ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಇವರ ಹೇಳಿಕೆ !

ಬೆಂಗಳೂರು – ನಾನು ಸಂವಿಧಾನದ ಭಕ್ತನಾಗಿದ್ದೇನೆ. ನನಗೆ ರಾಮನ ಮೇಲೆ ಭಕ್ತಿ ಇಲ್ಲ. ಆದ್ದರಿಂದ ನಾನು ಶ್ರೀರಾಮ ಮಂದಿರಕ್ಕೆ ಹೋಗುತ್ತಿಲ್ಲ. ಯಾರಾದರೂ ಕರೆದರೆ ದೇವಸ್ಥಾನದ ವಾಸ್ತು ಶಿಲ್ಪ ನೋಡಲು ಅಯೋಧ್ಯೆಗೆ ಹೋಗುವೆ, ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಇವರು ಹೇಳಿಕೆ ನೀಡಿದರು. ಭಾಜಪ ೩ ಕೋಟಿ ಜನರಿಗೆ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಿದೆ, ಈ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಪ್ರಿಯಾಂಕ್ ಖರ್ಗೆ ಮಾತು ಮುಂದುವರೆಸಿ, ಕಾಂಗ್ರೆಸ್ ಶ್ರೀರಾಮ ಮಂದಿರಕ್ಕೆ ವಿರೋಧಿಸಿಲ್ಲ. ಶಂಕರಾಚಾರ್ಯರು ವಿರೋಧಿಸಿದರು. (ಯಾವುದೇ ಶಂಕರಾಚಾರ್ಯರು ಶ್ರೀರಾಮ ಮಂದಿರವನ್ನು ವಿರೋಧಿಸಿಲ್ಲ, ಖರ್ಗೆ ಇವರು ಉದ್ದೇಶಪೂರ್ವಕವಾಗಿ ಸುಳ್ಳು ಮಾತನಾಡುತ್ತಿದ್ದಾರೆ – ಸಂಪಾದಕರು) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಾಧು ಸಂತರು ಮಾಡಬೇಕು. ‘ಅಪೂರ್ಣ ಮಂದಿರದ ಉದ್ಘಾಟನೆ ಆಗಬಾರದೆಂದು’ ಶಂಕರಾಚಾರ್ಯರು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಏಕೆ ಉತ್ತರ ನೀಡುತ್ತಿದೆ ? ಅಧಿಕಾರದಲ್ಲಿರುವ ಭಾಜಪದವರು ಇರುವರು ಅಲ್ಲವೇ ? ಅವರು ಉತ್ತರ ನೀಡಬೇಕು. ನಮ್ಮ ಕಾರ್ಯಕರ್ತರು ಅವರ ಇಚ್ಛೆಯ ಪ್ರಕಾರ ಮಾಡಬೇಕೆಂದು ಮುಖ್ಯಸ್ಥರು ಹೇಳಿದ್ದಾರೆ. ನಾನು ಬುದ್ಧ ಮತ್ತು ಬಸವರಾಜ ಸ್ವಾಮಿಯ ತತ್ವಗಳನ್ನು ಪಾಲಿಸುತ್ತೇನೆ ಎಂದು ಹೇಳಿದರು.
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !