ಒಡಿಶಾ: ಇಂಜಿನಿಯರ್‌ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ

​ಭುವನೇಶ್ವರ (ಒಡಿಶಾ) – ಒಡಿಶಾದ ಕಂಧಮಾಲ್ ಜಿಲ್ಲೆಯ ಬಾಲಿಗುಡ ಎಂಬಲ್ಲಿ ವಿಜಿಲೆನ್ಸ್ ಇಲಾಖೆಯು ನಡೆಸಿದ ಕಾರ್ಯಾಚರಣೆಯಲ್ಲಿ, ಸಹಾಯಕ ಕಾರ್ಯಕಾರಿ ಇಂಜಿನಿಯರ್‌ನಿಂದ ೨ ಕೋಟಿ ರೂಪಾಯಿ ಅಕ್ರಮ ನಗದು, ೩೦೦ ಗ್ರಾಂ ಚಿನ್ನ, ೧೦,೫೦೦ ಚದರ ಅಡಿಯ ನಾಲ್ಕು ಅಂತಸ್ತಿನ ಮನೆ, ಜಮೀನು ಮತ್ತು ಐದು ಕಟ್ಟಡಗಳನ್ನು ವಶಪಡಿಸಿಕೊಳ್ಳಲಾಗಿದೆ. ವೈಕುಂಠ ನಾಥ್ ಬೆಹೆರಾ ಎಂಬುದು ಈ ಇಂಜಿನಿಯರ್‌ನ ಹೆಸರಾಗಿದೆ.

ಒಂದು ಕಾಲದಲ್ಲಿ ತಿಂಗಳಿಗೆ ೬,೦೦೦ ರೂಪಾಯಿ ಸಂಪಾದಿಸುತ್ತಿದ್ದ ವೈಕುಂಠ ನಾಥ್ ಇಷ್ಟೊಂದು ಆಸ್ತಿ ಹೇಗೆ ಗಳಿಸಿದರು?, ಎಂಬ ಬಗ್ಗೆ ಈಗ ತನಿಖೆ ನಡೆಸಲಾಗುತ್ತಿದೆ. ಈತ ೧೩ ಸ್ಥಳಗಳಲ್ಲಿ ಭೂಮಿ ಖರೀದಿಸಿದ್ದಾನೆ. ಈತನ ಹೆಸರಿನಲ್ಲಿದ್ದ ೯ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಸಂಪಾದಕೀಯ ನಿಲುವು

ಭ್ರಷ್ಟಾಚಾರಿಗಳಿಗೂ ಈಗ ಮರಣದಂಡನೆ ಶಿಕ್ಷೆಯಾಗುವಂತೆ ಕಾನೂನಿನಲ್ಲಿ ಬದಲಾವಣೆ ತರುವುದು ಅತ್ಯಗತ್ಯವಾಗಿದೆ!