|

ಪ್ರಯಾಗರಾಜ (ಉತ್ತರಪ್ರದೇಶ) – ವಾರಣಾಸಿಯ ಜ್ಞಾನವಾಪೀಯಲ್ಲಿರುವ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಆರಂಭಿಸಿರುವ ಪ್ರಕರಣದಲ್ಲಿ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯ ಮೇಲೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಸಮಯದಲ್ಲಿ ಜ್ಞಾನವಾಪಿ ವ್ಯವಸ್ಥೆ ಸಮಿತಿ ಮತ್ತು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ನ ನ್ಯಾಯವಾದಿಯಿಂದ ಅವರ ಪಕ್ಷ ಮಂಡಿಸಿದರು. ಈಗ ಫೆಬ್ರುವರಿ ೧೫ ರಂದು ಮತ್ತೊಮ್ಮೆ ವಿಚಾರಣೆ ನಡೆಯುವುದು. ಸಮಯದಲ್ಲಿ ಹಿಂದೂ ಪಕ್ಷದವರು ಅವರ ಪಕ್ಷ ಮಂಡಿಸುವರು. ಅಲಹಾಬಾದ್ ಉಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಪೂಜೆಯ ಆದೇಶಕ್ಕೆ ತಡೆಯಾಜ್ಞೆ ನೀಡಿಲ್ಲ.
ಮುಸಲ್ಮಾನ ಪಕ್ಷದವರು ತಮ್ಮ ಯುಕ್ತಿವಾದದಲ್ಲಿ, ವ್ಯಾಸ ನೆಲ ಮಾಳಿಗೆ ಎಂದಿಗೂ ಹಿಂದುಗಳ ವಶದಲ್ಲಿ ಇರಲಿಲ್ಲ. ನೆಲಮಳೆಗೆ ವಶದಲ್ಲಿರುವ ಹಿಂದುಗಳ ದಾವೇ ಸಂಪೂರ್ಣ ತಪ್ಪಾಗಿದೆ. ಬಾಬ್ರಿ ಪ್ರಕರಣದಲ್ಲಿ ನಿರ್ಮೋಹಿ ಅಖಾಡಾದ ವತಿಯಿಂದ ಓರ್ವ ವ್ಯಕ್ತಿ ನಿಂತು ಪೂಜೆ ಮಾಡುವ ಅಧಿಕಾರ ಕೇಳಿದ್ದನು; ಆದರೆ ನ್ಯಾಯಾಲಯವು ಅದನ್ನು ಒಪ್ಪಿರಲಿಲ್ಲ. (ಈ ಮೊಕದ್ದಮೆಯ ಕೊನೆಯಲ್ಲಿ ತೀರ್ಪು ಹಿಂದೂಗಳ ಪರ ಬಂದಿತ್ತು, ಇದನ್ನು ಮುಸಲ್ಮಾನ ಪಕ್ಷದವರು ಅನುಕೂಲತೆಯ ಪ್ರಕಾರ ಮರೆಯುತ್ತಾರೆ, ಇದನ್ನು ತಿಳಿಯಿರಿ ! – ಸಂಪಾದಕರು) ವ್ಯಾಸ ಕುಟುಂಬದವರು ಯಾವ ಅಧಿಕಾರದಿಂದ ಪೂಜೆ ಆರಂಭಿಸಲು ಬೇಡಿಕೆ ಸಲ್ಲಿಸಿದ್ದಾರೆ ? ಇದು ಜಿಲ್ಲಾ ನ್ಯಾಯಾಧೀಶರು ಕೇಳಬೇಕಿತ್ತು. ಜಿಲ್ಲಾ ನ್ಯಾಯಾಧೀಶರು ಅವರ ಅರ್ಜಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಬದಲು ನೇರ ಪೂಜೆ ಮಾಡಲು ಆದೇಶ ನೀಡಿದ್ದಾರೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !