ದೇಶದ 18 ಸ್ಥಳಗಳಲ್ಲಿ ರಾಸಾಯನಿಕ ಬಾಂಬ್ ಸ್ಫೋಟಿಸುವ ಸಂಚು ರಚಿಸಲಾಗಿತ್ತು !

ದೆಹಲಿಯಲ್ಲಿ ಬಂಧಿಸಲ್ಪಟ್ಟಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ !

ನವ ದೆಹಲಿ : ದೆಹಲಿಯಿಂದ ಬಂಧಿಸಲಾಗಿರುವ ಇಸ್ಲಾಮಿಕ್ ಸ್ಟೇಟ್‌ನ 3 ಭಯೋತ್ಪಾದಕರು ದೇವಸ್ಥಾನಗಳು, ಗೋರಿ ಹಾಗೂ ಮುಂಬಯಿ, ಸೂರತ, ವಡೋದರಾ, ಗಾಂಧಿನಗರ ಮತ್ತು ಕರ್ಣಾವತಿಯ ರಾಜಕೀಯ ನಾಯಕರ ಸ್ಥಳಗಳು ಒಟ್ಟು 18 ಸ್ಥಳಗಳಲ್ಲಿ ರಾಸಾಯನಿಕ ಬಾಂಬ್ ಸ್ಫೋಟಿಸಲು ಷಡ್ಯಂತ್ರ ರಚಿಸಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ. ಇದಕ್ಕಾಗಿ ಅವರು ಕೆಲವು ಪ್ರದೇಶಗಳ ಪರಿಶೀಲನೆಯನ್ನೂ ನಡೆಸಿದ್ದರು.

ಗೋವಾ ಬಾಂಬ್ ತಯಾರಿಕಾ ನೆಲೆ !

ಈ ಭಯೋತ್ಪಾದಕರು ರಕ್ತಪಾತ ನಡೆಸಲು ಹೊಸ ಯುವಕರನ್ನು ಹುಡುಕಲು ಪುಣೆ, ಬೆಂಗಳೂರು ಮುಂತಾದ ಸ್ಥಳಗಳಿಂದ ಮುಸಲ್ಮಾನ ಯುವಕರ ಬ್ರೈನ್ ವಾಶ್ ಮಾಡಿ ಬಲೆಗೆ ಸೆಳೆಯುವ ಕೆಲಸ ಆರಂಭಿಸಿದ್ದರು. ಅಂತಹ ಯುವಕರಿಗೆ ರಾಸಾಯನಿಕ ಬಾಂಬ್ ತಯಾರಿಸುವುದು ಹೇಗೆ ? ಮತ್ತು ಷಡ್ಯಂತ್ರವನ್ನು ಹೇಗೆ ಯಶಸ್ವಿಗೊಳಿಸುವುದು ?, ಎನ್ನುವ ವಿಷಯದಲ್ಲಿ ಅವರಿಗೆ ತರಬೇತಿ ನೀಡಲು ಅನೇಕ ಸ್ಥಳಗಳಲ್ಲಿ ನೆಲೆಗಳನ್ನು ಸ್ಥಾಪಿಸಿದ್ದರು. ಇವುಗಳಲ್ಲಿ ಒಂದು ನೆಲೆ ಗೋವಾದಲ್ಲಿಯೂ ಇತ್ತು.

ದೇಶದ ಕೆಲವು ರಾಜ್ಯಗಳಲ್ಲಿ ನೆಲೆಗಳಿದ್ದವು !

ಈ ಭಯೋತ್ಪಾದಕರು ಗೋವಾ, ಲವಾಸಾ (ಪುಣೆ), ಮಹಾಬಲೇಶ್ವರ (ಸಾತಾರಾ), ಹುಬ್ಬಳ್ಳಿ ಮತ್ತು ಉಡುಪಿ ಹಾಗೂ ಕೇರಳದ ವಲಸಾಡ ವನ್ಯಜೀವಿ ಅಭಯಾರಣ್ಯ, ನಲ್ಲಾಮಲಾ ಪರ್ವತ ರಂಗಾ ಮತ್ತು ಚಾಂದೌಲಿಯಲ್ಲಿ ನೆಲೆಗಳನ್ನು ಸ್ಥಾಪಿಸಲು ಸ್ಥಳಗಳನ್ನು ಹುಡುಕಿ, ಅಲ್ಲಿ ನೆಲೆಗಳನ್ನು ಸ್ಥಾಪಿಸಿದ್ದರು.

ಪುಣೆ ಸಮೀಪದ ಅರಣ್ಯದಲ್ಲಿ ಬಾಂಬ್ ಸ್ಫೋಟದ ಪರೀಕ್ಷಣೆ ನಡೆಸಿದ್ದರು !

ಪುಣೆ ಸಮೀಪದ ಲವಾಸಾ ಅರಣ್ಯದಲ್ಲಿ ಈ ಭಯೋತ್ಪಾದಕರು ಬಾಂಬ್ ಸ್ಫೋಟದ ಮೊದಲ ಪರೀಕ್ಷಣೆಯನ್ನೂ ನಡೆಸಿದ್ದರು. ತದನಂತರ ಉತ್ತರಾಖಂಡದ ಹಲ್ದಾನಿ, ದೆಹಲಿ ಮತ್ತು ರಾಜಸ್ಥಾನದಲ್ಲಿಯೂ ಅನೇಕ ಪರೀಕ್ಷಣೆಗಳನ್ನು ನಡೆಸಿದ್ದರು. (ಇದರ ಕಿಂಚಿತ್ತೂ ಸುಳಿವು ಪೊಲೀಸರಿಗೆ ಸಿಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ! ಇಂತಹ ಪೊಲೀಸರ ಕೈಯಲ್ಲಿ ಜನರ ಜೀವನ ಎಂದಾದರೂ ಸುರಕ್ಷಿತವಾಗಿರುತ್ತದೆಯೇ ? – ಸಂಪಾದಕರು)

ಶಾಹನವಾಜ್ ಹಿಂದೂ ಹುಡುಗಿಯನ್ನು ಮದುವೆಯಾಗಿ ಅವಳನ್ನು ಮತಾಂತರಿಸಿ ಭಯೋತ್ಪಾದಕಳನ್ನಾಗಿ ಪರಿವರ್ತಿಸಿದ್ದನು !

‘ದಿ ಕೇರಳ ಸ್ಟೋರಿ’ ಚಲನಚಿತ್ರದಲ್ಲಿ ತೋರಿಸಲಾಗಿದ್ದ ಕಥೆಯನ್ನೇ ಶಾಹನವಾಜ್ ರಚಿಸಿದ್ದನೆಂದು ಗಮನಕ್ಕೆ ಬರುತ್ತದೆ! ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಕಥೆ ತಪ್ಪು’, ಎಂದು ಹೇಳುವ ತಥಾಕಥಿತ ಜಾತ್ಯತೀತವಾದಿಗಳು ಈ ವಿಷಯದಲ್ಲಿ ಮಾತನಾಡುತ್ತಾರೆಯೇ ?

ಬಂಧಿಸಲಾಗಿರುವ 3 ಭಯೋತ್ಪಾದಕರಲ್ಲಿ ಒಬ್ಬನಾದ ಶಾಹನವಾಜನು ಗುಜರಾತ್ ನ ಓರ್ವ ಹಿಂದೂ ಯುವತಿಯನ್ನು ಮದುವೆಯಾಗಿ ಅವಳನ್ನು ಮತಾಂತರಗೊಳಿಸಿದ್ದನು. ಶಾಹನವಾಜ ಕೂಡ ತನ್ನ ಪತ್ನಿಯ ಬ್ರೈನ್ ವಾಶ್ ಮಾಡಿ ಆಕೆಯನ್ನು ಭಯೋತ್ಪಾದಕಳಾಗಿ ಮಾಡಿದ್ದನು. ಅವರ ಸಂಚಿನಲ್ಲಿ ಅವಳೂ ಭಾಗಿಯಾಗಿದ್ದಳು. ಸದ್ಯಕ್ಕೆ ಆಕೆ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಗಾಗಿ ಹುಡುಕುತ್ತಿದ್ದಾರೆ. ಶಾಹನವಾಜ್‌ ಬಾಂಬ್‌ಗಳನ್ನು ತಯಾರಿಸುವುದರಲ್ಲಿ ನಿಪುಣನಾಗಿದ್ದನು. ಈತ ಜಾರ್ಖಂಡ್‌ನ ಹಜಾರಿಬಾಗ್ ನಿವಾಸಿಯಾಗಿದ್ದಾನೆ.

ಸಂಪಾದಕೀಯ ನಿಲುವು

ಹಿಂದೂಗಳ ಬುಡಕ್ಕೆ ಎರವಾಗಿರುವ ಜಿಹಾದಿಗಳಿಗೆ ಎಲ್ಲಿಯವರೆಗೆ ಗಲ್ಲುಶಿಕ್ಷೆಯನ್ನು ನೀಡುವ ಕಾನೂನು ರಚಿಸಲಾಗುವುದಿಲ್ಲವೋ, ಅಲ್ಲಿಯವರೆಗೆ ಅವರು ಮೇಲಿಂದ ಮೇಲೆ ಇಂತಹ ಧೈರ್ಯವನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿಯೇ ಈಗ ಹಿಂದೂಗಳು ಸಂಘಟಿತರಾಗಿ ಇಂತಹ ಕಾನೂನನ್ನು ಜಾರಿಗೆ ತರಲು ಸರಕಾರವನ್ನು ಒತ್ತಾಯಿಸಬೇಕು !

ಹಿಂದೂಗಳನ್ನು ವಕ್ರದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಆಗಬಾರದು, ಅದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕು !