|

ತಿರುಪತಿ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ‘ಇಸ್ರೋ’, ಮೊದಲ ಬಾರಿಗೆ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಜನವರಿ 1, 2024 ರಂದು ಉಡಾವಣೆ ಮಾಡಲಿದೆ. ಈ ಉಪಗ್ರಹವು ‘ಕೃಷ್ಣ ವಿವರ’ (‘ಬ್ಲ್ಯಾಕ್ ಹೋಲ್’) ಗೆ ಸಂಬಂಧಿಸಿದ ಸಂಶೋಧನೆ ನಡೆಸಲಿದೆ. ಇದರೊಂದಿಗೆ ಇತರ ಪ್ರಮುಖ ಭ್ರಹ್ಮಾಂಡ ಸೂತ್ರಗಳ ಸಂಶೋಧನೆಯು ಈ ಮೂಲಕ ನಡೆಯಲಿದೆ. ಈ ಮಿಷನ್ನ ಹೆಸರು ‘ಪಿ.ಎಸ್.ಎಲ್.ವಿ.-ಸಿ58’ ಅಥವಾ ‘ಎಕ್ಸ್ಪೋಸ್ಯಾಟ್ ಮಿಷನ್’ ಆಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗಾಗಿ, ಇಸ್ರೋ ವಿಜ್ಞಾನಿಗಳಾದ ಅಮಿತ್ ಕುಮಾರ್ ಪಾತ್ರಾ, ವಿಕ್ಟರ್ ಜೋಸೆಫ್, ಯಶೋದಾ ಮತ್ತು ಶ್ರೀನಿವಾಸ್ ಅವರು ತಿರುಮಲ-ತಿರುಪತಿಗೆ ಆಗಮಿಸಿ ತಿರುಪತಿ ಬಾಲಾಜಿಯ ಆಶೀರ್ವಾದ ಪಡೆದರು. ‘ಎಕ್ಸ್ಪೋಸ್ಯಾಟ್’ ಅನ್ನು ಜನವರಿ 1 ರಂದು ಬೆಳಿಗ್ಗೆ 9:10 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು.
🚀 PSLV-C58/ 🛰️ XPoSat Mission:
The launch of the X-Ray Polarimeter Satellite (XPoSat) is set for January 1, 2024, at 09:10 Hrs. IST from the first launch-pad, SDSC-SHAR, Sriharikota.https://t.co/gWMWX8N6IvThe launch can be viewed LIVE
from 08:40 Hrs. IST on
YouTube:… pic.twitter.com/g4tUArJ0Ea— ISRO (@isro) December 31, 2023
ಈ ಅಭಿಯಾನದ ಉದ್ದೇಶ!
ವಿವಿಧ ಆಕಾಶ ಮೂಲಗಳಿಂದ ಬಾಹ್ಯಾಕಾಶದಲ್ಲಿ ಹೊರಸೂಸುವ ‘ಎಕ್ಸ್-ರೇ’ ಕಿರಣಗಳ ಧ್ರುವೀಕರಣವನ್ನು ಈ ಕಾರ್ಯಾಚರಣೆಯ ಮೂಲಕ ಅಳೆಯಲಾಗುತ್ತದೆ. ಇದು ಇಸ್ರೋದ ಮೊದಲ ಮಿಷನ್ ಆಗಿದೆ.
ಈ ಮಿಷನ್ ಎಕ್ಸ್-ರೇ ಕಿರಣಗಳ ತೀವ್ರತೆ ಮತ್ತು ಕೋನದ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ, ಇದು ಬ್ರಹ್ಮಾಂಡದ ಗ್ರಹಗಳ ವಿಕಿರಣದ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ.
ಇದಕ್ಕಾಗಿ ಈ ಉಪಗ್ರಹದಿಂದ ಎರಡು ‘ಪೇಲೋಡ್’ (ಯಂತ್ರ)ಗಳನ್ನು ಕಳುಹಿಸಲಾಗುವುದು. ಇವುಗಳಲ್ಲಿ ‘ಪೊಲಿಕ್ಸ್'(ಎಕ್ಸ್-ಕಿರಣಗಳಲ್ಲಿನ ‘ಪೋಲಾರಿಮೀಟರ್’ ಉಪಕರಣ) ಮತ್ತು ‘ಎಕ್ಸಸ್ಪೆಕ್ಟ’ (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಎಂಡ್ ಟೈಮಿಂಗ್) ಸೇರಿವೆ. ‘ಪೋಲಿಕ್ಸ್’ ಅನ್ನು ‘ರಮಣ ರಿಸರ್ಚ್ ಇನ್ಸ್ಟಿಟ್ಯೂಟ್’ ನಿರ್ಮಿಸಿದರೆ, ‘ಎಕ್ಸ್ಪೆಕ್ಟ್’ ಅನ್ನು ‘ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ ಮಾಡಲಾಗಿದೆ.
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್