
ಭಕ್ತಿಸತ್ಸಂಗದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುದೇವರಿಗೆ ಮಾನಸ ಪ್ರದಕ್ಷಿಣೆ ಹಾಕಲು ಹೇಳಿದಾಗ ಗುರುದೇವರು ಈ ಕೃತಿಯನ್ನು ಮೊದಲೇ ಮಾಡಿಸಿಕೊಂಡ ಅರಿವಾಗಿ ಭಾವಾಶ್ರು ಬರುವುದು : ‘೧೬.೧೨.೨೦೨೧ ರಂದು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಭಕ್ತಿಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮಾನಸ ಪ್ರದಕ್ಷಿಣೆಗಳನ್ನು ಹಾಕಲು ಹೇಳಿದರು. ಇದನ್ನು ಕೇಳಿದ ನಂತರ ನನಗೆ ತುಂಬಾ ಭಾವಜಾಗೃತಿಯಾಗಿ ನನ್ನ ಕಣ್ಣುಗಳಲ್ಲಿ ಭಾವಾಶ್ರು ಬಂದವು; ಏಕೆಂದರೆ ಭಕ್ತಿಸತ್ಸಂಗದ ೪ ದಿನಗಳ ಮೊದಲು ನಾನು ನಾಮಜಪವನ್ನು ಮಾಡುತ್ತಿರುವಾಗ ಮಾನಸವಾಗಿ ವಿಷ್ಣುಸ್ವರೂಪ ಪರಾತ್ಪರ ಗುರು ಡಾಕ್ಟರ ಆಠವಲೆಯವರ ಚರಣಗಳನ್ನು ತೊಳೆದು ಅವುಗಳ ಮೇಲೆ ಹೂವುಗಳನ್ನು ಅರ್ಪಿಸುತ್ತಿದ್ದೆನು. ಅನಂತರ ಅವರ ಸುತ್ತಲೂ ಪ್ರದಕ್ಷಣೆಯನ್ನು ಹಾಕುತ್ತಿದ್ದೆನು. ಆ ಸಮಯದಲ್ಲಿ ‘ವಿಷ್ಣುಸ್ವರೂಪ ಪ.ಪೂ. ಗುರುದೇವರು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿದ್ದಾರೆ ಮತ್ತು ನಾನು ಅವರಿಗೆ ಪ್ರದಕ್ಷಿಣೆಯನ್ನು ಹಾಕುತ್ತಿದ್ದೇನೆ’, ಎಂಬ ಭಾವವನ್ನಿಟ್ಟು ನಾನು ಪ್ರಯತ್ನಿಸುತ್ತಿದ್ದೆನು. ‘ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಭಕ್ತಿಸತ್ಸಂಗದಲ್ಲಿ ಹೇಳಿದ ಕೃತಿಯನ್ನು ಗುರುದೇವರು ನನ್ನಿಂದ ಮೊದಲೇ ಮಾಡಿಸಿಕೊಂಡರು’, ಎಂದು ಎನಿಸಿ ಭಾವಜಾಗೃತವಾಯಿತು.
‘ಹೇ ಗುರುದೇವಾ, ನಿಮ್ಮ ಕೃಪೆ ಅಪಾರವಾಗಿದೆ. ನಾವು ನಿಮ್ಮನ್ನು ತಿಳಿದು ಕೊಳ್ಳಲು ಕಡಿಮೆ ಬೀಳುತ್ತೇವೆ. ದೇವಾ, ನೀವು ನನಗೆ ಈ ಅನುಭೂತಿಯನ್ನು ನೀಡಿ ಮತ್ತೊಮ್ಮೆ ತಮ್ಮ ಕೃಪೆಯ ಅನುಭೂತಿಯನ್ನು ನೀಡಿದ್ದೀರಿ. ಅದಕ್ಕಾಗಿ ತಮ್ಮ ಕೋಮಲ ಚರಣಗಳಲ್ಲಿ ಶತಕೋಟಿ ಕೃತಜ್ಞತೆಗಳು.’
– ಸೌ. ರಾಧಾ ಮಂಜುನಾಥ (ಆಧ್ಯಾತ್ಮಿಕ ಮಟ್ಟ ಶೇ. ೬೫, ೬೭ ವರ್ಷ), ಮಂಗಳೂರು, ಕರ್ನಾಟಕ. (೧೯.೧೨.೨೦೨೧)
ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು’ ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ !’
ಅನಂತಪುರದ (ಶಿವಮೊಗ್ಗ ಜಿಲ್ಲೆ) ಶ್ರೀ. ನಾಗಪ್ಪ ಅವರಿಗೆ ಬಂದ ವಿವಿಧ ಅನುಭೂತಿಗಳು !
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ರಾಮನಾಥಿ ಆಶ್ರಮದ ಶ್ರೀಮತಿ ಕ್ಷಮಾ ರಾಣೆ (ವಯಸ್ಸು ೭೫ ವರ್ಷಗಳು), ಸೌ. ವಿಜಯಲಕ್ಷ್ಮೀ ದಂಡಮುಡಿ (ವಯಸ್ಸು ೬೯ ವರ್ಷಗಳು) ಮತ್ತು ಡಾ. (ಸೌ.) ಸಂಗೀತಾ ಚೌಧರಿ (ವಯಸ್ಸು ೪೫ ವರ್ಷಗಳು) !
ದೆಹಲಿಯಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದದ ನಿಮಿತ್ತ ಸನಾತನ ಸಂಸ್ಥೆಯ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಅಗ್ನಿಹೋತ್ರ ಮಾಡುವಾಗ ದೇವರು ನೀಡಿದ ಸಾಕ್ಷಿ !
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಾಧಕರಿಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳು