ಈ ಜಗತ್ತು ದುರ್ಯೋಧನ ಮತ್ತು ದುಶ್ಶಾಸನರದ್ದಾಗಿದೆ ! – ಉಚ್ಚ ನ್ಯಾಯಾಲಯ

  •  ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣದ ಬಗ್ಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಆಕ್ರೋಶ 

  • ಘಟನೆಯ ಸ್ಥಳಕ್ಕೆ 2 ಗಂಟೆಗಳ ಬಳಿಕ ತಲುಪುವ ಪೊಲೀಸರಿಗೆ ನ್ಯಾಯಾಲಯದಿಂದ ಛೀಮಾರಿ!

ಬೆಂಗಳೂರು – ಬೆಳಗಾವಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳನ್ನು ಥಳಿಸಿ ನಂತರ ಅವಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಯಿತು. ಕರ್ನಾಟಕ ಉಚ್ಚನ್ಯಾಯಾಲಯವು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡು ನಡೆಸಿದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಕರ್ನಾಟಕ ಸರ್ಕಾರ ಮತ್ತು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿತು. ಇಂತಹ ಘಟನೆಗಳು ಮಹಾಭಾರತದಲ್ಲಿಯೂ ನಡೆದಿರಲಿಲ್ಲ. ದ್ರೌಪದಿಗಾಗಿ ಭಗವಾನ ಶ್ರೀಕೃಷ್ಣ ಧಾವಿಸಿ ಬಂದಿದ್ದನು: ಆದರೆ ಸಧ್ಯದ ಆಧುನಿಕ ಯುಗದಲ್ಲಿ ಅವಳ ಸಹಾಯಕ್ಕಾಗಿ ಯಾರೂ ಧಾವಿಸಿ ಬಂದಿಲ್ಲ. ದುರದೃಷ್ಟವಶಾತ್ ಈ ಜಗತ್ತು ದುರ್ಯೋಧನ ಮತ್ತು ದುಶ್ಶಾಸನರದ್ದಾಗಿದೆ. ಆ ಮಹಿಳೆಗೆ ಆ ರಾಕ್ಷಸರ ಕರುಣೆಯ ಮೇಲೆ ಬಿಡಲಾಗಿತ್ತು. ಆ ಮಹಿಳೆಗೆ ಇದೆಲ್ಲದರಿಂದ ಎಂತಹ ಆಘಾತವಾಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆರೋಪಿಗಳನ್ನು ಮನುಷ್ಯರು ಎಂದು ಕರೆಯಲು ಕೂಡ ನಮಗೆ ನಾಚಿಕೆಯಾಗುತ್ತಿದೆ. ಯಾರಾದರೂ ಇಷ್ಟು ಕ್ರೂರಿಯಾಗಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ನ್ಯಾಯಾಲಯವು ಕೇಳಿತು.

ನ್ಯಾಯಾಲಯವು ಈ ಸಮಯದಲ್ಲಿ ` ಪೊಲೀಸರು ಘಟನಾ ಸ್ಥಳಕ್ಕೆ ತಲುಪಲು 2 ಗಂಟೆ ಏಕೆ ಬೇಕಾಯಿತು? ಇಷ್ಟು ಕೀಳಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವಾಗ ಪೊಲೀಸರು ಎಲ್ಲಿದ್ದರು?’ ಎನ್ನುವಂತಹ ಪ್ರಶ್ನೆಗಳನ್ನು ಕೇಳಿ, ಈ ಸಂದರ್ಭದಲ್ಲಿ ನೇರವಾಗಿ ಪೊಲೀಸ ಆಯುಕ್ತರನ್ನು ನ್ಯಾಯಾಲಯದ ಎದುರಿಗೆ ಈ ಘಟನೆಯ ಸವಿಸ್ತಾನ ವರದಿಯನ್ನು ಹಾಜರು ಪಡಿಸುವಂತೆ ಆದೇಶ ನೀಡಿದೆ. ಹಾಗೆಯೇ ಈ ಪ್ರಕರಣವನ್ನು ಅತ್ಯಂತ ಕಠಿಣವಾಗಿ ನಿಭಾಯಿಸಲಾಗುವುದು’ ಎಂದು ನ್ಯಾಯಾಲಯವು ಸರಕಾರ ಮತ್ತು ಆರೋಪಿಗಳಿಗೆ ಹೇಳಿದೆ.

ಏನಿದು ಪ್ರಕರಣ ?

ಬೆಳಗಾವಿಯಲ್ಲಿ ಡಿಸೆಂಬರ್ 11 ರಂದು, ಓರ್ವ ಯುವತಿ ತನ್ನ ನಿಶ್ಚಿತಾರ್ಥದ ದಿನದಂದು, ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಯುವತಿಯ ಮನೆಯವರು ಇದರಿಂದ ಕೋಪಗೊಂಡು ನೇರವಾಗಿ ಆ ಯುವಕನ ಮನೆಗೆ ಧಾವಿಸಿದರು. ಆ ಹುಡುಗನ ತಾಯಿಯನ್ನು ಅತ್ಯಂತ ಕ್ರೂರವಾಗಿ ಥಳಿಸಿದರು, ಹಾಗೆಯೇ ಆ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಒಂದು ವಿದ್ಯುತ್ ಕಂಬಕ್ಕೆ 2 ಗಂಟೆಗಳ ಕಾಲ ಕಟ್ಟಿಹಾಕಿದ್ದರು.

ಸಂಪಾದಕೀಯ ನಿಲುವು

ಈ ಪ್ರಪಂಚದ ದುರ್ಯೋಧನ ಮತ್ತು ದುಶ್ಶಾಸನರಿಗೆ ಪಾಠ ಕಲಿಸಲು ಜನರು ಭಗವಾನ ಶ್ರೀ ಕೃಷ್ಣನ ಭಕ್ತಿ ಮಾಡುವುದು ಆವಶ್ಯಕವಾಗಿದೆ. ದ್ರೌಪದಿಯು ಭಗವಾನ ಶ್ರೀಕೃಷ್ಣನನ್ನು ಆರ್ತತೆಯಿಂದ ಕೂಗಿ ಕರೆದಾಗ ಭಗವಂತನು ಅವಳನ್ನು ರಕ್ಷಿಸಿದನು. ಇಂದು ಕೂಡ ಭಗವಂತನು ಭಕ್ತರನ್ನು ರಕ್ಷಿಸಲು ಓಡಿ ಬರಬಹುದು, ಇದಕ್ಕಾಗಿ ಆ ರೀತಿ ಭಕ್ತಿಯನ್ನು ಮಾಡುವುದು ಮತ್ತು ಅವನನ್ನು ಆರ್ತತೆಯಿಂದ ಕೂಗಿ ಕರೆಯುವುದು ಆವಶ್ಯಕವಾಗಿದೆ.

ಇಂತಹ ಗಂಭೀರ ಘಟನೆ ನಡೆಯುತ್ತಿರುವಾಗ 2 ಗಂಟೆಗಳ ನಂತರ ಘಟನಾಸ್ಥಳವನ್ನು ತಲುಪುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.