ಭಾರತದಲ್ಲಿನ ದಕ್ಷಿಣಕೊರಿಯಾದ ರಾಯಭಾರಿಯು ಹೊಸ ವಾಹನ ಖರೀದಿಸಿದ ನಂತರ ಹಿಂದೂ ಪದ್ಧತಿಯಂತೆ ಧಾರ್ಮಿಕ ಪೂಜೆ !

ನವ ದೆಹಲಿ – ಭಾರತದಲ್ಲಿನ ದಕ್ಷಿಣಕೊರಿಯಾದ ರಾಯಭಾರಿ ಕಛೇರಿಯ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ರಾಯಭಾರಿಯು ಹೊಸ ವಾಹನವನ್ನು ಖರೀದಿಸಿದನಂತರ ಅದನ್ನು ಹಿಂದೂ ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿದ್ದನ್ನು ತೋರಿಸಲಾಗಿದೆ. ಓರ್ವ ಪೊರೂಹಿತರು ಪೂಜೆ ಮಾಡುತ್ತಿರುವುದು ಕಂಡು ಬರುತ್ತದೆ.

(ಸೌಜನ್ಯ – Republic World)

ರಾಯಭಾರಿಯಿಂದ “ಹುಂಡೈ ಜೆನೆಸಿಸ್ ಜಿವಿ ೮೦’ ಕಾರನ್ನು ಖರೀದಿಸಿದೆ. ಪೂಜೆ ಮಾಡುವಾಗ ಪುರೋಹಿತರು ವೇದಮಂತ್ರಗಳನ್ನು ಪಠಿಸುತ್ತಿದ್ದಾರೆ ಮತ್ತು ಕಾರಿನ ಮೇಲೆ ಹೂವುಗಳನ್ನು ಅರ್ಪಿಸುತ್ತಿದ್ದಾರೆ ಹಾಗೆಯೇ ತೆಂಗಿನಕಾಯಿ ಒಡೆಯುವುದು ಕೂಡ ವೀಡಿಯೋದಲ್ಲಿ ಕಾಣುತ್ತಿದೆ.

ಸಂಪಾದಕೀಯ ನಿಲುವು

ಸನಾತನ ಧರ್ಮವನ್ನು ಕೊನೆಗಾಣಿಸುವ ಮಾತನಾಡುವವರಿಗೆ ಇದು ಕಪಾಳಮೋಕ್ಷ ! ಭಾರತದ ರಕ್ಷಣಾ ಸಚಿವ ರಾಜನಾಥಸಿಂಗ್ ಇವರು ರಫೇಲ್ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ಟೀಕಿಸಿದವರು ಈಗ ಬಾಯಿ ಬಿಡುವರೇ ?