1939 ರಲ್ಲಿ, ಇಂದಿನ ಪಾಕಿಸ್ತಾನದ ಸುಕ್ಕೂರ್ ನಗರದಲ್ಲಿ 40 ಸಾವಿರ ಹಿಂದೂಗಳ ಹತ್ಯಾಕಾಂಡ ನಡೆದಿತ್ತು!

ಪಾಕಿಸ್ತಾನದಲ್ಲಿ ಹಿಂದೂಗಳಿಗಾಗಿ ಕೆಲಸ ಮಾಡುವ ಮುಂಬಯಿ ಮೂಲದ ಮಹೇಶ್ ವಾಸು ಅವರಿಂದ ವಿಡಿಯೋ ಪ್ರಸಾರ!

ಮುಂಬಯಿ – ಭಾರತ ಸ್ವತಂತ್ರವಾಗುವ ಮೊದಲು ನೊವಾಖಾಲಿ, ಮೋಪ್ಲಾ ಮುಂತಾದ ಸ್ಥಳಗಳಲ್ಲಿ ಹಿಂದೂಗಳ ದೊಡ್ಡ ಪ್ರಮಾಣದಲ್ಲಿ ಹತ್ಯಾಕಾಂಡ ನಡೆದಿರುವುದು ನಮಗೆ ತಿಳಿದಿದೆ. ಆದರೆ 1939 ರಲ್ಲಿ ಸಿಂಧ್ ಪ್ರಾಂತ್ಯದ ಸುಕ್ಕೂರ್‌ನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವು ಇನ್ನೂ ಭಯಾನಕವಾಗಿತ್ತು. ಈ ಹತ್ಯಾಕಾಂಡವನ್ನು ಉದ್ದೇಶಪೂರ್ವಕವಾಗಿ ಬಚ್ಚಿಡಲಾಗಿತ್ತು. ಸುಕ್ಕೂರ್ ನಗರವು ಈಗ ಪಾಕಿಸ್ತಾನದಲ್ಲಿದೆ.

ಹಿಂದೂಗಳ ಕೈಯಲ್ಲಿ ಅಧಿಕಾರವಿರುವ ಸಿಟ್ಟಿನಿಂದ ಹತ್ಯಾಕಾಂಡ

ಆ ಕಾಲದಲ್ಲಿ ಸುಕ್ಕೂರು ನಗರದ 70 ಸಾವಿರದಷ್ಟು ಜನಸಂಖ್ಯೆಲ್ಲಿ 40 ಸಾವಿರ ಹಿಂದೂಗಳಿದ್ದರು. ಹಿಂದೂ ಬಹುಸಂಖ್ಯಾತರಾಗಿದ್ದರಿಂದ ಅಲ್ಲಿಯ ಆಡಳಿತ ಮತ್ತು ಪ್ರಮುಖ ಇಲಾಖೆಗಳು ಸ್ವಾಭಾವಿಕವಾಗಿ ಹಿಂದೂಗಳ ಹಿಡಿತದಲ್ಲಿತ್ತು. ಇದು ಮುಸಲ್ಮಾನರಿಗೆ ಇಷ್ಟವಾಗಲಿಲ್ಲ. ಅವರು ಹತ್ಯೆ, ಭೂ ಅತಿಕ್ರಮಣ,, ಕಳ್ಳತನ, ವಂಚನೆ ಇತ್ಯಾದಿಗಳ ಇಸ್ಲಾಂನ ನೈಜ ಮುಖವಾಡದ ಮೂಲಕ ಹಿಂದೂಗಳ ನರಮೇಧವನ್ನು ಪ್ರಾರಂಭಿಸಿದರು. 13 ಅಕ್ಟೋಬರ್ 1939 ರಂದು ಸೈನ ಜಿ.ಎಂ. ಸೈಯದ್ ಅವರ ನೇತೃತ್ವದಲ್ಲಿ, ಮುಸ್ಲಿಮರು ಒಂದು ಕಟ್ಟಡವನ್ನು ಅದು ಮಶೀದಿಯಾಗಿದೆಯೆಂದು ಹೇಳಿ ಚಳುವಳಿಯನ್ನು ನಡೆಸಿತು.. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅದು ಮಸೀದಿ ಅಲ್ಲ ಎಂದು ಸ್ಪಷ್ಟ ಪಡಿಸಿತ್ತು., ಆದರೂ ಮುಸ್ಲಿಮರು ಅದರ ಮೇಲೆ ಹಿಡಿತ ಸಾಧಿಸಿದರು. ನಂತರ, ನವೆಂಬರ್ 1, 1939 ರಂದು, ಮುಸಲ್ಮಾನರು ಚಳವಳಿಯ ಹೆಸರಿನಲ್ಲಿ ಭಕ್ತ ಕವರ ರಾಮ ಹೆಸರಿನ ಸಂತನನ್ನು ಗುಂಡಿಕ್ಕಿ ಹತ್ಯೆಮಾಡಿದರು. 19 ನವೆಂಬರ್ 1939 ರಂದು ಸೈನ ಜಿ.ಎಂ. ಸೈಯದ್ ಮತ್ತು ಎಲ್ಲಾ ಮುಸ್ಲಿಂ ಚಳವಳಿಗಾರರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದರು. ಈ ಬಂಧನವನ್ನು ನಿಷೇಧಿಸಿ, ಸುಕ್ಕೂರಿನ ಮುಸ್ಲಿಮರು ನವೆಂಬರ್ 20 ರಿಂದ ಹಗಲಿನಲ್ಲಿಯೇ ಹಿಂದೂಗಳನ್ನು ಕೊಲ್ಲಲು ಪ್ರಾರಂಭಿಸಿದರು. ಒಂದೇ ದಿನದಲ್ಲಿ ಸಾವಿರಾರು ಹಿಂದೂಗಳ ಹತ್ಯೆಯಾಯಿತು. ಎರಡನೇ ದಿನದ ಹೊತ್ತಿಗೆ 40 ಸಾವಿರ ಹಿಂದೂಗಳಲ್ಲಿ 90 ಮಂದಿ ಮಾತ್ರ ಉಳಿದಿದ್ದರು. ಸುಕ್ಕೂರ್ ನಗರದ ಸಮೀಪದ ಗುಸಾರಜಿ ಗ್ರಾಮದ ಎಲ್ಲಾ ಹಿಂದೂಗಳನ್ನು ಕೊಲ್ಲಲಾಯಿತು. ಈ ಸಮಯದಲ್ಲಿ ಒಟ್ಟು 1ಸಾವಿರ 500 ಮುಸ್ಲಿಮರನ್ನು ಬಂಧಿಸಲಾಯಿತು. ಮುಸ್ಲಿಂ ಲೀಗ್ ಕಾರ್ಯದರ್ಶಿ ಪೀರ್ ಅಲಿ ಮಹಮ್ಮದ್ ರಾಶ್ದಿಯನ್ನು ಬಂಧಿಸಲಾಯಿತು. ಈ ಎಲ್ಲಾ ಮಾಹಿತಿಯನ್ನು ಮಹಮ್ಮದ್ ರಾಶ್ದಿ ಅವರೇ ಒಂದು ಸಂದರ್ಶನದಲ್ಲಿ ನೀಡಿದ್ದರು.

ಬರಚುಂಡಿ ದರ್ಗಾ ಹಿಂದೂಗಳ ಧಾರ್ಮಿಕ ಮತಾಂತರದ ಅಡ್ಡೆಯಾಗಿತ್ತು !

ಈ ಸಂಪೂರ್ಣ ಹತ್ಯಾಕಾಂಡದ ಮುಖ್ಯ ಸೂತ್ರಧಾರ ಸೈನ ಜಿಎಂ ಸಯ್ಯದ , ಅಬ್ದುಲ್ಲಾ ಹಾರುದ, ಪಿರ್ ಅಲಿ ಮೊಹಮ್ಮದ ರಾಶ್ದಿ, ಬರಚುಂಡಿ ದರ್ಗಾದ ಮೌಲ್ವಿ ಮತ್ತು ಜಕರಾನಿ ಬಲೋಚ ಗುಂಪಿನ ಗೂಂಡಾಗಳು ಆಗಿದ್ದರು. ಅದೇ ಬರಚುಂಡಿ ದರ್ಗಾ ಆಗಿದೆ. ಇಂದು ಅದರ ಮುಖ್ಯಸ್ಥ ಮಿಯಾ ಮಿಠ್ಠೂ ಆಗಿದ್ದಾನೆ. ಇವನ ನೇತೃತ್ವದಲ್ಲಿ, ಪಾಕಿಸ್ತಾನದಲ್ಲಿ ಸಾವಿರಾರು ಹಿಂದೂ ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ, ಮದುವೆ ಮತ್ತು ಹತ್ಯೆ ಮಾಡಲಾಗುತ್ತಿದೆ.