ಇಸ್ಲಾಮಿಕ್ ಸ್ಟೇಟ್ ನ ಮುಖಪುಟದಲ್ಲಿ ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುವ ಬೆದರಿಕೆ

  • ನೂಹ (ಹರಿಯಾಣ)ನಲ್ಲಿ ಹಿಂದುಗಳ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ನಡೆದ ದಾಳಿಯ ಪ್ರಕರಣ

  • ಮುಖಪುಟದಲ್ಲಿ ತ್ರಿಶೂಲ ಮತ್ತು ಬುಲ್ಡೋಜರ್ ನ ಛಾಯಾಚಿತ್ರ


ನೂಹ (ಹರಿಯಾಣ) – ಜುಲೈ ೩೧ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿತ್ತು. ಇದರಲ್ಲಿ ಕೆಲವು ಹಿಂದೂಗಳು ಮೃತಪಟ್ಟಿದ್ದರು. ಈಗ ಇದೇ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅದರ ‘ವಾಯ್ಸ್ ಆಫ್ ಖುರಾಸನ’ದ ಮುಖಪುಟದಲ್ಲಿ ನೂಹದಲ್ಲಿನ ಹಿಂಸಾಚಾರಕ್ಕೆ ಹಿಂದುಗಳೇ ಹೊಣೆ ಎಂದು ಹೇಳಿ ಸೇಡು ತೀರಿಸಿಕೊಳ್ಳುವ ಬೆದರಿಕೆ ನೀಡಿದೆ. ಹಾಗೂ ಇದರಲ್ಲಿ ಜ್ಞಾನವಾಪಿಯ ಉಲ್ಲೇಖ ಕೂಡ ಮಾಡಿದ್ದಾರೆ. ಭಾರತದಲ್ಲಿನ ಹಿಂದೂಗಳಿಗೆ ಜಿಹಾದ್ ಗಾಗಿ ಪ್ರಚೋದನೆ ನೀಡುವ ಪ್ರಯತ್ನ ಮಾಡಲಾಗಿದೆ. ಇಸ್ಲಾಮಿಕ್ ಸ್ಟೇಟ್ ನ ಮುಖಪುಟ ‘ಟೆಲಿಗ್ರಾಂ’ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ.

೧. ಈ ಮುಖಪುಟದ ಮೇಲೆ ತ್ರಿಶೂಲ ಮತ್ತು ಬುಲ್ಡೋಜರ್ ತೋರಿಸಲಾಗಿದೆ. ಇದರಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಬಗ್ಗೆ ಅವಾಚ್ಯ ಪದಗಳನ್ನು ಉಪಯೋಗಿಸಲಾಗಿದೆ. ನೂಹದ ಪ್ರಕರಣದಲ್ಲಿ ಗೋರಕ್ಷ ಮೋನು ಮಾನೆಸರ ಮತ್ತು ಬಿಟ್ಟು ಬಜರಂಗಿ ಇವರ ಉಲ್ಲೇಖ ಕೂಡ ಮಾಡಲಾಗಿದೆ. ಪೊಲೀಸರು ಬಿಟ್ಟು ಭಜರಂಗಿ ಇವನನ್ನು ಬಂಧಿಸಿದ್ದಾರೆ ಹಾಗೂ ಬಜರಂಗದಳದಿಂದ ‘ಅವನು ನಮ್ಮ ಕಾರ್ಯಕರ್ತನಲ್ಲ’ ಎಂದು ಘೋಷಿಸಿದ್ದಾರೆ.

೨. ಹಿಂದುಗಳ ಪ್ರಚೋದನಕಾರಿ ವಿಡಿಯೋಯಿಂದ ಮುಸಲ್ಮಾನರ ೫೦೦ ಮನೆಗಳು ನೆಲೆಸಮ ಮಾಡಲಾಗಿದೆ ಮತ್ತು ಅದನ್ನು ಹರಿಯಾಣದ ಗೃಹ ಸಚಿವರು ಅನಿಲ್ ವಿಜ ಇವರು ಬೆಂಬಲಿಸಿರುವ ದಾವೆಯನ್ನು ಈ ಮುಖಪುಟದಲ್ಲಿ ಮಾಡಲಾಗಿದೆ. ಹಾಗೂ ಅನಿಲ ವಿಜ ಇವರ ಹೆಸರು ಹೇಳಿ ಸೇಡು ತೀರಿಸಿಕೊಳ್ಳುವ ಬೆದರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇದಕ್ಕೆ ಕಳ್ಳನಿಗೊಂದು ಪಿಳ್ಳನೆವ ಅನ್ನುತ್ತಾರೆ !

ಜಿಹಾದಿ ಭಯೋತ್ಪಾದಕರು ಮತ್ತು ಮತಾಂಧ ಮುಸಲ್ಮಾನರಿಂದ ಹಿಂದುಗಳ ರಕ್ಷಣೆಗಾಗಿ ಸರಕಾರ ಏನಾದರೂ ಮಾಡುವುದೇ ?