
ಪೊರಬಂದರ (ಗುಜರಾತ) – ಮುಸಲ್ಮಾನರು ಧ್ವಜ ಹಾರಿಸಬೇಕು; ಆದರೆ ರಾಷ್ಟ್ರಧ್ವಜಕ್ಕೆ ವಂದನೆ ಬೇಡ ರಾಷ್ಟ್ರ ಗೀತೆ ಹಾಡಬೇಡಿ ಎಂದು ಓರ್ವ ಮೌಲ್ವಿ ಆಫೀಜ ವಸಿಫ್ ರಝಾ ಇವರು ಫತ್ವಾ ಜಾರಿ ಮಾಡಿರುವುದು ಇತ್ತೀಚಿಗೆ ವಾರ್ತೆಯಲ್ಲಿ ಪ್ರಸಾರವಾಗಿತ್ತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಪ್ರಸಾರವಾದ ನಂತರ ಮುಸಲ್ಮಾನ ಜನಾಂಗದಲ್ಲಿನ ಕೆಲವು ಯುವಕರು ರಜಾ ಇವರನ್ನು ವಿರೋಧಿಸಿದ್ದಾರೆ ಮತ್ತು ಇಂತಹ ಫತ್ವಾ ಜಾರಿಗೊಳಿಸುವುದು ಇಸ್ಲಾಂನ ವಿರುದ್ಧವಾಗಿದೆ. ರಾಷ್ಟ್ರಕ್ಕೆ ಪ್ರಾಮಾಣಿಕವಾಗಿರುವುದು ಅವಶ್ಯಕ ಇದೆ ಎಂದು ಇಸ್ಲಾಂನಲ್ಲಿ ಹೇಳಿದೆ’, ಎಂದು ಈ ಯುವಕರ ಅಭಿಪ್ರಾಯವಾಗಿತ್ತು.
‘तिरंगे को सलामी मत दो, राष्ट्रगान मत गाओ’: मौलाना के फतवा का विरोध करने वाले 3 मुस्लिम युवकों ने पी फिनाइल, कहा – किया जा रहा है प्रताड़ित#Gujarat #Fatwa #NationalFlaghttps://t.co/Br8tDC4m2T
— ऑपइंडिया (@OpIndia_in) August 12, 2023
೧. ಮೌಲ್ವಿಯ ವಿಡಿಯೋ ನಂತರ ‘ನಗಿನಾ ಮಸ್ಜಿದ್, ಪೋರಬಂದರ’ ಮತ್ತು ‘ದಾರುಲ ಉಲುಮ ಗೌಶೆ ಆಝಮ ಟ್ರಸ್ಟ್’ ಇವರು ಮೌಲ್ವಿಯ ವಿಡಿಯೋದಿಂದ ಅನೇಕರು ಥಳಿಸುವುದು ಮತ್ತು ಜೀವ ಬೆದರಿಕೆ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
೨. ‘ಮೌಲ್ವಿಯ ಫತ್ವಾ ತಪ್ಪಾಗಿದೆ. ಅವರ ಆದೇಶ ಅಯೋಗ್ಯವಾಗಿದೆ’, ಹೀಗೆ ಕೆಲವು ಮುಸಲ್ಮಾನ ಯುವಕರು ಹೇಳಿದ್ದಾರೆ. ಮೌಲ್ವಿಗೆ ವಿರೋಧಿಸಿದ್ದರಿಂದ ಮುಸಲ್ಮಾನ ಜನಾಂಗದಲ್ಲಿನ ಕೆಲವು ಜನರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ. ಅದರ ಜೊತೆಗೆ ಅವರಿಗೆ ಸಮಾಜದಿಂದ ಬಹಿಷ್ಕಾರ ಹಾಕುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
೩. ‘ನಗಿನಾ ಮಸ್ಜಿದ್, ಪೊರಬಂದರ್’ ಮತ್ತು ‘ದಾರುಲ ಉಲುಮ ಗೌಸೆ ಆಝಮ್ ಟ್ರಸ್ಟ್’ ಇವರ ದೂರಿನ ನಂತರ ಶಕಲಿ ಕಾದರಿ, ಸೊಹೇಲ್ ಇಬ್ರಾಹಿಂ ಮತ್ತು ಇಮ್ತಿಯಾಜ್ ಹಾರೂನ್ ಇವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಥೆಯನ್ನು ಮಂಡಿಸುವಾಗ ‘ಫಿನಾಯಿಲ್’ ಕುಡಿದರು.
೪. ಪೋರಬಂದರದ ಪೊಲೀಸ ಅಧಿಕಾರಿ ಭಗಿರಥ ಸಿಂಹ ಇವರು ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುನಿರಂತರ ತಮ್ಮ ಪ್ರತ್ಯೇಕ ಅಸ್ತಿತ್ವ ಕಾಪಾಡುವುದಕ್ಕಾಗಿ ರಾಷ್ಟ್ರವಿರೋಧಿ ಕೃತ್ಯಗಳನ್ನು ನಡೆಸುವ ಬಹುತೇಕ ಮುಸಲ್ಮಾನರು ! ಮುಸಲ್ಮಾನರ ರಾಷ್ಟ್ರ ನಿಷ್ಠೆಯ ಬಗ್ಗೆ ಯಾರಾದರು ಅನುಮಾನ ವ್ಯಕ್ತಪಡಿಸಿದರೆ ಜಾತ್ಯತೀತರು ಆಕ್ರೋಶಗೊಳ್ಳುತ್ತಾರೆ. ಅವರಿಗೆ ಈ ಫತ್ವಾದ ಬಗ್ಗೆ ಏನು ಹೇಳುವುದಿದೆ ? |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath