Myanmar Thailand Earthquake : ಮ್ಯಾನ್ಮಾರ್‌ನಲ್ಲಿ 7.7 ರಿಕ್ಟರ್ ಮಾಪಕದ ಪ್ರಭಲ ಭೂಕಂಪ !

  • ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ಚೀನಾದಲ್ಲಿ ಕಂಪನ

  • 43 ಜನರು ಕುಸಿದ ಕಟ್ಟಡದ ಕೆಳಗೆ ಸಿಲುಕಿದರು

  • ಥೈಲ್ಯಾಂಡ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ನೇಪಿತಾ (ಮ್ಯಾನ್ಮಾರ್) – ಭಾರತದ ನೆರೆಯ ದೇಶಗಳಾದ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಭೂಕಂಪದ ಆಘಾತಗಳು ಸಂಭವಿಸಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ಆಗಿತ್ತು. ಇದರ ತೀವ್ರತೆ ಬಾಂಗ್ಲಾದೇಶ, ಚೀನಾ ಮತ್ತು ಭಾರತದ ರಾಜಧಾನಿ ದೆಹಲಿಯವರೆಗೂ ಅನುಭವಿಸಿತು. ಭೂಕಂಪದ ಕೇಂದ್ರವು ಮ್ಯಾನ್ಮಾರ್‌ನ ಮಂಡಲೆ ನಗರದ ಬಳಿ ಭೂಮಿಯ ಕೆಳಗೆ 10 ಕಿಲೋಮೀಟರ್ ಆಳದಲ್ಲಿತ್ತು.

1. ಭೂಕಂಪದ ಆಘಾತದ ನಂತರ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ನೂರಾರು ಜನರು ಕಟ್ಟಡಗಳಿಂದ ಹೊರಬಂದರು. ಎತ್ತರದ ಕಟ್ಟಡಗಳು ಮತ್ತು ಹೋಟೆಲ್‌ಗಳ ಜನರು ಹೊರಬಂದರು. ಭೂಕಂಪವು ಎಷ್ಟು ಶಕ್ತಿಯುತವಾಗಿತ್ತೆಂದರೆ, ಎತ್ತರದ ಕಟ್ಟಡಗಳಲ್ಲಿ ನಿರ್ಮಿಸಲಾದ ಕೊಳಗಳಿಂದ ನೀರು ಹರಿಯಲು ಪ್ರಾರಂಭಿಸಿತು. ಭೂಕಂಪದ ನಂತರ ಅನೇಕ ಕಟ್ಟಡಗಳಲ್ಲಿ ಬಲವಾದ ಕಂಪನಗಳು ಅನುಭವಿಸಿದ್ದರಿಂದ ಅವುಗಳನ್ನು ಖಾಲಿ ಮಾಡಲಾಯಿತು.

2. ಮ್ಯಾನ್ಮಾರ್‌ನಲ್ಲಿ ನದಿಯ ಮೇಲಿನ ದೊಡ್ಡ ಸೇತುವೆ ಕುಸಿದಿದೆ. ನಿರ್ಮಾಣ ಹಂತದಲ್ಲಿರುವ ಎತ್ತರದ ಕಟ್ಟಡವು ಸಂಪೂರ್ಣವಾಗಿ ಕುಸಿದಿದೆ. ಇದರಲ್ಲಿ 43 ಜನರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

3. ವ್ಯಾಪಕ ವಿನಾಶದಿಂದಾಗಿ ಥೈಲ್ಯಾಂಡ್‌ನ ಪ್ರಧಾನ ಮಂತ್ರಿ ಪಿಥೊಂಗ್‌ಟಾರ್ನ್ ಶಿನವಾತ್ರಾ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

4. ಮ್ಯಾನ್ಮಾರ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು, ಜೀವಹಾನಿ ಮತ್ತು ಆಸ್ತಿ ಹಾನಿಯ ಮಾಹಿತಿಯನ್ನು ನಾವು ಸಂಗ್ರಹಿಸುತ್ತಿದ್ದೇವೆ. ಇದುವರೆಗೆ ನಮ್ಮ ಬಳಿ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರಿಂದ ಚಿಂತೆ ವ್ಯಕ್ತ!

ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನ ಭೂಕಂಪದ ನಂತರದ ಪರಿಸ್ಥಿತಿಯ ಬಗ್ಗೆ ನಾನು ಚಿಂತೆ ವ್ಯಕ್ತಪಡಿಸುತ್ತೇನೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತವು ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ಧವಾಗಿದೆ. ಈ ಸಂಬಂಧ ನಮ್ಮ ಅಧಿಕಾರಿಗಳಿಗೆ ಸನ್ನದ್ಧರಾಗಿರಲು ಸೂಚಿಸಲಾಗಿದೆ. ಇದರೊಂದಿಗೆ ವಿದೇಶಾಂಗ ಸಚಿವಾಲಯಕ್ಕೆ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.