ಶ್ರೀ ಗಣೇಶನಿಗೆ ಪೊಲೀಸರ ಸಮವಸ್ತ್ರ ತೊಡಿಸಿ ಅವನ ಮುಂದೆ ಕಲಾವಿದರ ನೃತ್ಯ !

ಟಿಪ್ಸ್ ಭಕ್ತಿ ಪ್ರೆಝೆಂಟ್ಸ್ ನ ಮೂಲಕ ವ್ಯಸನ ಮುಕ್ತಿಗಾಗಿ ತಥಾಕಥಿತ ಅರಿವು ಮೂಡಿಸುವ ಪ್ರಯತ್ನ !

ಮುಂಬಯಿ – ಗಣೇಶೋತ್ಸವದ ಪ್ರಯುಕ್ತ ‘ಟಿಪ್ಸ್ ಭಕ್ತಿ ಪ್ರೆಸೆಂಟ್ಸ್’ ಇಂದ ‘ಗಣೇಶ ಚತುರ್ಥಿ ೨೦೨೩ ಸ್ಪೆಷಲ್ ಸಾಂಗ್ ಪೊಲೀಸ ಬಪ್ಪ’ ಎಂದು ‘ನಶೆ ಮುಕ್ತಿ’ ಈ ಹಾಡನ್ನು ಪ್ರಸಾರ ಮಾಡಿದರು. ಇದರಲ್ಲಿ ಶ್ರೀ ಗಣೇಶ ವಂದನೆ ಮಾಡುತ್ತಾ ಕಲಾವಿದರು ಶ್ರೀ ಗಣೇಶನ ಮುಂದೆ ನೃತ್ಯ ಮಾಡಿದರು. ಈ ಗೀತೆಯಲ್ಲಿ ಶ್ರೀಗಣೇಶನಿಗೆ ಶಾಸ್ತ್ರದ ಪ್ರಕಾರ ತೋರಿಸುವ ಬದಲು ಪೊಲೀಸ ಸಮವಸ್ತ್ರದಲ್ಲಿ ತೋರಿಸಲಾಗಿದೆ.

(ಸೌಜನ್ಯ – Bollywood Life)

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)

ಅನಿಲ್ ಕಪೂರ್, ಪದ್ಮಿನಿ ಕೊಲ್ಲಾಪುರೆ, ಅನು ಮಲಿಕ, ಉಷಾ ನಾಡಕರ್ಣಿ, ರಾಕಿ ಟೆಂಡನ್, ಮುಂತಾದ ಕಲಾವಿದರು ಈ ಗೀತೆಗೆ ನೃತ್ಯ ಮಾಡಿದರು.

(‘ಶ್ರೀ ಗಣೇಶನ ರೂಪ ಹೇಗೆ ಇರಬೇಕು? ಇದು ಶಾಸ್ತ್ರದಲ್ಲಿ ಹೇಳಿದ್ದಾರೆ. ಆದ್ದರಿಂದ ಪೂಜೆಗಾಗಿ ಶಾಸ್ತ್ರದಲ್ಲಿ ಹೇಳಿರುವ ಹಾಗೆ ದೇವರ ಮೂರ್ತಿ ಇರುವುದು, ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭಕಾರಕವಾಗಿರುತ್ತದೆ. ತತ್ವಿರುದ್ಧ ನೂತನಿಕರಣದ ಹೆಸರಿನಲ್ಲಿ ದೇವರ ರೂಪ ಅಶಾಸ್ತ್ರಿಯ ರೀತಿಯಲ್ಲಿ ನಿರ್ಮಿಸುವುದು, ಇದು ಆ ದೇವರ ತತ್ವಕ್ಕೆ ಅವಮಾನವಾಗಿದೆ ! – ಸಂಪಾದಕರು)

(ಸೌಜನ್ಯ – Tips Bhakti Prem)

ಸಂಪಾದಕೀಯ ನಿಲುವು

ಅರಿವು ಮೂಡಿಸುವುದಕ್ಕಾಗಿ ದೇವರನ್ನು ಮನುಷ್ಯನಾಗಿ ತೋರಿಸುವುದು ದೇವತೆಗಳ ವಿಡಂಬನೆ ಆಗಿದೆ, ಇದು ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದೆ ಇರುವುದರಿಂದ ಗಮನಕ್ಕೆ ಬರುವುದಿಲ್ಲ !

ಇತರ ಧರ್ಮದ ಕಲಾವಿದರು ಅವರ ಶ್ರದ್ಧಾಸ್ಥಾನದ ವಿಡಂಬನೆ ಮಾಡುವುದನ್ನು ಎಂದಾದರೂ ನೋಡಿದ್ದೀರಾ ? ಹಿಂದೂ ಕಲಾವಿದರು ಮಾತ್ರ ಹಣಕ್ಕಾಗಿ ಈ ರೀತಿ ಮಾಡುತ್ತಾರೆ !