ಭಾಜಪ ಶಾಸಕ ಟಿ.ರಾಜಾಸಿಂಹ ಇವರ ಹಿಂದೂ ಜನ ಆಕ್ರೋಶ ಆಂದೋಲನಕ್ಕೆ ಪೊಲೀಸರಿಂದ ಅನುಮತಿ ನಿರಾಕರಣೆ

ಆಂದೋಲನ ರದ್ದು

ಮೀರಾ-ಭಾಯಿಂದರ (ಮುಂಬಯಿ) – ತೇಲಂಗಾಣಾದ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ಫೆಬ್ರುವರಿ 25 ರಂದು ನಡೆಯಲಿದ್ದ ಹಿಂದೂ ಜನ ಆಕ್ರೋಶ ಆಂದೋಲನವನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅದನ್ನು ರದ್ದುಗೊಳಿಸಲಾಗಿದೆ. ರಾಜಾ ಸಿಂಹ ಇವರ ಹಳೆಯ ಹೇಳಿಕೆಗಳ ಸಂದರ್ಭವನ್ನು ಉಲ್ಲೇಖಿಸುತ್ತಾ, ಮತ್ತು ಕಾನೂನು – ಸುವ್ಯವಸ್ಥೆ ಧಕ್ಕೆಯಾಗುವ ಸಾಧ್ಯತೆಯನ್ನು ಉಲ್ಲೇಖಿಸಿ ಪೊಲೀಸರು ಆಂದೋಲನಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಸಧ್ಯಕ್ಕೆ 12ನೇ ತರಗತಿ ಪರೀಕ್ಷೆ ನಡೆಯುತ್ತಿದೆ, ಹಾಗೆಯೇ ಆಂದೋಲನಕ್ಕೆ ಜನಸಂದಣಿ ಹೆಚ್ಚಾದರೆ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ’ ಎಂದು ಪೊಲೀಸರು ಈ ಸಂದರ್ಭದಲ್ಲಿ ಕಾರಣವನ್ನು ನೀಡಿದ್ದಾರೆ. ಆಂದೋಲನದ ಸಂಘಟಕರಿಗೆ ಪೊಲೀಸರು ಕಲಂ 149 ರ ಪ್ರಕಾರ ಕಾನೂನುಬಾಹಿರವಾಗಿ ಗುಂಪುಗೂಡದಂತೆ ಮತ್ತು ಪೊಲೀಸರ ಆದೇಶದ ಪಾಲನೆ ಮಾಡಲು ನೋಟಿಸ್ ಜಾರಿ ಮಾಡಿದ್ದಾರೆ. (ಇತರ ಧರ್ಮದವರು ಕಾರಣಗಳಿಲ್ಲದೇ ದೊಡ್ಡ ಸಂಖ್ಯೆಯಲ್ಲಿ ಒಂದುಗೂಡಿ ಹಿಂಸಾಚಾರ ನಡೆಸುತ್ತಾರೆ. ಅವರಿಗೆ ಈ ರೀತಿ ನೊಟೀಸ ನೀಡಲು ಪೊಲೀಸರಿಗೆ ಎಂದಿಗೂ ಧೈರ್ಯವಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕು-ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ಮಹಾರಾಷ್ಟ್ರ, ಹಿಂದೂ ಜನ ಆಕ್ರೋಶ ಆಂದೋಲನಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದು ಕೇವಲ ಹಿಂದೂ ದ್ವೇಷ!