ಅತ್ಯಂತ ತಳಮಳದಿಂದ ಮತ್ತು ಭಾವಪೂರ್ಣವಾಗಿ ಮಾರ್ಗದರ್ಶನ ಮಾಡಿ ಸಾಧಕರನ್ನು ಅಂತರ್ಮುಖಗೊಳಿಸುವ ಪೂ. ರಮಾನಂದ ಗೌಡ !
ಪ್ರತಿಯೊಂದು ಉಪಕ್ರಮದಲ್ಲಿ ಜವಾಬ್ದಾರ ಸಾಧಕರೊಂದಿಗೆ ಕಲಿಯುವ ದೃಷ್ಟಿಯಿಂದ ಇನ್ನೊಬ್ಬ ಸಾಧಕನನ್ನು ಜೋಡಿಸಿ ಅವನಿಗೆ ಆ ಸೇವೆಯನ್ನು ಕಲಿಯಲು ಹೇಳುತ್ತಾರೆ. ಅವನು ಕಲಿತ ನಂತರ ಅವನಿಗೆ ಇತರ ಕೇಂದ್ರದಲ್ಲಿ ಅಥವಾ ಜಿಲ್ಲೆಯಲ್ಲಿ ಸೇವೆಯ ಜವಾಬ್ದಾರಿಯನ್ನು ಕೊಟ್ಟು ಅವನಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಾರೆ. ಇದರಿಂದ ಹೊಸಹೊಸ ಸಾಧಕರು ಸೇವೆಯನ್ನು ಕಲಿಯುತ್ತಾರೆ ಮತ್ತು ಮುಂದೆ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗುತ್ತಾರೆ.