ಘಾಟಶಿರಸ್ (ಅಹಿಲ್ಯಾನಗರ) ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದಲ್ಲಿ ಕಳ್ಳತನ

ಅಹಿಲ್ಯಾನಗರ – ಪಾತರ್ಡಿ ತಾಲೂಕಿನ ಘಾಟಶಿರಸ್ ನ ಗರ್ಭಗಿರಿಯ ತಪ್ಪಲಿನಲ್ಲಿದ್ದ ಮತ್ತು ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀಕ್ಷೇತ್ರ ವೃದ್ಧೇಶ್ವರ ದೇವಸ್ಥಾನದ ಹೊರಭಾಗದ 4 ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ. ಐವರು ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಸ್ಥಾನದ ಹಿಂಭಾಗದ ನದಿಯ ಬಳಿ ಈ ಕಾಣಿಕೆ ಪೆಟ್ಟಿಗೆಗಳನ್ನು ಒಡೆದು ಅದರಿಂದ ಹಣವನ್ನು ಒಯ್ದರು.
ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಸ್ವಯಂಭೂ ಆದಿನಾಥನ ಶಿವಲಿಂಗವಿರುವ ಸ್ಥಳದಲ್ಲಿ ಕಾಣಿಕೆ ಹುಂಡಿಯನ್ನು ಒಡೆಯಲು ಕಳ್ಳರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಕಾಣಿಕೆ ಪೆಟ್ಟಿಗೆಯನ್ನು ಅಲ್ಲಿಯೇ ಇಟ್ಟರು. ಮರುದಿನ ಬೆಳಗ್ಗೆ ಇದನ್ನು ಗಮನಿಸಿದ ಅರ್ಚಕರು ಹಾಗೂ ಸಿಬ್ಬಂದಿಗಳು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

ನೀವು ಎಂದಾದರೂ ಮಸೀದಿ ಅಥವಾ ಚರ್ಚ್‌ನಲ್ಲಿ ಕಳ್ಳತನ ನಡೆದಿರುವ ಬಗ್ಗೆ ಕೇಳಿದ್ದೀರಾ ?