ಜ್ಞಾನವಪಿ ‘ಹುತಾತ್ಮ’ ಆಗಲು ಬಿಡುವುದಿಲ್ಲ ! – ಮೌಲಾನಾ ತೌಕೀರ್ ರಜಾ ಖಾನ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬಾಬ್ರಿ ಮಸೀದಿಯನ್ನು ‘ಹುತಾತ್ಮ’ ಮಾಡಲಾಗಿದೆ; ಆದರೆ ಜ್ಞಾನವಾಪಿ ಮಸೀದಿಯು ‘ಹುತಾತ್ಮ’ ವಾಗಲು ಬಿಡುವುದಿಲ್ಲ ಏಕೆಂದರೆ ಬಾಬ್ರಿಗೆ ಸಂಬಂಧಿಸಿದಂತೆ ಏನಾಯಿತೋ ಅದನ್ನೇ ಈಗಲೂ ಮಾಡಲಾಗುತ್ತಿದೆ. ಬಾಬ್ರಿ ಮತ್ತು ಜ್ಞಾನವಾಪಿ ಸೇರಿದಂತೆ 3 ಸಾವಿರ ಮಸೀದಿಗಳ ಪಟ್ಟಿ ಮಾಡಲಾಗಿದೆ ಎಂದು ಇತ್ತೆಹಾದ್ ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಖಾನ್ ಹುರುಳಿಲ್ಲದ ಆರೋಪ ಮಾಡಿದ್ದಾರೆ. ‘ಭಾರತೀಯ ಪುರಾತತ್ವ ಇಲಾಖೆ, ನ್ಯಾಯಾಲಯ ಹಾಗೂ ಸರಕಾರದ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ದೇಶದಲ್ಲಿ ಪ್ರತಿದಿನ ಮಸೀದಿಗಳ ಮೇಲೆ ಬುಲ್ಡೋಜರ್‌ಗಳನ್ನು ಓಡಿಸಲಾಗುತ್ತಿದೆ. ಆದ್ದರಿಂದ ನಮ್ಮ ದೇಶದ ಕಾನೂನು ಅಪಕೀರ್ತಿಯಾಗುತ್ತಿದೆ’, ಎಂದೂ ಸಹ ಖಾನ್ ಇವರು ಹೇಳಿದ್ದಾರೆ. (ದೇಶದ ಕಾನೂನು ಮುಸ್ಲಿಮರ ಪರವಾಗಿದ್ದರೆ ಅದು ಯೋಗ್ಯ ಮತ್ತು ಇಲ್ಲದಿದ್ದರೆ ಅದು ಅಯೋಗ್ಯ ಎಂದು ರಜಾ ಹೇಳುತ್ತಿದ್ದಾರೆ ಎಂಬುದು ಗಮನಿಸಿ ! – ಸಂಪಾದಕರು)

(ಸೌಜನ್ಯ – News18 Punjab/Haryana/Himachal)

ಸಂಪಾದಕೀಯ ನಿಲುವು

ಜ್ಞಾನವಾಪಿ ಸ್ಥಳದಲ್ಲಿ ಮೊದಲು ಭವ್ಯವಾದ ಶಿವನ ದೇವಾಲಯವಿದ್ದು ಅದನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಇದು ಇತಿಹಾಸ ಮತ್ತು ಇದು ವರ್ತಮಾನದಲ್ಲಿಯೂ ಸಹ ಸ್ಪಷ್ಟವಾಗಿದೆ. ಆದರೂ ಮುಸಲ್ಮಾನ ಜ್ಞಾನವಾಪಿಯನ್ನು ಹಿಂದುಗಳಿಗೆ ಒಪ್ಪಿಸುವ ಬದಲು ಇಂತಹ ಭಾಷೆಯನ್ನು ಬಳಸಿದರೆ ಅವರಿಗೆ ಈ ದೇಶದಲ್ಲಿ ಇರುವ ಅಧಿಕಾರವಿಲ್ಲ ಎಂದು ಯಾರಾದರೂ ಹೇಳುತ್ತಾರೆ !