
ಮುಂಬಯಿ, ಆಗಸ್ಟ್ ೧೭ (ವಾರ್ತೆ.) – ೧೯೪೭ ರಲ್ಲಿ ಭಾರತದ ವಿಭಜನೆಯಾಗಿ ಪಾಕಿಸ್ತಾನದ ನಿರ್ಮಾಣವಾಗಿರುವ ಸಮಯದಲ್ಲಿನ ಭಾರತೀಯರ ನರಸಂಹಾರದ ಭೀಕರತೆಯನ್ನು ತೋರಿಸುವ ಚಿತ್ರ ಪ್ರದರ್ಶನ ಮಹಾರಾಷ್ಟ್ರದ ಸಚಿವಾಲಯದಲ್ಲಿ ಹಾಕಲಾಗಿದೆ. ಕೇಂದ್ರ ಸರಕಾರವು ಆಗಸ್ಟ್ ೧೪ ಇದನ್ನು ‘ವಿಭಜನೆ ವಿಭಿಷಿಕಾ ಸ್ಮಾರಕ ದಿನ’ ಎಂದು ಆಚರಿಸುವ ನಿರ್ಣಯ ತೆಗೆದುಕೊಂಡಿತ್ತು. ಇದರ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಈ ಪ್ರದರ್ಶನೀಯ ಆಯೋಜನೆ ಮಾಡಲಾಗಿತ್ತು.
ಸಚಿವಾಲಯದಲ್ಲಿನ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಚಿವಾಲಯಕ್ಕೆ ಬರುವ ನಾಗರೀಕರು ಈ ಪ್ರದರ್ಶನಿಗೆ ಭೇಟಿ ನೀಡಿ ವಿವರವಾದ ಮಾಹಿತಿ ತಿಳಿದುಕೊಂಡರು. ಭಾರತದ ವಿಭಜನೆಯಿಂದ ಪಾಕಿಸ್ತಾನಕ್ಕೆ ಹೋಗಿರುವ ಸರಿಸುಮಾರು ೬೦ ಲಕ್ಷ ಮುಸಲ್ಮಾನೆತರರಿಗೆ ಭಾರತಕ್ಕೆ ಹಿಂತಿರುಗಬೇಕಾಯಿತು. ಪಂಜಾಬ್, ದೆಹಲಿ ಮುಂತಾದ ಪ್ರದೇಶಗಳಿಂದ ೬೫ ಲಕ್ಷ ಮುಸಲ್ಮಾನರಿಗೆ ಪಾಕಿಸ್ತಾನಕ್ಕೆ ಹೋಗಬೇಕಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ದೇಶದ ವಿಭಜನೆಯ ದುಃಖ ಎಂದೂ ಮರೆಯಲು ಸಾಧ್ಯವಿಲ್ಲ, ದ್ವೇಷ ಮತ್ತು ಹಿಂಸಾಚಾರದಿಂದ ಲಕ್ಷಾಂತರ ಬಂಧು ಬಾಂಧವರಿಗೆ ಸ್ಥಳಾಂತರವಾಗಾಗಬೇಕಾಯಿತು, ತಮ್ಮ ಪ್ರಾಣಗಳನ್ನು ಕಳೆದುಕೊಳ್ಳಬೇಕಾಯಿತು’, ಎಂದು ತಮ್ಮ ಭಾವನೆ ವ್ಯಕ್ತಪಡಿಸಿದರು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !