ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ

ದಲ್ಲಾಳಿ ಹಣವನ್ನು ಮರಳಿ ಕೇಳುತ್ತಿದ್ದ ಜನರು!

ಕೋಲ ಕಾತ (ಬಂಗಾಳ) – ಇಲ್ಲಿನ ಅರಿಯಾದಹಾ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಜನರು ದಾಳಿ ನಡೆಸಿದ್ದಾರೆ. ಸ್ಥಳೀಯ ನಿವಾಸಿಗಳು ‘ಕಳ್ಳ-ಕಳ್ಳ’ ಎಂದು ಘೋಷಣೆ ಕೂಗುತ್ತಾ ಶಾಸಕರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದರು. ದಲ್ಲಾಳಿ ಹಣವನ್ನು ಮರಳಿ ನೀಡುವಂತೆ ಜನರು ಒತ್ತಾಯಿಸುತ್ತಿದ್ದರು. ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಆದರೆ ದಾಳಿ ನಡೆದ ವೇಳೆ ನಾನು ಕಾರಿನಲ್ಲಿರಲಿಲ್ಲ, ಚಾಲಕನ ಮೇಲೆ ದಾಳಿ ಮಾಡಲಾಗಿದೆ ಎಂದು ಮಿತ್ರಾ ಅವರು ಸ್ಪಷ್ಟನೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ನಾಯಕರು ಇಂದು ತಮ್ಮ ಕರ್ಮದ ಫಲವನ್ನು ಅನುಭವಿಸುತ್ತಿದ್ದಾರೆಂದು ಜನರಿಗೆ ಅನ್ನಿಸುತ್ತಿದೆ!