ಪ್ರಧಾನಮಂತ್ರಿಗಳಿಗೆ ಬೆದರಿಕೆ ನೀಡುವ ವಿಡಿಯೋ ವೈರಲ್ !

‘ಮೋದಿ ಪಂಜಾಬ್ ಗೆ ಬಂದರೆ ಉಳಿಗಾಲವಿಲ್ಲ ! (ಅಂತೆ)

ನವ ದೆಹಲಿ – ಪಂಜಾಬದಿಂದ ಬಂದಿರುವ ಪ್ರತಿಭಟನಾಕಾರ ರೈತರು ದೆಹಲಿಯ ಹತ್ತಿರದ ಶಂಭೂ ಗಡಿಯಲ್ಲಿ ಸೇರಿದ್ದಾರೆ. ಸರಕಾರದಿಂದ ಅವರಿಗೆ ತಿಳಿಸಿ ಹೇಳುವುದು ಮತ್ತು ಅವರ ಅಭಿಪ್ರಾಯ ಕೇಳುವ ಪ್ರಯತ್ನ ನಡೆಯುತ್ತಿದೆ. ಇಂತಹದರಲ್ಲಿ ಶಂಭೂ ಗಡಿಯಿಂದ ರೈತರ ಒಂದು ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಅವರು ಪ್ರಧಾನಮಂತ್ರಿ ಮೋದಿ ಇವರಿಗೆ, ‘ಮೋದಿ ಏನಾದರೂ ಪಂಜಾಬಗೆ ಬಂದರೆ ನಾವು ಅವರಿಗೆ ಕಣ್ಣೀರು ತರಿಸುವೆವು. ಕಳೆದ ಸಮಯದಲ್ಲಿ ಅವರು ಫಿರೋಜಪುರದಿಂದ ಪಲಾಯನ ಮಾಡಿದ್ದರು, ಈಗ ಅವರು ಏನಾದರೂ ಬಂದರೆ ಅವರು ಬಿಡುಗಡೆ ಆಗುವುದಿಲ್ಲ ಎಂಬ ಪದದಲ್ಲಿ ಬೆದರಿಕೆ ನೀಡುತ್ತಿರುವುದು ಕಾಣುತ್ತಿದೆ.

೧. ‘ಸತ್ಯ ಖಬರ್’ ಈ ಯೂಟ್ಯೂಬ್ ಚಾನೆಲ್ ನಿಂದ ಫೆಬ್ರುವರಿ ೧೨ ರಂದು ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಸಿಖ ಜನರು ಖಲಿಸ್ತಾನಿ ಬೇಡಿಕೆ ಸಲ್ಲಿಸುತ್ತಿರುವುದು ಕಾಣುತ್ತಿದೆ.

ಸಿಖರಲ್ಲಿ ಒಬ್ಬರು, ”ನಾವು ಸಿಂಧೂ ಗಡಿಯಲ್ಲಿ ನಿಂತಿದ್ದೇವೆ, ನೀವು ಅಲ್ಲಿ ಬ್ಯಾರಿಕೆಡ್ಸ್ (ಜನರಿಗೆ ಮುಂದೆ ಹೋಗದಿರಲು ಸರಕಾರದಿಂದ ರಸ್ತೆ ತಡೆಯುವದಕ್ಕಾಗಿ ಒಂದು ರೀತಿಯ ಅಡ್ಡಗೋಡೆಗಳು) ಅಳವಡಿಸಿದ್ದಾರೆ. ಒಂದು ಕೆಲಸ ಮಾಡಿ; ಹರಿಯಾಣದ ಗಡಿ ಶಾಶ್ವತವಾಗಿ ಮುಚ್ಚು ಬಿಡಿ. ನಾವು ಪಾಕಿಸ್ತಾನದ ಜೊತೆಗೆ ಗಡಿಯನ್ನು ತೆರೆವುಗೊಳಿಸುವೆವು ನೀವು ನಮಗೆ ಭಾರತದಿಂದ ಬೇರೆ ಮಾಡಿದ್ದೀರಾ, ಆದ್ದರಿಂದ ಈಗ ನಾವು ಬೇರೆ ಆಗುವೆವು ಎಂದು ಹೇಳಿದ್ದಾನೆ.

೨. ಇನ್ನೋರ್ವ ರೈತನು, ”ಮೋದಿ ಸರಕಾರ ಪಂಜಾಬನನ್ನು ತನ್ನದು ಎಂದು ಒಪ್ಪುವುದಿಲ್ಲ. ನಾವು ಬೇರೆ ಖಲಿಸ್ತಾನ ನಿರ್ಮಾಣ ಮಾಡುವೆವು. ನಾವು ಪಾಕಿಸ್ತಾನ ಜೊತೆಗೆ ಕೈಜೋಡಿಸುವೆವು. ನಾವು ಗೋಡೆಗಳನ್ನು ಕಟ್ಟಿಲ್ಲ, ನೀವು ಕಟ್ಟಿದ್ದೀರಾ. ನೀವು ನಮ್ಮನ್ನು ಭಾರತದಿಂದ ಬೇರೆ ಮಾಡಿದ್ದೀರಾ. ಈಗ ನಾವು ಖಲಿಸ್ತಾನ ನಿರ್ಮಾಣ ಮಾಡುವೆವು.” ಎಂದು ಹೇಳಿದ್ದಾನೆ.

೩. ಇನ್ನೊಂದು ವಿಡಿಯೋದಲ್ಲಿ ಟ್ರ್ಯಾಕ್ಟರ್ ಮೇಲೆ ಸವಾರು ಆಗಿರುವ ನಿಹಂಗ ಸಿಖ್, ”ರೈತರ ಸೈನ್ಯ ಬರುತ್ತಿದೆ, ನಾವು ಯಾವುದೇ ಪರಿಸ್ಥಿತಿ ಇರಲಿ ದೆಹಲಿಯನ್ನು ಪ್ರವೇಶಿಸುವೆವು. ಎಂದು ಹೇಳುತ್ತಾನೆ.

ಸಂಪಾದಕೀಯ ನಿಲುವು

ರೈತರ ಹೆಸರಿನಲ್ಲಿ ಸಮಾಜಘಾತಕರು ದ್ವೇಷಪರಿಸುತ್ತಿದ್ದರೆ, ಆಗ ಸರಕಾರ ಇಂತಹವರ ವಿಚಾರಣೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !