ಸನಾತನ ಧರ್ಮದ ವಿರುದ್ಧ ಮುಂದಿನ ೨೦೦ ವರ್ಷಗಳ ಕಾಲ ಮಾತನಾಡುತ್ತೇವೆ !(ಅಂತೆ) – ಉದಯನಿಧಿ ಸ್ಟಾಲಿನ್

ಮತ್ತೊಮ್ಮೆ ವಿಷ ಕಕ್ಕಿದ ಉದಯನಿಧಿ ಸ್ಟಾಲಿನ್ !

ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿ ಕಳೆದ ೧೦೦ ವರ್ಷಗಳಿಂದ ಸನಾತನ ಧರ್ಮದ ವಿರುದ್ಧ ಧ್ವನಿಯತ್ತಲಾಗಿದೆ. ನಾವು ಮುಂದಿನ ೨೦೦ ವರ್ಷಗಳ ಕಾಲ ಅದರ ವಿರುದ್ಧ ಮಾತನಾಡುತ್ತಿರುತ್ತೇವೆ, ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇವರ ಪುತ್ರ ಮತ್ತು ರಾಜ್ಯದ ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಇವರು ಮತ್ತೊಮ್ಮೆ ಸನಾತನ ಧರ್ಮವನ್ನು ಟೀಕಿಸುತ್ತಾ ಪ್ರಚೋದನಕಾರಿ ಹೇಳಿಕೆ ನೀಡಿದರು. ಕುಡ್ದಲೂರು ಜಿಲ್ಲೆಯಲ್ಲಿನ ನೇವೇಲಿ ಇಲ್ಲಿ ಅವರು ಮಾತನಾಡುತ್ತಿದ್ದರು.

ಉದಯನಿಧಿ ಮಾತು ಮುಂದುವರಿಸಿ, ಈ ಹಿಂದೆ ಅನೇಕ ಘಟನೆಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ಮತ್ತು ಎಂ. ಕರುಣಾನಿಧಿ ಇದರ ಬಗ್ಗೆ ಮಾತನಾಡಿದ್ದರು. ಸನಾತನ ಧರ್ಮಕ್ಕೆ ತೀವ್ರ ವಿರೋಧದಿಂದ ಮಹಿಳೆಯರು ಮನೆಯಿಂದ ಹೊರಬರಲು ಸಾಧ್ಯವಾಯಿತು. ಸತಿ ಪದ್ಧತಿ ಹಾಗೆ ಸಾಮಾಜಿಕ ಪಿಡುಗು ಅದರಿಂದ ಮುಗಿಯಿತು. (ಸನಾತನ ಧರ್ಮದಲ್ಲಿ ಕಾಲಕ್ಕನಸಾರ ನಿರ್ಮಾಣವಾಗಿರುವ ಅಯೋಗ್ಯ ಪದ್ಧತಿಗಳನ್ನು ಸನಾತನ ಧರ್ಮದಲ್ಲಿನ ಸಂತರು ಕೂಡ ಅದನ್ನು ವಿರೋಧಿಸಿದರು ಮತ್ತು ನಾಶ ಮಾಡಲು ಪ್ರಯತ್ನಿಸಿದರು. ಈ ಸಂತರು ‘ಸನಾತನ ಧರ್ಮ ತಪ್ಪಾಗಿದೆ’ ಅಥವಾ ‘ಅದನ್ನು ನಾಶಗೊಳಿಸಿ’ ಎಂದು ಹೇಳಲಿಲ್ಲ, ಬದಲಾಗಿ ಅಯೋಗ್ಯ ವಿಷಯಗಳಿಗೆ ವಿರೋಧಿಸಿದರು. ದ್ರಮುಕದ ಸ್ಥಾಪನೆ ಇಂತಹ ಸಮಾಜಕಂಟಕಗಳಿಗೆ ವಿರೋಧಿಸುವ ತತ್ವದ ಆಧಾರದಲ್ಲಿ ಆಗಿದೆ. (ದ್ರಮುಕದ ಸ್ಥಾಪನೆ ಸನಾತನ ದ್ವೇಷದಿಂದ ಆಗಿರುವುದರಿಂದ ಉದಯನಿಧಿ ಇವರ ಹೇಳಿಕೆಯಿಂದ ದಲಿತರು, ಹಿಂದುಳಿದವರ ಮುಂತಾದವರ ಮತಗಳನ್ನು ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ದ್ರಮುಕದ ವಿಚಾರಧಾರೆ ನಾಶ ಮಾಡುವುದಕ್ಕಾಗಿ ಹಿಂದುಗಳು ಸಂಘಟನೆಗಳಿಂದ ತಮಿಳುನಾಡಿನಲ್ಲಿ ಹಿಂದುಗಳಿಗೆ ಧರ್ಮಶಿಕ್ಷಣ ನೀಡಲು ಪ್ರಾರಂಭಿಸಿ ಸನಾತನ ಧರ್ಮದ ಬಗ್ಗೆ ಇರುವ ತಪ್ಪು ತಿಳುವಳಿಕೆ ದೂರಗೊಳಿಸಬೇಕು ! – ಸಂಪಾದಕರು)

ಉದಯನಿಧಿ ಇವರಿಂದ ಭಾಜಪವನ್ನು ಕಸದೊಂದಿಗೆ ತುಲನೆ !

ಭಾಜಪವನ್ನು ಟಿಕೀಸುವಾಗ ಉದಯನಿಧಿ, ಕಸದಿಂದ ಹಾವು ನಮ್ಮ ಮನೆಗೆ ಬರುತ್ತದೆ. ಹಾವನ್ನು ಮುಗಿಸಬೇಕಾದರೆ, ಅಲ್ಲಿ ಕಸ ಇರದಂತೆ ಕಾಳಜಿವಹಿಸಬೇಕು ೨೦೨೪ ರಲ್ಲಿ ನಡೆಯುವ ಚುನಾವಣೆಯಲ್ಲಿ ಭಾಜಪ ಮತ್ತು ಅಣ್ಣಾದ್ರಮುಕ ಇವರನ್ನು ತಮಿಳುನಾಡಿನಿಂದ ಗಡಿ ಪಾರು ಮಾಡಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಾವಿರಾರು ವರ್ಷಗಳಿಂದ ಅಸುರ ಮತ್ತು ಕೆಲವು ಶತಮಾನಗಳ ಕಾಲ ಮೊಘಲರು ಸನಾತನ ಧರ್ಮ ನಾಶ ಮಾಡಲು ಪ್ರಯತ್ನ ಮಾಡಿದರು; ಆದರೆ ಸನಾತನ ಧರ್ಮ ಇಂದಿಗೂ ಜೀವಂತವಾಗಿದೆ, ನಾಶ ಮಾಡುತ್ತಾ ಸ್ವತಃ ನಾಶವಾದರು, ಇದೆ ಪುನರಾವರ್ತನೆ ಆಗುತ್ತದೆ !