
ವಡೋದರಾ (ಗುಜರಾತ್) – ಮುಸ್ಲಿಂ ಯುವತಿಯರೊಂದಿಗೆ ಕಂಡ ಹಿಂದೂ ಯುವಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾ ಪೊಲೀಸರು 4 ಮುಸಲ್ಮಾನರನ್ನು ಬಂಧಿಸಿದ್ದಾರೆ. ಯಾಕಿಬ್ ಅಲಿ ಶೇಖ್, ನೌಮಾನ ಶೇಖ, ಮೊಹಸಿನ ಪಠಾಣ ಮತ್ತು ಅಬರಾರ ಖಾನ ಸಿಂಧಿ ಎಂದು ಗುರುತಿಸಲಾಗಿದೆ. ಇದಲ್ಲದೇ ಇತರೆ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ‘ಆರ್ಮಿ ಆಫ್ ಮೆಹಂದಿ’ ಹೆಸರಿನ ‘ವಾಟ್ಸಾಪ್ ಗುಂಪಿ’ಗೆ ಸೇರಿದವರಾಗಿದ್ದಾರೆ.
ಈ ಮತಾಂಧರು ಕಳೆದ 5 ತಿಂಗಳಲ್ಲಿ ಕನಿಷ್ಠ 15 ಹಿಂದೂ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ಥಳಿಸಿದ್ದಾರೆ. ಈ ಮತಾಂಧರ ಗುಂಪು ಮುಸ್ಲಿಂ ಹುಡುಗಿ ಹಿಂದೂ ಹುಡುಗನೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವುದನ್ನು ಕಂಡ ಕೂಡಲೇ ಅವರನ್ನು ತಡೆದು, ಅವರ ವಿಡಿಯೋ ಮಾಡಿ ಹಿಂದೂ ಹುಡುಗನನ್ನು ಥಳಿಸುತ್ತಾರೆ. ಇದಕ್ಕಾಗಿ, ಮತಾಂಧರು ಫೆಬ್ರುವರಿ 2023 ರಲ್ಲಿ ‘ಹುಸೇನಿ ಲಷ್ಕರ್’ ಎಂಬ ಹೆಸರಿನ 500 ಜನರ ‘ವಾಟ್ಸಾಪ್ ಗುಂಪ’ನ್ನು ರಚಿಸಿದ್ದರು. ಪೊಲೀಸರಿಗೆ ಅನುಮಾನ ಬಾರದಂತೆ ಆರೋಪಿಗಳು ಯಾವುದೇ ‘ವಾಟ್ಸಾಪ್ ಗ್ರೂಪ್’ ಅನ್ನು ಕೇವಲ 3 ರಿಂದ 4 ತಿಂಗಳ ಕಾಲ ಸಕ್ರಿಯವಾಗಿರಿಸಿಕೊಳ್ಳುತ್ತಿದ್ದರು ನಂತರ ಗ್ರೂಪ್ ಅನ್ನು ಸ್ಥಗಿತಗೊಳಿಸಿ ಹೊಸ ಗುಂಪನ್ನು ಸ್ಥಾಪಿಸುತ್ತಿದ್ದರು. ‘ಹುಸೇನಿ ಲಷ್ಕರ್’ ನಂತರ, ‘ಆರ್ಮಿ ಆಫ್ ಮೆಹಂದಿ’ ಮತ್ತು ನಂತರ ‘ಲಷ್ಕರ್-ಎ-ಆದಮ್’ ಈ ಹೆಸರಿನ ಅಡಿಯಲ್ಲಿ ಗುಂಪನ್ನು ಸ್ಥಾಪಿಸಲಾಗಿತ್ತು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ऐप से पता लगाते थे वाहन मालिक का नाम, हिंदू होने पर करते हमला: इस्लामी कट्टरपंथियों के व्हाट्सएप ग्रुप को लेकर नया खुलासा, 4 गिरफ्तार#Gujarat #Vadodara https://t.co/9bfirqgfmZ
— ऑपइंडिया (@OpIndia_in) September 1, 2023
ಸಂಪಾದಕರ ನಿಲುವು* ಮತಾಂಧ ಮುಸಲ್ಮಾನರು ! ಯಾವಾಗಲೂ ಮುಸಲ್ಮಾನ ಯುವಕ ಮತ್ತು ಹಿಂದೂ ಯುವತಿಯರನ್ನು ವಿರೋಧಿಸುವ ಹಿಂದೂಗಳಿಗೆ `ಸ್ನೇಹ ಅಥವಾ ಪ್ರೀತಿಗೆ ಬಣ್ಣವಿಲ್ಲ’ ಎಂದು ಉಪದೇಶಿಸುವವರು ಈಗ ಯಾವ ಬಿಲದಲ್ಲಿ ಹೋಗಿ ಅಡಗಿ ಕುಳಿತಿದ್ದಾರೆ ? |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ