Mahalakshmi Murder Case : ಬೆಂಗಳೂರು ಮಹಾಲಕ್ಷ್ಮೀ ಹತ್ಯೆ ಪ್ರಕರಣ; ಕೊಲೆಗಾರ ಆತ್ಮಹತ್ಯೆಗೆ ಶರಣು

ಆತ್ಮಹತ್ಯೆಗೂ ಮುನ್ನ ಬರೆದ ಪತ್ರ; ಹತ್ಯೆ ಮಾಡಿರುವುದಾಗಿ ಸ್ವೀಕಾರ

ಬೆಂಗಳೂರು (ಕರ್ನಾಟಕ) – ಕೆಲವು ದಿನಗಳ ಹಿಂದೆ ಮಹಾಲಕ್ಷ್ಮಿ ಎಂಬ ಮಹಿಳೆಯ ಹತ್ಯೆ ಮಾಡಿ ಆಕೆಯ ಮೃತ ದೇಹವನ್ನು ೫೯ ತುಂಡುಗಳಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಹತ್ಯೆಯ ಪ್ರಮುಖ ಆರೋಪಿ ಮುಕ್ತಿರಂಜನ ಪ್ರತಾಪ ರಾಯ ಎಂಬವನು ಒಡಿಶಾದ ಭೂಹಿನಪುರ್ ಗ್ರಾಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಮೊದಲು ಅವನು ಪತ್ರ ಬರೆದಿದ್ದು ಅದರಲ್ಲಿ ಮಹಾಲಕ್ಷ್ಮಿಯ ಹತ್ಯೆ ಸ್ವತಃ ಮಾಡಿರುವುದಾಗಿ ಬರೆದಿದ್ದಾನೆ ಎಂದು ಬೆಂಗಳೂರಿನ ಪೊಲೀಸ್ ಅಧಿಕಾರಿ ಶೇಖರ್ ಟೆಂಕನ್ನವಾರ್ ಅವರು ಮಾಹಿತಿ ನೀಡಿದರು.

ಮಹಾಲಕ್ಷ್ಮಿ ತನ್ನ ಪತಿಯನ್ನು ಬಿಟ್ಟು ಒಬ್ಬಳೇ ವಾಸಿಸುತ್ತಿದ್ದಳು. ಮುಕ್ತಿರಂಜನ್ ಮತ್ತು ಮಹಾಲಕ್ಷ್ಮಿ ಒಂದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಲ್ಲಿ ಪ್ರೇಮಸಂಬಂಧ ನಿರ್ಮಾಣವಾಯಿತು. ಮಹಾಲಕ್ಷ್ಮಿಯು ವಿವಾಹಕ್ಕಾಗಿ ಮುಕ್ತಿರಂಜನ ಮೇಲೆ ಒತ್ತಡ ಹೇರುತ್ತಿದ್ದಳು. ಇದೇ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ಪೊಲೀಸರ ಅಭಿಪ್ರಾಯವಿದೆ. ಮಹಾಲಕ್ಷ್ಮಿಯ ಹತ್ಯೆ ಬೆಳಕಿಗೆ ಬಂದ ನಂತರ ಮುಕ್ತಿರಂಜನ ರಾಯ ತನ್ನ ಮನೆಯಲ್ಲಿರಲಿಲ್ಲ. ಆದ್ದರಿಂದ ಈ ಹತ್ಯೆಯನ್ನು ಅವನೇ ಮಾಡಿರಬಹುದು ಎಂದು ಪೊಲೀಸರಿಗೆ ಮೊದಲೇ ಸಂದೇಹವಿತ್ತು.