ಕಾಲಭೈರವರಿಗಾಗಿ ಮುಖ್ಯ ಕುರ್ಚಿ ಹಾಗೂ ಪಕ್ಕದಲ್ಲಿರುವ ಕುರ್ಚಿಯಲ್ಲಿ ಪೊಲೀಸ ಅಧಿಕಾರಿಗಳು ಕುಳಿತು ಕೆಲಸ ಮಾಡುತ್ತಿದ್ದಾರೆ !

ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿಯ ನ್ಯಾಯಾಲಯದ ಪ್ರಕರಣದಿಂದಾಗಿ ಸಮಸ್ತ ಭಾರತೀಯರ ಗಮನವು ಪ್ರಾಚೀನ ನಗರವಾದ ವಾರಾಣಸಿಯ ಕಡೆಗೆ ಹೊರಳಿದ್ದು ಇಲ್ಲಿ ಕಾಶಿ ವಿಶ್ವನಾಥನ ರೂಪವಾಗಿರುವ ಬಾಬಾ ಕಾಲಭೈರವನನ್ನು `ಕೊತವಾಲ’ ಎಂದು ಕರೆಯಲಾಗುತ್ತದೆ. ಜನರಲ್ಲಿ ಬಾಬಾ ಕಾಲಭೈರವರು ಇಲ್ಲಿನ ಒಂದು ಪೊಲೀಸ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಶ್ರದ್ಧೆಯಿದೆ. ಅವರಿಗಾಗಿ ಅಲ್ಲಿ ಮುಖ್ಯ ಕುರ್ಚಿ, ಮೇಜು ಹಾಗೂ ಟೊಪ್ಪಿಯನ್ನೂ ಇಡಲಾಗಿದೆ. ಹಾಗೆಯೇ ಠಾಣೆಯ ಸರಕಾರಿ ಪೊಲೀಸ ಅಧಿಕಾರಿಗಳು ಹತ್ತಿರದ ಕುರ್ಚಿಯಲ್ಲಿ ಕುಳಿತು ಠಾಣೆಯ ಕೆಲಸ ಮಾಡುತ್ತಾರೆ. ಅವರು ಪ್ರತಿದಿನ ಬಾಬಾ ಕಾಲಭೈರವರ ಆಶೀರ್ವಾದವನ್ನು ಪಡೆದು ಕೆಲಸವನ್ನು ಆರಂಭಿಸುತ್ತಾರೆ. ಬಾಬಾ ವಿಶ್ವನಾಥರೇ ಇಲ್ಲಿ ಬಾಬಾ ಕಾಲಭೈರವರ ನಿಯುಕ್ತಿ ಮಾಡಿದ್ದರು, ಎಂಬುದು ಇಲ್ಲಿನ ಹಿಂದೂಗಳ ಶ್ರದ್ಧೆಯಾಗಿದೆ.
वाराणसी में कोतवाली थाने में कुर्सी पर बैठते हैं बाबा कालभैरव, पूजा से होती है दिन की शुरुआत @nitishpandey201 की रिपोर्ट #Varansi #KalBhairav #UttarPradeshhttps://t.co/ntcXRXa7vI
— ABP Ganga (@AbpGanga) July 29, 2021
ವಾರಾಣಸಿಯಲ್ಲಿ ಬಾಜಿರಾವ ಪೇಶ್ವೇಯವರು ೧೮೧೫ರಲ್ಲಿ ಬಾಬಾ ಕಾಲಭೈರವರ ದೇವಸ್ಥಾನವನ್ನು ನಿರ್ಮಿಸಿದ್ದರು. ಇಲ್ಲೇ ಇರುವ ಪೊಲೀಸ ಠಾಣೆಯಲ್ಲಿ ಹೊಸ ಪೊಲೀಸ ಅಧಿಕಾರಿಯನ್ನು ನೇಮಿಸಿದಾಗ ಅವರಿಗೆ ಬಾಬಾರವರ ದರಬಾರಿನಲ್ಲಿ ಹಾಜರರಿರಬೇಕಾಗುತ್ತದೆ. ಆನಂತರವೇ ಅವರು ಠಾಣೆಯ ಜವಾಬ್ದಾರಿಯನ್ನು ವಹಿಸುತ್ತಾರೆ.
(ಸೌಜನ್ಯ – Bharat Adda India)
ಸಂಪಾದಕೀಯ ನಿಲುವುಹಿಂದೂಗಳ ಹೃದಯದಲ್ಲಿರುವ ಅದ್ವಿತೀಯ ಶ್ರದ್ಧೆಯೇ ಹಿಂದೂ ಧರ್ಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಆಧಾರವಾಗಿದೆ. ಈ ಉದಾಹರಣೆಯು ಇದರ ಪ್ರತೀಕ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.