ಸದ್ಗುರು ಚಾರುದತ್ತ ಪಿಂಗಳೆ ಇವರು ಗುರು-ಶಿಷ್ಯ ಸಂಬಂಧದ ವಿಷಯದಲ್ಲಿ ವ್ಯಕ್ತಪಡಿಸಿದ ಅಪೂರ್ವ ವಿಚಾರಗಳು !

‘ನಾವು ಗುರುದೇವರ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ನನಗೆ ಕೆಲವು ಹಳೆಯ ಪ್ರಸಂಗಗಳು ನೆನಪಾಗುತ್ತವೆ. ಮೊದಲು ನನಗೆ ‘ಗುರುಗಳ ಋಣವನ್ನು ತೀರಿಸಬೇಕು, ಎನ್ನುವ ಅಹಂಕಾರದ ವಿಚಾರವಿತ್ತು. ‘ನಾವು ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಂತರ ಸೇವೆ ಮಾಡುತ್ತಿರುವಾಗ ನನಗೆ ಅರಿವಾಯಿತೇನೆಂದರೆ, ‘ನಾನು ಗುರುಗಳಿಗಾಗಿ ಏನೆಲ್ಲ ಮಾಡುತ್ತೇನೋ (ಸೇವೆ), ಅದರಿಂದ ನನಗೇನು ಸಿಗುತ್ತದೋ (ಆನಂದ), ಅದನ್ನು ಗುರುಗಳೇ ಕೊಡುತ್ತಾರೆ.

ಸಕಾರಾತ್ಮಕ ದೃಷ್ಟಿಕೋನದ ಮೇಲೆ ಮನಸ್ಸಿನ ಶಕ್ತಿಯು ಅವಲಂಬಿಸಿರುತ್ತದೆ !

‘ಯಾವುದೊಂದು ವಿಷಯವು ನನ್ನಿಂದ ಆಗುವುದಿಲ್ಲ’, ಎಂದು ನಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯವು ಎಷ್ಟೇ ಸುಲಭವಾಗಿದ್ದರೂ ಆಗುವುದೇ ಇಲ್ಲ. ತದ್ವಿರುದ್ಧ ‘ಯಾವುದೊಂದು ವಿಷಯವು ನನ್ನಿಂದ ಆಗುತ್ತದೆ’, ಎಂಬ ಸಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯವು ಎಷ್ಟೇ ಕಠಿಣವಾಗಿದ್ದರೂ, ಮಾಡಲು ಆಗುತ್ತದೆ !’

೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಅಭ್ಯಾಸವರ್ಗಕ್ಕೆ ಓರ್ವ ವಯೋವೃದ್ಧ ಗ್ರಹಸ್ಥ ಶ್ರೀ. ಜಹಾಗೀರದಾರ ಇವರು ಬರುತ್ತಿದ್ದರು. ಅವರು, “ಒಂದು ಸಲ ನನ್ನನ್ನು ಗೂಂಡಾಗಳು ಸುತ್ತುವರೆದಿದ್ದರು. ಆಗ ಗುರುಗಳ ಛಾಯಾಚಿತ್ರ ಮತ್ತು ಕುಲದೇವತೆಯ ಚಿತ್ರವನ್ನು ನೋಡಿದಾಗ, ನನ್ನ ಬಳಿಯಿದ್ದ ಉಂಗುರವನ್ನು ಆ ಐದು ಗೂಂಡಾಗಳ ಪೈಕಿ ಒಬ್ಬರಿಗೆ ಕೊಡಬೇಕು, ಎಂಬ ವಿಚಾರ ಬಂದಿತು.

ಪತಿಯ ನಿಧನದ ನಂತರ ದುಃಖದ ಸಮಯದಲ್ಲೂ ಸಾಧಕಿಯು ಗುರುಕೃಪೆ ಮತ್ತು ಸಾಧನೆಯಿಂದ ಅತ್ಯುನ್ನತ ಮಟ್ಟದ ಮಾನಸಿಕ ಸ್ಥಿರ ಹಾಗೂ ಭಾವಾವಸ್ಥೆ ಅನುಭವಿಸುವುದು

ಸಾಮಾನ್ಯವಾಗಿ ಯಾರಾದರೊಬ್ಬ ವ್ಯಕ್ತಿಯು ಕರ್ಮಕಾಂಡದ ಕೃತಿಗಳನ್ನು ಭಕ್ತಿಭಾವದಿಂದ ಮಾಡಿದರೆ ಅವನಲ್ಲಿ ಭಾವಜಾಗೃತವಾಗಬಹುದು; ಆದರೆ ಸಮಷ್ಟಿ ಸೇವೆಯನ್ನು ಮಾಡಲು ಮಾತೃವಾತ್ಸಲ್ಯಭಾವವು ಹೆಚ್ಚು ಆವಶ್ಯಕವಾಗಿದೆ. ನಮ್ಮೆದುರಿಗೆ ಇದರ ಆದರ್ಶ ಉದಾಹರಣೆಯೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರು (ಎಲ್ಲ ಸಾಧಕರ ತಾಯಿ) ಇದ್ದಾರೆ.

ಕಾರ್ತಿಕ ಶುಕ್ಲ ಪಕ್ಷ ತ್ರಯೋದಶಿ (ನವೆಂಬರ್ ೨೮) ಶ್ರೀ ಗೋರಕ್ಷನಾಥರ ಪ್ರಕಟದಿನ ನಿಮಿತ್ತ

ಶಕ ೧೭೧೦ ರ ವರೆಗೆ ಎಲ್ಲಾ ನವನಾಥರು ಪ್ರಕಟ ರೂಪದಲ್ಲಿದ್ದರು. ಅದರ ನಂತರ ಅವರು ಗುಪ್ತರಾದರು. ಗೋರಕ್ಷನಾಥರು ಗಿರನಾರ ಪರ್ವತದ ಮೇಲೆ ಶ್ರೀದತ್ತಾತ್ರೇಯರ ಆಶ್ರಯದಲ್ಲಿದ್ದರು. ಅರವತ್ನಾಲ್ಕು ಸಿದ್ಧಿಗಳಿಂದ ನಾಥಪಂಥ ಉತ್ಕರ್ಷವಾಯಿತು. ನೇಪಾಳಿ ಜನರು ಗೋರಕ್ಷನಾಥರನ್ನು ಭಗವಾನ ಪಶುಪತಿನಾಥರ ಅವತಾರವೆಂದು ನಂಬುತ್ತಾರೆ. ನೇಪಾಳದ ಕೆಲವು ಸ್ಥಳಗಳಲ್ಲಿ ಅವರ ಆಶ್ರಮಗಳಿವೆ.

ಮಹರ್ಷಿಗಳ ಆಜ್ಞೆಯಿಂದ ಗೋವಾದ ಸನಾತನದ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾದ ‘ದೀಪೋತ್ಸವ !

ಈ ಜೀವನಾಡಿಯಲ್ಲಿ ಮಹರ್ಷಿಗಳು ಹೇಳುತ್ತಾರೆ, ‘ಸನಾತನ ಸಂಸ್ಥೆಯ ೩ ಗುರುಗಳಾದ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಈ ಮೂವರಿಗೂ ನಾವು ಆಶೀರ್ವಾದ ನೀಡುತ್ತಿದ್ದೇವೆ. ನಾವಿಂದು ನಮ್ಮ ಸಾಧಕರಿಗೆ ಹೇಳಬಯಸುವುದೇನೆಂದರೆ, ಶ್ರೀಮಹಾವಿಷ್ಣು, ಶ್ರೀಮಹಾಲಕ್ಷ್ಮೀ ಹಾಗೂ ಶ್ರೀಮಹಾಸರಸ್ವತಿ ಇವರ ಚರಣಗಳಲ್ಲಿ ಶಿರಬಾಗಿದರೆ ಯಾವ ಫಲವು ಸಿಗುವುದೋ, ಅದೇ ಫಲವು ಸಾಧಕರಿಗೆ ಸನಾತನದ ೩ ಗುರುಗಳಿಗೆ ನಮಸ್ಕಾರ ಮಾಡಿದಾಗ ಸಿಗಲಿದೆ.

ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯಿಂದ ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಸತ್ಸಂಗ

ಇಂದು ದೇಶದಲ್ಲಿ ರಾರಾಜಿಸುತ್ತಿರುವ ಅಧರ್ಮ, ಅನ್ಯಾಯ, ಧರ್ಮವಿರೋಧಿ ಕೃತ್ಯಗಳು, ಧರ್ಮಹಾನಿಯ ಘಟನೆಗಳ ವಿರುದ್ಧ ಧರ್ಮ ಶಕ್ತಿಯ ಆಧಾರದ ಮೇಲೆ ಹೋರಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ  ಈಗ ಆಚರಿಸುವ ನಿಜವಾದ ದೀಪಾವಳಿಯಾಗಿದೆ, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡರವರು ಪ್ರತಿಪಾದಿಸಿದ್ದಾರೆ.

ಚಳಿಗಾಲದ ಋತುಚರ್ಯೆ 

ಈ ಋತುವಿನಲ್ಲಿ ಸ್ನಾನದ ಮೊದಲು ಮೈಗೆ ಕೊಬ್ಬರಿಎಣ್ಣೆ, ಎಳ್ಳೆಣ್ಣೆ, ನೆಲಗಡಲೆಯ ಎಣ್ಣೆ, ಸಾಸಿವೆಯ ಎಣ್ಣೆ ಇವುಗಳಲ್ಲಿ ಯಾವುದಾದರೂ ಎಣ್ಣೆಯನ್ನು ಹಚ್ಚಬೇಕು. ಅದರಿಂದ ಚಳಿ ಯಿಂದಾಗಿ ಚರ್ಮ ಒಣಗಿ ತುರಿಸುವುದು, ಚರ್ಮ, ತುಟಿ, ಕಾಲು ಇತ್ಯಾದಿಗಳು ಒಡೆಯುವುದು ಮುಂತಾದ ರೋಗಗಳಾಗುವುದಿಲ್ಲ. ತೆಂಗಿನೆಣ್ಣೆ ತಂಪು ಹಾಗೂ ಸಾಸಿವೆ ಎಣ್ಣೆ ಉಷ್ಣ ಇರುತ್ತದೆ. ಆದರೂ ಚಳಿಗಾಲದಲ್ಲಿ ತೆಂಗಿನೆಣ್ಣೆ ಉಪಯೋಗಿಸಿದರೆ ಏನೂ ಅಪಾಯವಾಗುವುದಿಲ್ಲ.

೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

‘ನನಗೆ ೧೯೮೯ ರಿಂದ ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಗಳಲ್ಲಿ ಸಹಭಾಗಿಯಾಗುವ ಭಾಗ್ಯ ಲಭಿಸಿತು. ಅವರು ತಮ್ಮ ನಿವಾಸದಲ್ಲಿ ಸಮ್ಮೋಹನ-ಉಪಚಾರ ‘ಚಿಕಿತ್ಸಾಲಯ’ದ ಒಂದು ಕೋಣೆಯಲ್ಲಿ ಅಭ್ಯಾಸ ವರ್ಗ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದರು.

ಆಧ್ಯಾತ್ಮಿಕ ಉಪಾಯ ಮತ್ತು ಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯು ತಳಮಳದಿಂದ ಆಗಲು ಏನು ಮಾಡಬೇಕು ?

ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡದಿದ್ದರೆ, ಈ ಜನ್ಮದಲ್ಲಿ ಅಪೇಕ್ಷಿತ ಪ್ರಗತಿ ಆಗುವುದೇ ಇಲ್ಲ, ಆದರೆ ಮುಂದಿನ ಜನ್ಮಗಳಲ್ಲಿಯೂ ಆ ಸ್ವಭಾವದೋಷಗಳು ಮತ್ತು ಅಹಂ ನಮ್ಮೊಂದಿಗೇ ಬರುತ್ತವೆ. ಈ ರೀತಿಯ ವಿಚಾರವನ್ನು ಮೇಲಿಂದ ಮೇಲೆ ಮನಸ್ಸಿಗೆ ಬಿಂಬಿಸಿದರೆ, ಪ್ರಯತ್ನಿಸುವುದು ಅತ್ಯಂತ ಆವಶ್ಯಕತೆ ಇದೆ ಎಂದು ನಮಗೆ ಅರಿವಾಗ ತೊಡಗುತ್ತದೆ.