ಹಿಂದೂ ಸ್ತ್ರೀಯರೇ, ರಥಸಪ್ತಮಿಯ ಅವಧಿಯಲ್ಲಿ ನಡೆಯುವ ಸಮಾರಂಭಗಳಲ್ಲಿ ಸನಾತನದ ಗ್ರಂಥ-ಕಿರುಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನ ನೀಡಿ !

೧೬.೨.೨೦೨೪ ರಂದು ರಥಸಪ್ತಮಿಯಿದೆ. ಈ ಅವಧಿಯಲ್ಲಿ ಎಲ್ಲೆಡೆ ಅರಿಶಿಣ-ಕುಂಕುಮದ ಸಮಾರಂಭ ಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಮುತ್ತೈದೆಯರು ಇತರ ಸ್ತ್ರೀಯರಿಗೆ ಪಾತ್ರೆ, ಪ್ಲಾಸ್ಟಿಕ್‌ ವಸ್ತು ಅಥವಾ ನಿತ್ಯೋಪ ಯೋಗಿ ಸಾಹಿತ್ಯಗಳನ್ನು ಬಾಗಿನವೆಂದು ಕೊಡುತ್ತಾರೆ. ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆಯೆಂದು ನೀಡುವುದು ಉತ್ತಮ.

೧. ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು ! : ಸನಾತನ ಸಂಸ್ಥೆಯು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿವಿಧ ವಿಷಯಗಳ ಗ್ರಂಥಗಳನ್ನು ಪ್ರಕಾಶಿಸಿದೆ. ಅವುಗಳಲ್ಲಿನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಬಾಗಿನವೆಂದು ನೀಡಿದರೆ ಅದರಲ್ಲಿರುವ ಅಮೂಲ್ಯ ಜ್ಞಾನವು ಹೆಚ್ಚೆಚ್ಚು ಜನರ ವರೆಗೆ ತಲುಪುವುದು. ಮಕರಸಂಕ್ರಾಂತಿಯ ನಿಮಿತ್ತ ಸನಾತನ ಸಂಸ್ಥೆಯ ಕಿರುಗ್ರಂಥಗಳಿಗೆ ಮುಂದಿನ ಆಕರ್ಷಕ ರಿಯಾಯಿತಿ ಲಭ್ಯವಿದೆ.

೨. ಸನಾತನ ಸಂಸ್ಥೆಯ ವಿವಿಧ ಸಾತ್ತ್ವಿಕ ಉತ್ಪಾದನೆಗಳನ್ನೂ (ಸಾಬೂನು ಊದುಬತ್ತಿ, ಅತ್ತರ, ಕರ್ಪೂರ, ಅಷ್ಟಗಂಧ ಮುಂತಾದ ವಸ್ತುಗಳನ್ನು) ಬಾಗಿನವೆಂದು ಕೊಡಬಹುದು.

೩. ದೇವತೆಗಳ ಮತ್ತು ಸಂತರ ‘ಲ್ಯಾಮಿನೆಟೆಡ್’ ಛಾಯಾಚಿತ್ರಗಳನ್ನು ಬಾಗಿನವೆಂದು ಕೊಡುವುದು : ಸನಾತನ ಸಂಸ್ಥೆಯು ಪ್ರಕಾಶನ ಮಾಡಿರುವ ವಿವಿಧ ದೇವತೆಗಳ ಚಿತ್ರಗಳನ್ನು ಮತ್ತು ಸಂತರ ಛಾಯಾಚಿತ್ರಗಳನ್ನೂ ಬಾಗಿನವೆಂದು ಕೊಡಬಹುದು.

೬-೮ ಇಂಚು ಆಕಾರದ ಈ ‘ಲ್ಯಾಮಿನೆಟೆಡ್’ ಚಿತ್ರಗಳು ಚೈತನ್ಯದಾಯಕ ಮತ್ತು ಸಾತ್ತ್ವಿಕವಾಗಿದ್ದು ಅವುಗಳ ಖರೀದಿಗೆ ವಿಶೇಷ ರಿಯಾಯಿತಿಯಿದೆ. ಪ್ರತಿಯೊಂದು ಚಿತ್ರದ ಅರ್ಪಣೆಮೌಲ್ಯ ೮ ರೂಪಾಯಿಗಳಿವೆ. ‘ಯಾವೆಲ್ಲ ದೇವತೆಗಳ ಚಿತ್ರಗಳು ಮತ್ತು ಸಂತರ ಚಿತ್ರಗಳು ಲಭ್ಯಗಳಿವೆ ?’,
ಎಂಬುದರ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ.

ಕಿರುಗ್ರಂಥಗಳ ಸಂಖ್ಯೆ ರಿಯಾಯಿತಿ (ಶೇ.)

೩ ಅ. ದೇವತೆಗಳ ಚಿತ್ರಗಳು : ವಿಠ್ಠಲ, ಶ್ರೀ ಗಣಪತಿ, ಶ್ರೀರಾಮ ಮತ್ತು ಶ್ರೀಕೃಷ್ಣ

೩ ಆ. ಸಂತರ ಛಾಯಾಚಿತ್ರಗಳು : ಸಂತ ಭಕ್ತರಾಜ ಮಹಾರಾಜ ಬಾಗಿನಕ್ಕಾಗಿ ಗ್ರಂಥ, ಕಿರುಗ್ರಂಥ, ಸಾತ್ತ್ವಿಕ ಉತ್ಪಾದನೆಗಳು, ಹಾಗೆಯೇ ದೇವತೆಗಳ ಚಿತ್ರಗಳು ಮತ್ತು ಸಂತರ ಛಾಯಾಚಿತ್ರಗಳ ಬೇಡಿಕೆಯನ್ನು ಸ್ಥಳೀಯ ಸಾಧಕರ ಅಥವಾ ಪತ್ರಿಕೆಯ ಮಾರಾಟಗಾರರ ಬಳಿ ಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ ೯೩೨೨೩೧೫೩೧೭ ಈ ಸಂಖ್ಯೆಯನ್ನು ಸಂಪರ್ಕಿಸಿ ಅಥವಾ sanatanshop.com ಈ ಜಾಲತಾಣಕ್ಕೆ ಭೇಟಿ ನೀಡಿ .