ಪಾಕಿಸ್ತಾನದಲ್ಲಿ ಸಿಖ್ಖರನ್ನು ಕೊಲ್ಲುವುದಾಗಿ ಮತಾಂಧ ಮುಸ್ಲಿಮರಿಂದ ಬೆದರಿಕೆ !

ರಾವಲ್ಪಿಂಡಿ (ಪಾಕಿಸ್ತಾನ) – ಶೀಘ್ರದಲ್ಲೇ ಹಜ್ರೋ, ಹಾಸನಾಬಾದ್, ತಕ್ಷಶಿಲಾ, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ನಲ್ಲಿನ ಸಿಖ್ಖರ ನರಮೇಧ ಮಾಡಲಾಗುವುದು. ಪಾಕಿಸ್ತಾನವು ಸಿಖ್ ರಾಷ್ಟ್ರವಾಗಿರದೇ ಮುಸಲ್ಮಾನರ ರಾಷ್ಟ್ರವಾಗಿದೆ ಎಂದು ಅಪರಿಚಿತ ವ್ಯಕ್ತಿಗಳು ಸಿಖ್ ವ್ಯಕ್ತಿಗೆ ಕರಪತ್ರ ನೀಡಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ರಾಮ್ ಸಿಂಗ್ ಎಂಬ ಸಿಖ್ ವ್ಯಕ್ತಿಯು ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಶಿಲಾಗೆ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಈ ಕರಪತ್ರವನ್ನು ರಾಮ್ ಸಿಂಗ್ ಮೇಲೆ ಎಸೆದಿದ್ದಾರೆ. ರಾಮ್ ಸಿಂಗ್ ಇವರು ಸಿಖ್ಖರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಖಲಿಸ್ತಾನದ ಬೇಡಿಕೆ ಮಾಡುವವರು ಈ ಬಗ್ಗೆ ಬಾಯಿ ಬಿಡುವರೇ ? ಕೆನಡಾದಿಂದ ಹಿಂದೂಗಳನ್ನು ಹೊರಹಾಕುವುದಾಗಿ ಬೆದರಿಕೆ ಹಾಕುವ ಖಲಿಸ್ತಾನಿಗಳು ಪಾಕಿಸ್ತಾನದ ವಿರುದ್ಧ ಏಕೆ ಮಾತನಾಡುತ್ತಿಲ್ಲ ?