ಗದ್ದಲವನ್ನುಂಟು ಮಾಡುವ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಿ !

೧. ಗದ್ದಲವನ್ನುಂಟು ಮಾಡುವ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಿ !

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲವುಂಟು ಮಾಡಿದರೆಂದು ೧೪೧ ಸಂಸದರನ್ನು ವಜಾಗೊಳಿಸಲಾಗಿದೆ.

೨. ಉದ್ರೇಕಕಾರಿ ಮಾತನಾಡುವ ಮತಾಂಧರು !

‘ನಾವು ಬಾಬರಿ ಮಸೀದಿಯ ಬಗ್ಗೆ ತಾಳ್ಮೆಯಿಂದ ಇದ್ದೆವು; ಆದರೆ ಜ್ಞಾನವಾಪಿ ಕುರಿತು ಬೀದಿಗಿಳಿದು ಹೋರಾಟ ಮಾಡುವೆವು’ ಎಂದು ‘ಇತ್ತೆಹಾದ್‌-ಎ-ಮಿಲ್ಲತ್‌ ಕೌನ್ಸಿಲ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ತೌಕೀರ್‌ ರಝಾ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

೩. ಸನಾತನ ಧರ್ಮವನ್ನು ನಾಶ ಮಾಡಲು ಯತ್ನಿಸುತ್ತಿರುವ ದ್ರಮುಕರು ಭ್ರಷ್ಟಾಚಾರಿಗಳಾಗಿದ್ದಾರೆ

ಮದ್ರಾಸ್‌ ಉಚ್ಚ ನ್ಯಾಯಾಲಯವು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಮತ್ತು ದ್ರಮುಕ ನಾಯಕ ಕೆ. ಪೊನಮುಡಿ ಮತ್ತು ಅವರ ಪತ್ನಿ ಪಿ. ವಿಶಾಲಾಕ್ಷಿ ಅವರಿಗೆ ಅಕ್ರಮ ಸಂಪತ್ತು ಹೊಂದಿದ ಪ್ರಕರಣದಲ್ಲಿ ೩ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

೪. ಭಾರತದಲ್ಲಿ ಹೀಗಾಗುವ ಮುನ್ನ ಜಾಗೃತರಾಗಿರಿ !

೧೯೮೦ ರ ದಶಕದಲ್ಲಿ, ಅಫ್ಘಾನಿಸ್ತಾನದಲ್ಲಿ ಸುಮಾರು ೫ ಲಕ್ಷ ಸಿಕ್ಖರಿದ್ದರು; ಆದರೆ ಇಲ್ಲಿಯವರೆಗೆ ನಡೆದ ಹಿಂಸಾಚಾರದ ಘಟನೆಗಳಿಂದಾಗಿ ಸಿಕ್ಖರು ಪಲಾಯನ ಮಾಡಬೇಕಾಯಿತು, ಅಫ್ಘಾನಿಸ್ತಾನದಲ್ಲಿ ಕೇವಲ ೫೦ ಸಿಕ್ಖರು ಉಳಿದಿದ್ದಾರೆ ಮತ್ತು ೨೦ ಹಿಂದೂಗಳು ಉಳಿದಿದ್ದಾರೆ.

೫. ದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀಮದ್‌ ಭಗವದ್ಗೀತೆಯನ್ನು ಕಲಿಸಿ !

ಗುಜರಾತ್‌ನ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ಅವಧಿಯಿಂದ ೬ ರಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀಮದ್‌ ಭಗವದ್ಗೀತೆಯನ್ನು ಕಲಿಸಲಾಗುವುದು ಎಂದು ಗುಜರಾತನ ಶಿಕ್ಷಣ ರಾಜ್ಯ ಸಚಿವರು ತಿಳಿಸಿದ್ದಾರೆ.