ಭಯೋತ್ಪಾದಕ ಕೃತ್ಯವನ್ನು ಎಂದಿಗೂ ಮರೆಯದಿರಿ, ಎಂದಿಗೂ ಕ್ಷಮಿಸದಿರಿ ! – ಬ್ರಿಟನ್ನಿನಲ್ಲಿರುವ ಭಾರತದ ಹೈ ಕಮಿಷನ

ಲಂಡನ (ಇಂಗ್ಲೆಂಡ) – ಮುಂಬಯಿ ಮೇಲಿನ 26/11 ಭಯೋತ್ಪಾದಕ ದಾಳಿ ನಡೆದು ಇಂದಿಗೆ 15 ವರ್ಷಗಳು ಆಯಿತು. ಆ ನಿಮಿತ್ತ ಇಲ್ಲಿನ ಭಾರತದ ಹೈಕಮಿಷನರ ವಿಕ್ರಮ ದೊರೈಸ್ವಾಮಿ ಮಾತನಾಡಿ, `ಭಯೋತ್ಪಾದನೆಯಂತಹ ಭೀಕರ ಕೃತ್ಯವನ್ನು ನಾವು ಎಂದಿಗೂ ಮರೆಯಬಾರದು, ಅದನ್ನು ಕ್ಷಮಿಸಬಾರದು ಮತ್ತು ಎಂದಿಗೂ ಅನುಮತಿಸುವುದಿಲ್ಲ.’ ಇದೇ ನಮ್ಮ ನಿಲುವು ಎಂದು ಹೇಳಿದರು,

‘ದೊರೈಸ್ವಾಮಿ ಅವರು ಲಂಡನ್ ನ ಇಂಡಿಯಾ ಹೌಸ್‌ನಲ್ಲಿ 26/11 ಭಯೋತ್ಪಾದನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಾರಂಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಕೆಲವು ಸಂಸದರು ಕೂಡ ಭಾಗವಹಿಸಿದ್ದರು.