ಭಾಗ್ಯನಗರ (ತೆಲಂಗಾಣ)ದಲ್ಲಿ ಅಪ್ರಾಪ್ತ ದಲಿತ ಹುಡುಗಿಯ ಮೇಲೆ 8 ಜನರಿಂದ ಸಾಮೂಹಿಕ ಬಲಾತ್ಕಾರ !

ಅಬೆದ ಲಾಲಾ ಸಹಿತ 3 ಜನರ ಬಂಧನ !

ಭಾಗ್ಯನಗರ (ತೆಲಂಗಾಣ) – ಇಲ್ಲಿ ಒಂದು ಅನಾಥ ಹಾಗೂ ಅಪ್ರಾಪ್ತ ದಲಿತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರವಾಗಿರುವ ಘಟನೆಯು ಬೆಳಕಿಗೆ ಬಂದಿದೆ. ಆಗಸ್ಟ್ 21ರ ಬೆಳಿಗ್ಗೆ ಮಾದಕ ಪದಾರ್ಥವನ್ನು ಸೇವಿಸಿದ್ದ 8 ಜನರು ಹುಡುಗಿಯ ಮನೆಗೆ ನುಗ್ಗಿ ಕಿರಿಯ ಸಹೋದರನ ಎದುರಿನಲ್ಲಿಯೇ ಆಕೆಯ ಕುತ್ತಿಗೆಯ ಮೇಲೆ ಚಾಕೂ ಹಿಡಿದು ಆಕೆಯ ಮೇಲೆ ಬಲಾತ್ಕಾರ ಮಾಡಿದರು. ಆನಂತರ ಬಲಾತ್ಕಾರಿಗಳು ಆಕೆಯನ್ನು ಕಟ್ಟಡದ ಮೂರನೇ ಮಹಡಿಗೆ ಒಯ್ದರು. ಅಲ್ಲಿಯವರೆಗೆ ಮನೆಯಲ್ಲಿದ್ದ 4 ಚಿಕ್ಕ ಮಕ್ಕಳು ಮನೆಯ ಹೊರಗೆ ಹೋಗದಂತೆ ಕೆಲವು ಬಲಾತ್ಕಾರಿಗಳು ತಡೆದರು. ಸಂತ್ರಸ್ತೆಯ ಸಹೋದರನು ಇದನ್ನು ವಿರೋಧಿಸಿದ್ದರಿಂದ ಅವನನ್ನು ಅಮಾನುಷವಾಗಿ ಥಳಿಸಲಾಯಿತು. ಸಂತ್ರಸ್ತೆಯ ಮೂರನೇ ಮಹಡಿಯಲ್ಲಿ ಕಿರುಚಾಡಿದ್ದರಿಂದ ಬಾಲಾತ್ಕಾರಿಗಳು ಓಡಿಹೋದರು. ಸಂತ್ರಸ್ತೆಯು ಸಮೀಪದಲಿದ್ದ ತನ್ನ ಅಕ್ಕನ ಬಳಿ ಈ ಬಗ್ಗೆ ಹೇಳಿದಾಗ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ. ಸಂತ್ರಸ್ತೆಯ ಮತ್ತು ಆಕೆಯ ಕಿರಿಯ ಸಹೋದರನು `ಬಲಾತ್ಕಾರಿಗಳು ತಮ್ಮ ಪರಿಸರದವರೇ ಆಗಿದ್ದಾರೆ, ಅವರಲ್ಲಿ `ಟಾಯಸನ’ ಎಂಬ ಹೆಸರಿನ ವ್ಯಕ್ತಿಯು ತಮ್ಮ ಕಟ್ಟಡದ ತಳಮಹಡಿಯ ವಾಸಿಸುತ್ತಾನೆ, ಎಂದು ಹೇಳಿದ್ದಾರೆ. ಸ್ಥಳೀಯ ಗೂಂಡಾ ಅಬೆದ ಲಾಲಾ ಸಹಿತ ಮೂವರನ್ನು ಬಂಧಿಸಲಾಗಿದೆ.

ಸಂಪಾದಕರ ನಿಲುವು

* ಇಂತಹ ಕಾಮುಕರಿಗೆ ಗಲ್ಲುಶಿಕ್ಷೆಯೇ ಆಗಬೇಕು ! `ಭೀಮ ಮೀಮ ಭಾಯಿ ಭಾಯಿ’ ಎಂದು ಕೂಗುವವರು ಈಗ ಅಬೆದ ಲಾಲಾ ಹಾಗೂ ಆತನ ಸಹಚರರಿಗೆ ಶರೀಯತನ ಅನುಸಾರ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡುವರೇ ?