ದೆಹಲಿಯಲ್ಲಿನ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಕೇಸರಿ ಧ್ವಜ ಮತ್ತು ಪ್ರಧಾನಮಂತ್ರಿ ಮೋದಿ ಇವರ ವಿರುದ್ಧ ಬರಹ !

ನವ ದೆಹಲಿ – ಇಲ್ಲಿಯ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯು.) ಕೇಸರಿಧ್ವಜ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ವಿರುದ್ಧ ‘ಭಗವಾ ಜಲೇಗಾ’, ‘ಮೋದಿ ತೇರಿ ಕಬ್ರ ಖುದೆಗಿ’ (ಮೋದಿ ನಿನ್ನ ಸಮಾಧಿ ಆಗಯಲಾಗುವುದು) ಎಂದು ಘೋಷಣೆ ಬರೆದಿರುವುದು ಬೆಳಕಿಗೆ ಬಂದಿದೆ. ‘ಈ ಘೋಷಣೆಗಳು ಯಾರು ಬರೆದರು ? ಇದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ನಂತರ ಸರಕಾರದಿಂದ ಅವುಗಳನ್ನು ಒರೆಸಲಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಈ ಸಂದರ್ಭದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಹಿಂದೂದ್ವೇಷಿ ವಿದ್ಯಾರ್ಥಿಗಳನ್ನು ಹುಡುಕಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಈ ವಿಶ್ವವಿದ್ಯಾಲಯದ ಶುದ್ದಿ ಮಾಡಬೇಕೆಂದು ಪ್ರತಿಯೊಂದು ಧರ್ಮಪ್ರೇಮಿ ಮತ್ತು ರಾಷ್ಟ್ರ ಪ್ರೇಮಿಗಳಿಗೆ ಅನಿಸಿರುವುದರಿಂದ ಕೇಂದ್ರ ಸರಕಾರ ಇದಕ್ಕಾಗಿ ಹೆಜ್ಜೆ ಇಡಬೇಕು !