ಕಾಲಭೈರವರಿಗಾಗಿ ಮುಖ್ಯ ಕುರ್ಚಿ ಹಾಗೂ ಪಕ್ಕದಲ್ಲಿರುವ ಕುರ್ಚಿಯಲ್ಲಿ ಪೊಲೀಸ ಅಧಿಕಾರಿಗಳು ಕುಳಿತು ಕೆಲಸ ಮಾಡುತ್ತಿದ್ದಾರೆ !

ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿಯ ನ್ಯಾಯಾಲಯದ ಪ್ರಕರಣದಿಂದಾಗಿ ಸಮಸ್ತ ಭಾರತೀಯರ ಗಮನವು ಪ್ರಾಚೀನ ನಗರವಾದ ವಾರಾಣಸಿಯ ಕಡೆಗೆ ಹೊರಳಿದ್ದು ಇಲ್ಲಿ ಕಾಶಿ ವಿಶ್ವನಾಥನ ರೂಪವಾಗಿರುವ ಬಾಬಾ ಕಾಲಭೈರವನನ್ನು `ಕೊತವಾಲ’ ಎಂದು ಕರೆಯಲಾಗುತ್ತದೆ. ಜನರಲ್ಲಿ ಬಾಬಾ ಕಾಲಭೈರವರು ಇಲ್ಲಿನ ಒಂದು ಪೊಲೀಸ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಶ್ರದ್ಧೆಯಿದೆ. ಅವರಿಗಾಗಿ ಅಲ್ಲಿ ಮುಖ್ಯ ಕುರ್ಚಿ, ಮೇಜು ಹಾಗೂ ಟೊಪ್ಪಿಯನ್ನೂ ಇಡಲಾಗಿದೆ. ಹಾಗೆಯೇ ಠಾಣೆಯ ಸರಕಾರಿ ಪೊಲೀಸ ಅಧಿಕಾರಿಗಳು ಹತ್ತಿರದ ಕುರ್ಚಿಯಲ್ಲಿ ಕುಳಿತು ಠಾಣೆಯ ಕೆಲಸ ಮಾಡುತ್ತಾರೆ. ಅವರು ಪ್ರತಿದಿನ ಬಾಬಾ ಕಾಲಭೈರವರ ಆಶೀರ್ವಾದವನ್ನು ಪಡೆದು ಕೆಲಸವನ್ನು ಆರಂಭಿಸುತ್ತಾರೆ. ಬಾಬಾ ವಿಶ್ವನಾಥರೇ ಇಲ್ಲಿ ಬಾಬಾ ಕಾಲಭೈರವರ ನಿಯುಕ್ತಿ ಮಾಡಿದ್ದರು, ಎಂಬುದು ಇಲ್ಲಿನ ಹಿಂದೂಗಳ ಶ್ರದ್ಧೆಯಾಗಿದೆ.
वाराणसी में कोतवाली थाने में कुर्सी पर बैठते हैं बाबा कालभैरव, पूजा से होती है दिन की शुरुआत @nitishpandey201 की रिपोर्ट #Varansi #KalBhairav #UttarPradeshhttps://t.co/ntcXRXa7vI
— ABP Ganga (@AbpGanga) July 29, 2021
ವಾರಾಣಸಿಯಲ್ಲಿ ಬಾಜಿರಾವ ಪೇಶ್ವೇಯವರು ೧೮೧೫ರಲ್ಲಿ ಬಾಬಾ ಕಾಲಭೈರವರ ದೇವಸ್ಥಾನವನ್ನು ನಿರ್ಮಿಸಿದ್ದರು. ಇಲ್ಲೇ ಇರುವ ಪೊಲೀಸ ಠಾಣೆಯಲ್ಲಿ ಹೊಸ ಪೊಲೀಸ ಅಧಿಕಾರಿಯನ್ನು ನೇಮಿಸಿದಾಗ ಅವರಿಗೆ ಬಾಬಾರವರ ದರಬಾರಿನಲ್ಲಿ ಹಾಜರರಿರಬೇಕಾಗುತ್ತದೆ. ಆನಂತರವೇ ಅವರು ಠಾಣೆಯ ಜವಾಬ್ದಾರಿಯನ್ನು ವಹಿಸುತ್ತಾರೆ.
(ಸೌಜನ್ಯ – Bharat Adda India)
ಸಂಪಾದಕೀಯ ನಿಲುವುಹಿಂದೂಗಳ ಹೃದಯದಲ್ಲಿರುವ ಅದ್ವಿತೀಯ ಶ್ರದ್ಧೆಯೇ ಹಿಂದೂ ಧರ್ಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಆಧಾರವಾಗಿದೆ. ಈ ಉದಾಹರಣೆಯು ಇದರ ಪ್ರತೀಕ ! |
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ