನಗಳ ನಿಧಿ ರಾಜ್ಯದ ಖಜಾನೆಯಿಂದ ದೇವಸ್ಥಾನಗಳ ಖಾತೆಗೆ ನೇರ ಜಮಾ ಆಗಬೇಕಿತ್ತು. ಅರ್ಜಿದಾರರು ನ್ಯಾಯಾಲಯಕ್ಕೆ, ೯ ದೇವಸ್ಥಾನಗಳಿಗೆ ೯ ಲಕ್ಷದ ೧೨ ಸಾವಿರದ ೫೦೭ ರೂಪಾಯಿಗಳ ವಾರ್ಷಿಕ ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ವಿಭಾಗಿಯ ಪೀಠವು, ಕಳೆದ ೪ ವರ್ಷಗಳಿಂದ ದೇವಸ್ಥಾನಗಳಿಗೆ ವಾರ್ಷಿಕ ಪರಿಹಾರವನ್ನು ಹಸ್ತಾಂತರಿಸಿಲ್ಲ. ಆದ್ದರಿಂದ ಉಚ್ಛ ನ್ಯಾಯಾಲಯವು ಅಗತ್ಯ ಕ್ರಮಕ್ಕಾಗಿ ಈ ಪ್ರಕರಣವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಬಳಿ ಕಳುಹಿಸಿದೆ.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !