ಕೆನಡಾ ಉಗ್ರರಿಗೆ ನೆಲೆ ! – ರವಿರಂಜನ ಸಿಂಗ, ಅಧ್ಯಕ್ಷರು, ’ಜಟಕಾ ಸರ್ಟಿಫಿಕೇಷನ್ ಅಥಾರಿಟಿ’

ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿತ ’ಆನ್‌ಲೈನ್’ ವಿಶೇಷ ಸಂವಾದ : ’ಕೆನಡಾ ಕಾ ಹಾಥ, ಖಾಲೀಸ್ತಾನಿ ಕೆ ಸಾಥ್’

ವಿರಂಜನ ಸಿಂಗ, ಅಧ್ಯಕ್ಷರು, ‘ಜಟಕಾ ಸರ್ಟಿಫಿಕೇಷನ್‌ ಅಥಾರಿಟಿ’

ಮುಂಬಯಿ – ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿ ಆಗಿದ್ದಾಗ ಖಾಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ ಮಾಡಿದ್ದನು. ಅದರ ಮೊದಲು ಸಿಕ್ಖ್ ಪ್ರವಾಸಿ ಹಡಗು ’ಕಾಮಗಾಟಮಾರು’ಗೆ ಕೆನಡಾದಲ್ಲಿ ಪ್ರವೇಶ ನಿರಾಕರಿಸಿ ಅದರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದು ಕೆನಡಾದ ಸಿಕ್ಖ್ ಪ್ರೇಮದ ಇತಿಹಾಸವಾಗಿದೆ. ಈಗ ಕೆನಡಾ ಇದು ಭಯೋತ್ಪಾದಕರ ಬೆಂಬಲಿಗ ದೇಶ ಮಾತ್ರವಲ್ಲ ಭಯೋತ್ಪಾದಕರ ನೆಲೆಯಾಗಿ ಬಿಟ್ಟಿದೆ, ಎಂದು ’ಜಟಕಾ ಸರ್ಟಿಫಿಕೇಷನ್ ಅಥಾರಿಟಿ’ಯ ಅಧ್ಯಕ್ಷರಾದ ಶ್ರೀ. ರವಿರಂಜನ ಸಿಂಗ ಇವರು ದೃಢವಾಗಿ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ’ಕೆನಡಾ ಕಾ ಹಾಥ ಖಾಲಿಸ್ತಾನಿ ಆತಂಕವಾದಿಕೆ ಸಾಥ’ ಈ ವಿಷಯದ ಬಗ್ಗೆ ಆಯೋಜಿಸಿರುವ ’ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಶ್ರೀ. ರವಿರಂಜನ ಸಿಂಗ ಇವರು ತಮ್ಮ ಮಾತನ್ನು ಮುಂದುವರಿಸಿ, ’ಕೆನಡಾವು ಹರದೀಪ ಸಿಂಗ್ ನಜ್ಜರ್’ ಇವನ ಹತ್ಯೆಯ ಆರೋಪವನ್ನು ಭಾರತದ ಮೇಲೆ ಹೊರಿಸಿದೆ, ಈ ಸುಳ್ಳು ಆಪಾದನೆಯ ಹಿಂದೆ ಪಾಕಿಸ್ತಾನದ ಷಡ್ಯಂತ್ರವಿದೆ. ಇತರ ದೇಶದ ಗಡಿಗೆ ಹೋಗಿ ದೇಶದ್ರೋಹಿಗಳನ್ನು ಹತ್ಯೆ ಮಾಡುವ ಕಾನೂನು ನಮ್ಮದಲ್ಲ ಮತ್ತು ಯಾವುದೇ ಅಧಿಕಾರಿಯು ತಮ್ಮ ನೌಕರಿಯನ್ನು ಅಪಾಯಕ್ಕೊಡ್ಡಿ ಈ ರೀತಿಯ ಕೃತ್ಯ ಮಾಡುವುದಿಲ್ಲ. ಖಾಲಿಸ್ತಾನಿ ಇದೆಂತಹ ರೋಗವೆಂದರೆ ಎಂದರೆ ಅದಕ್ಕೆ ಅನೇಕ ಡಾಕ್ಟರರು ಚಿಕಿತ್ಸೆ ನೀಡುತ್ತಿದ್ದಾರೆ; ಆದರೆ ಕಾರಣ ಯಾರಿಗೂ ತಿಳಿಯುತ್ತಿಲ್ಲ. ಎಲ್ಲಿಯವರೆಗೆ ಪಾಕಿಸ್ತಾನ ನೆಲಸಮವಾಗುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆಗಳು ನಾಶವಾಗುವುದಿಲ್ಲ. ದಾಳಿಯೊಂದೇ ರಕ್ಷಣೆಯ ಮಾರ್ಗವಾಗಿದೆ. ಭಾರತ ದೇಶದಲ್ಲಿ ಸಿಕ್ಖ್‌ರ ಕೆಲವು ಸಮಸ್ಯೆ ಗಳಿವೆ; ಆದರೆ ಅವುಗಳನ್ನು ಖಾಲಿಸ್ತಾನದ ಜೊತೆಗೆ ಜೋಡಿಸಬಾರದು. ಆ ಸಮಸ್ಯೆಗಳನ್ನು ಕಾನೂನುರೀತ್ಯಾ ಮಂಡಿಸಬೇಕು. ಅದಕ್ಕಾಗಿ ಶತ್ರುದೇಶಗಳ ಜೊತೆ ಸೇರಿ ದೇಶವಿರೋಧಿ ಚಟುವಟಿಕೆ ಮಾಡುವುದು ಸರ್ವಥಾ ತಪ್ಪು. ಹಿಂದೂ ಮತ್ತು ಸಿಕ್ಖ್‌ರು ಬಾಂಧವರಾಗಿದ್ದಾರೆ. ಇಬ್ಬರನ್ನು ಬೇರೆ ಮಾಡುವುದು ಇದು ಪಾಕಿಸ್ತಾನದ ಐ.ಎಸ್.ಐ.ನ ರಾಜಕೀಯ ಆಟವಾಗಿದೆ. ’ಸಿಕ್ಖ್‌ರ ೪ ನೇ ತಕ್ತ ಇರುವಾಗ ೧೯೬೦ ರಲ್ಲಿ ೫ ನೇ ತಕ್ತ ನಿರ್ಮಾಣ ಮಾಡುವುದು’, ಇದು ಕೂಡ ಷಡ್ಯಂತ್ರದ ಭಾಗವಾಗಿದೆ ಹಾಗೂ ಗುರುಪತವಂತ ಸಿಂಹ ಪನ್ನು ಇವನು ಸಿಕ್ಖ್ ಧರ್ಮದ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಅವನಿಗೆ ಸಿಕ್ಖ್‌ರ ನೇತೃತ್ವ ವಹಿಸುವ ಯಾವುದೇ ಅಧಿಕಾರವಿಲ್ಲ’, ಎಂದು ಕೂಡ ಅವರು ಹೇಳಿದರು.

ಭಾರತವಿರೋಧವನ್ನೇ ಕಲಿಸಲಿಕ್ಕಿದ್ದರೆ ಕೆನಡಾಗೆ ಮಕ್ಕಳನ್ನು ಕಳಿಸಬೇಕೇ ? ಎಂಬುದರ ವಿಚಾರ ಮಾಡಿ ! – ಸೌ. ಸಂದೀಪ ಮುಂಜಾಲ ಕೌರ್, ’ರಣರಾಗಿಣಿ’ ಮಹಿಳಾ ಶಾಖೆ, ಹಿಂದೂ ಜನಜಾಗೃತಿ ಸಮಿತಿ

ಸೌ. ಸಂದೀಪ ಮುಂಜಾಲ

ಕೆನಡಾದ ಗುರುದ್ವಾರದ ಹೊರಗೆ ಇಂದಿಗೂ ನಿಜ್ಜರನ ಸಮರ್ಥನೆಯ ಪೋಸ್ಟರ್ ಹಾಕಲಾಗಿದೆ. ಅಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಛಾಯಾಚಿತ್ರ ಹಾಕಿ ಅವರ ಹತ್ಯೆಗೆ ಪ್ರಚೋದನೆ ನೀಡಲಾಗುತ್ತಿದೆ. ಖಾಲಿಸ್ತಾನಿ ಭಯೋತ್ಪಾದಕರು ಇಲ್ಲಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಯಾರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗಿಲ್ಲ. ಕರೀಮಾ ಬ್ಲೋಜ್ ಎಂಬ ಪ್ರಭಾವಶಾಲಿ ಮಹಿಳೆಯ ಹತ್ಯೆಯ ನಂತರ ಕೂಡ ಕೆನಡಾವು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೆನಡಾ ಸರಕಾರ ಇದು ಸಂಪೂರ್ಣವಾಗಿ ಖಾಲಿಸ್ತಾನಿ ಭಯೋತ್ಪಾದಕರ ಪರವಾಗಿ ನಿಂತಿರುವುದು ಕಾಣುತ್ತದೆ. ಕೆನಡಾಕ್ಕೆ ಭಾರತದಿಂದ ಅಧ್ಯಯನಕ್ಕಾಗಿ ಹೋಗಿರುವ ಮಕ್ಕಳಿಗಾಗಿ ಅವರ ಭಾರತೀಯ ಪೋಷಕರು ೮ ಅಬ್ಜ ಡಾಲರ್ ಖರ್ಚು ಮಾಡುತ್ತಾರೆ; ಆದರೆ ಯಾವ ದೇಶದ ನೀತಿಯು ಭಾರತವಿರೋಧಿಯಾಗಿದೆಯೋ ಅಂತಹ ದೇಶದಲ್ಲಿ ಮಕ್ಕಳಿಗೆ ಭಾರತವಿರೋಧವನ್ನೇ ಕಲಿಸ ಲಾಗುವುದು. ಈಗ ಪೋಷಕರು ಇದರ ಬಗ್ಗೆ ಯೋಚನೆ ಮಾಡುವುದು ಆವಶ್ಯಕವಾಗಿದೆ.