ಇಂದು ಪ್ರಧಾನಮಂತ್ರಿ ಮೋದಿಯವರಿಂದ ಉದ್ಘಾಟನೆ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿ ಕಟ್ಟಲಾದ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗಿದೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್’ ಎಂದು ಅದರ ನಾಮಕರಣ ಮಾಡಲಾಗಿದೆ. ಪ್ರಧಾನಮಂತ್ರಿ ಮೋದಿ ಇವರು ಇಂದು ಅಯೋಧ್ಯೆಗೆ ಹೋಗಿ ಈ ವಿಮಾನ ನಿಲ್ದಾಣದ ಉದ್ಘಾಟನೆ ಮಾಡುವವರು. ಇದಲ್ಲದೆ ಅಯೋಧ್ಯೆಯ ಪುನರ್ವಿಕಾಸ ರೈಲುನಿಲ್ದಾಣದ ಉದ್ಘಾಟನೆ ಕೂಡ ಪ್ರಧಾನಮಂತ್ರಿ ಮೋದಿ ಇವರಿಂದ ಆಗಲಿದೆ. ಪ್ರಧಾನಮಂತ್ರಿ ಮೋದಿ ಸಮಯದಲ್ಲಿ ಹೊಸದಾದ ಅಮೃತ ಭಾರತ ಮತ್ತು ಒಂದೇ ಭಾರತ ರೈಲಿಗೆ ಹಸಿರು ಬಾವುಟ ತೋರಿಸುವರು. ಅವರು ರಾಜ್ಯದಲ್ಲಿನ ೧೫ ಸಾವಿರದ ೭೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿ ಅಡಿಪಾಯ ಇಡುವರು.
ಅಯೋಧ್ಯೆಯಲ್ಲಿನ ಅತ್ಯಾಧುನಿಕ ವಿಮಾನ ನಿಲ್ದಾಣದ ಮೊದಲನೆಯ ಹಂತ ೧ ಸಾವಿರದ ೪೫೦ ಕೋಟಿ ರೂಪಾಯಿಗಿಂತಲೂ ಹೆಚ್ಚು ಖರ್ಚು ಮಾಡಿ ಅಭಿವೃದ್ಧಿಗೊಳಿಸಲಾಗಿದೆ. ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡದ ಕ್ಷೇತ್ರಫಲ ೬ ಸಾವಿರದ ೫೦೦ ಸ್ಕ್ವಯರ್ ಫೀಟ್ ಆಗಿದೆ, ಅದು ಪ್ರತಿ ವರ್ಷ ಸುಮಾರು ೧೦ ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವುದಕ್ಕಾಗಿ ಸಜ್ಜಾಗಿದೆ. ಟರ್ಮಿನಲ್ ಕಟ್ಟಡದ ಮುಂದಿನ ಭಾಗ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಹಾಗೆ ಕಟ್ಟಲಾಗಿದೆ. ಟರ್ಮಿನಲ್ ಕಟ್ಟಡದ ಒಳಗಿನ ಭಾಗದಲ್ಲಿ ಸ್ಥಳೀಯ ಕಲೆ, ಚಿತ್ರಗಳು ಮತ್ತು ಭಗವಾನ್ ಶ್ರೀ ರಾಮನ ಜೀವನದ ದೃಶ್ಯಗಳಿಂದ ಅಲಂಕರಿಸಲಾಗಿದೆ.
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ