ನೂಹ (ಹರಿಯಾಣ) ದಲ್ಲಿ ಪೂಜೆಗೆ ಹೋಗುತ್ತಿದ್ದ ಹಿಂದೂ ಮಹಿಳೆಯರ ಮೇಲೆ ಮತಾಂಧ ಮುಸ್ಲಿಮರಿಂದ ಮಸೀದಿಯಿಂದ ಕಲ್ಲು ತೂರಾಟ !

3 ಅಪ್ರಾಪ್ತರ ಬಂಧನ

ನೂಹ (ಹರಿಯಾಣ) – ಇಲ್ಲಿ ಹಿಂದೂ ಮಹಿಳೆಯರು ಬಾವಿಯ ಪೂಜೆಗೆ ಹೋಗುತ್ತಿದ್ದಾಗ ಮಸೀದಿಯಿಂದ ಅವರ ಮೇಲೆ ಕಲ್ಲು ತೂರಾಟದ ಘಟನೆ ನಡೆದಿದೆ. ಈ ಕಲ್ಲು ತೂರಾಟದಲ್ಲಿ 8 ಮಹಿಳೆಯರು ಗಾಯಗೊಂಡಿದ್ದಾರೆ. ಇಲ್ಲಿ ಶ್ರಾವಣ ಮಾಸದಲ್ಲಿ ಬ್ರಜಮಂಡಲ ಯಾತ್ರೆಯಲ್ಲಿ ಹಿಂದೂಗಳ ಮೇಲೆ ಮತಾಂಧರು ಹಲ್ಲೆ ನಡೆಸಿದ್ದರು. ಇದರಲ್ಲಿ ಕೆಲವು ಹಿಂದೂಗಳು ಹತ್ಯೆಗೀಡಾಗಿದ್ದರು ಇದಾದ ಬಳಿಕ ಮತ್ತೆ ಮತಾಂಧರ ದಾಳಿಯ ಘಟನೆ ನಡೆದಿದೆ.

ಮಹಿಳೆಯರ ಮೇಲೆ ಕಲ್ಲು ತೂರಾಟದ ಸುದ್ದಿ ಹರಡಿದ ನಂತರ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಜಮಾಯಿಸಿ, ಪ್ರತಿಭಟನೆ ನಡೆಸಿದರು. ಬಳಿಕ ಇಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಮೂವರು ಬಾಲಕರನ್ನು ಬಂಧಿಸಿದ್ದಾರೆ. ಪೊಲೀಸರು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮುಖರನ್ನು ಕರೆಸಿ ಅವರ ನಡುವೆ ಶಾಂತಿ ಮಾತುಕತೆಗೆ ಚರ್ಚೆಗೆ ವ್ಯವಸ್ಥೆ ಮಾಡಿದರು. (ಶಾಂತಿಗಾಗಿ ಚರ್ಚೆಯಲ್ಲ, ಮತಾಂಧರಿಗೆ ತಕ್ಕ ಪಾಠ ಸಿಗುವಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು; ಏಕೆಂದರೆ ಶಾಂತಿಯನ್ನು ಹಿಂದೂಗಳಲ್ಲ ಮತಾಂಧ ಮುಸ್ಲಿಮರು ಕದಡಿಸುತ್ತಾರೆ ! – ಸಂಪಾದಕರು)

ಸಂಪಾದಕರ ನಿಲುವು

ಇಂತಹ ಮಸೀದಿಗಳಿಗೆ ಬೀಗ ಜಡಿದು, ಬುಲ್ಡೋಜರ್‌ಗಳಿಂದ ಕೆಡವಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು!

ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ನೂಹ್‌ನಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಯಾಗುವುದು ಅಪೇಕ್ಷಿಸುತ್ತಿಲ್ಲ !