ಹೀಗೆ ಅಲಂಕಾರಗೊಂಡಿತು ಅಯೋಧ್ಯಾನಗರ !

ಅಯ್ಯೋದ್ಯೆಯಿಂದ ‘ಸನಾತನ ಪ್ರಭಾತ’ದ ವಿಶೇಷ ವರದಿ

ಶ್ರೀರಾಮ ಮಂದಿರದಲ್ಲಿ ವಿಶೇಷ ಗಣ್ಯರಿಗಾಗಿರುವ ದ್ವಾರ

ಅಯೋಧ್ಯೆ, ಜನವರಿ ೨೩ (ವಾರ್ತೆ.) – ಶ್ರೀ ರಾಮಲಲ್ಲಾ ವಿರಾಜಮಾನವಾಗಿದ್ದು ಅವನ ಅಲೌಕಿಕ ದರ್ಶನಕ್ಕಾಗಿ ಲಕ್ಷಾಂತರ ಹಿಂದುಗಳು ಅಯೋಧ್ಯೆಗೆ ಬರುತ್ತಿದ್ದಾರೆ. ರಾಮಮಯವಾಗಿರುವ ಅನುಭೂತಿ ಅವರಿಗೆ ಬೇಕು ಎಂದು ಸಂಪೂರ್ಣ ಅಯೋಧ್ಯಾನಗರ ದೈವಿ ಘಟನೆಗಳಿಂದ ಹಾಗೂ ಅತ್ಯಂತ ಸುಂದರ ರೀತಿಯಲ್ಲಿ ಅಲಂಕರಿಸಿದ್ದರು.

ಅಯೋಧ್ಯೆ ಮುಖ್ಯ ಮಾರ್ಗದಲ್ಲಿನ ಮರಗಳ ಮೇಲೆ ಪಕ್ಷಿಗಳ ಗೂಡಿನಂತೆ ಇರುವ ದೀಪಗಳು

ಪಕ್ಷಿಗಳ ಗೂಡಿನಂತೆ ಮರದ ಮೇಲೆ ದೀಪದ ಅಲಂಕಾರ !

ಮರದ ಮೇಲೆ ಯಾವ ರೀತಿ ಗೀಜಗ ಗೂಡು ಕಟ್ಟುತ್ತದೆ, ಅದೇ ರೀತಿ ಅಯೋಧ್ಯೆನಗರದ ಮುಖ್ಯ ಮಾರ್ಗಗಳಲ್ಲಿ ಮರಗಳ ಮೇಲೆ ಆಕರ್ಷಕ ರೀತಿಯಲ್ಲಿ ದೀಪಗಳ ಅಲಂಕಾರ ಮಾಡಲಾಗಿತ್ತು. ರಾತ್ರಿಯ ಸಮಯದಲ್ಲಿ ಮರದ ಮೇಲಿನ ದೀಪಗಳು ರಸ್ತೆಯ ಮೇಲೆ ಬೆಳಕು ಚೆಲ್ಲುತ್ತಿದ್ದವು ಆದ್ದರಿಂದ ಈ ದೀಪಗಳಿಂದ ಮರಗಳು ಆಕರ್ಷಕವಾಗಿ ಕಾಣುತ್ತಿದ್ದವು. ಅಯೋಧ್ಯೆನಗರದ ಮುಖ್ಯಮಾರ್ಗದಲ್ಲಿ ಮರದ ಮೇಲೆ ಈ ರೀತಿಯಲ್ಲಿ ದೀಪಗಳನ್ನು ಹಾಕಿದ್ದರು.

ಅಯೋಧ್ಯಾನಗರದಲ್ಲಿನ ಮುಖ್ಯಮಾರ್ಗದಲ್ಲಿನ ಪಾದಜಾರಿ (ಫುಟ್ಪಾತ್) ಮಾರ್ಗದ ಮೇಲೆ ಸಾಕಾರಗೊಂಡಿರುವ ರಾಮಾಯಣದಲ್ಲಿನ ಘಟನೆಗಳು

ಪ್ರದಕ್ಷಿಣೆಯ ಮಾರ್ಗದಲ್ಲಿ ಸಾಕಾರಗೊಂಡಿರುವ ರಾಮಾಯಣದ ಗಮನ ಸೆಳೆಯುವ ದೃಶ್ಯಗಳು

ಅಯೋಧ್ಯೆಯಲ್ಲಿನ ಮುಖ್ಯಮಾರ್ಗದಲ್ಲಿನ ಪಾದಚಾರಿ ಮಾರ್ಗದ ಗೋಡೆಗಳ ಮೇಲೆ ಶಿಲ್ಪಗಳಂತೆ ರಾಮಾಯಣದಲ್ಲಿನ ಘಟನೆಗಳು ಸಾಕಾರಗೊಂಡಿದ್ದವು. ಈ ಚಿತ್ರಗಳು ಬಹಳ ಆಕರ್ಷಕವಾಗಿದ್ದು ಆ ಚಿತ್ರಗಳನ್ನು ನೋಡಿದರೆ ರಾಮಾಯಣದ ಕಥೆ ಕಣ್ಣು ಮುಂದೆ ಬರುತ್ತಿತ್ತು. ಇದರಲ್ಲಿ ಹನುಮಂತನು ಸಮುದ್ರದ ಮೇಲಿಂದ ಹಾರುವುದು, ಸೀತಾಪಹರಣ, ಶ್ರೀ ರಾಮನು ಮಾಡಿರುವ ಧನುಷ್ಯ ಭಂಜನ ಮುಂತಾದ ಚಿತ್ರಗಳ ಮೂಲಕ ರಾಮಾಯಣ ಸಾಕಾರಗೊಂಡಿತ್ತು.

ಶ್ರೀರಾಮ ಮಂದಿರದ ಕಡೆಗೆ ಹೋಗುವ ಮುಖ್ಯ ಪ್ರವೇಶ ದ್ವಾರ

ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಿರುವ ಭವ್ಯ ಪ್ರವೇಶ ದ್ವಾರ !

ಶ್ರೀರಾಮ ಮಂದಿರದ ಕಡೆಗೆ ಹೋಗುವ ಎಲ್ಲಾ ಪ್ರವೇಶದ್ವಾರಗಳು ಆಕರ್ಷಕ ರೀತಿಯಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದರು. ಇದರಲ್ಲಿ ಮುಖ್ಯ ಪ್ರವೇಶ ದ್ವಾರ ಭವ್ಯವಾಗಿದ್ದು ಅಲ್ಲಿ ಭಕ್ತರನ್ನು ಸ್ವಾಗತಿಸಲಾಯಿತು. ಇತರ ಒಂದು ಪ್ರವೇಶ ದ್ವಾರದಲ್ಲಿ ಒಂದು ಬದಿಗೆ ೫ ಹಾಗೂ ಇನ್ನೊಂದು ಬದಿಗೆ ೫ ಆನೆಗಳ ೧೦ ಮೂರ್ತಿಗಳು ಇಟ್ಟಿದ್ದರು. ಎಲ್ಲಾ ಮೂರ್ತಿಗಳು ಹೂವಿನಿಂದ ಅಲಂಕರಿಸಲಾಗಿತ್ತು.