ಭಾರತೀಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೇ ಕಾಲ್ಕಿತ್ತ ಜಸ್ಟಿನ್ ಟ್ರುಡೊ !

ಖಾಲಿಸ್ತಾನಿ ಭಯೋತ್ಪಾದಕನ ಹತ್ಯೆ ಪ್ರಕರಣ !

ನ್ಯೂಯಾರ್ಕ್ (ಅಮೇರಿಕಾ) – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊರವರು ಇಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಸಹಭಾಗಿಯಾಗಲು ಬಂದಿದ್ದಾರೆ. ಈ ಸಮಯದಲ್ಲಿ ಭಾರತೀಯ ವಾರ್ತಾಸಂಸ್ಥೆ `ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ ಪತ್ರಕರ್ತರು ಟ್ರುಡೊರವರಿಗೆ ಭಾರತದ ಮೇಲೆ ಅವರು ಮಾಡಿರುವ ಆರೋಪವನ್ನು ಭಾರತವು ತಿರಸ್ಕರಿಸಿರುವ ಬಗ್ಗೆ ಪ್ರಶ್ನಿಸಿದರು. ಟ್ರುಡೊರವರು ಈ ಪ್ರಶ್ನೆಯನ್ನು ಉತ್ತರಿಸದೇ ಹೊರಟುಹೋದರು. ಪತ್ರಕರ್ತರು ಟ್ರುಡೊರವರ ಹಿಂದೆ ಹೋಗಿ ಅವರಿಗೆ ಪುನಃ ಇದೆ ಪ್ರಶ್ನೆಯನ್ನು ಕೇಳಿದಾಗ ಅವರು ಇನ್ನೂ ವೇಗವಾಗಿ ಹೊರಟುಹೋದರು.

ಸಂಪಾದಕೀಯ ನಿಲುವು

ಟ್ರುಡೊರವರ ಬಳಿ ಭಾರತದ ಮೇಲೆ ಮಾಡಿರುವ ಸುಳ್ಳು ಆರೋಪಗಳ ಬಗ್ಗೆ ಉತ್ತರಿಸಲು ಏನೂ ಇಲ್ಲದಿರುವುದರಿಂದ ಈಗ ಅವರು ಪಲಾಯನ ಮಾಡುತ್ತಿದ್ದಾರೆ, ಇದನ್ನು ಜಗತ್ತು ನೋಡುತ್ತಿದೆ !