ಉದಯ ನಿಧಿ ಇವರ ಹೇಳಿಕೆಗೆ ಉತ್ತರ ನೀಡಿ ! – ಪ್ರಧಾನಮಂತ್ರಿ ಮೋದಿ

ಪ್ರಧಾನಮಂತ್ರಿ ಮೋದಿ ಇವರಿಂದ ಕೇಂದ್ರ ಸಚಿವರಿಗೆ ಆದೇಶ !

ನವ ದೆಹಲಿ – ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ಪುತ್ರ ಮತ್ತು ಸಚಿವ ಉದಯನಿಧಿ ಇವರು ಸನಾತನ ಧರ್ಮ ಮುಗಿಸುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮೊಟ್ಟಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿ ಮೋದಿ ಇವರು ಉದಯನಿಧಿ ಇವರ ಹೇಳಿಕೆಗೆ ಯೋಗ್ಯವಾದ ಉತ್ತರ ನೀಡಿರಿ, ಅದನ್ನು ಸಹಿಸಕೊಳ್ಳದಿರಿ ಎಂದು ಆದೇಶ ನೀಡಿದ್ದಾರೆ.
ಪ್ರಧಾನಮಂತ್ರಿ ಮೋದಿ ಇವರು, ವಿರೋಧ ಪಕ್ಷಗಳಿಂದ ‘ಭಾರತ’ ಮತ್ತು ‘ಇಂಡಿಯಾ’ ಹೀಗೆ ವಿವಾದ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಹೇಳಿಕೆ ನೀಡಬಾರದು. ಈ ಸಂದರ್ಭದಲ್ಲಿ ಅಧಿಕೃತ ವ್ಯಕ್ತಿಗಳೇ ಮಾತನಾಡಬೇಕು. ಇತಿಹಾಸಕ್ಕೆ ಜಾರದೆ ಸಂವಿಧಾನದ ಆಧಾರದಲ್ಲಿ ಮಾತನಾಡಬೇಕು ಎಂದು ಹೇಳಿದರು.