ರಂಗೋಲಿ ಹಾಕುವುದರ ಹಿಂದಿನ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ

ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯಮಿತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯಮಿತವಾಗಿರುತ್ತವೆ. ಈ ಸ್ಪಂದನಗಳು ಶರೀರಕ್ಕೆ, ಕಣ್ಣುಗಳಿಗೆ ಮತ್ತು ಮನಸ್ಸಿಗೆ ಹಾನಿಕಾರಕವಾಗಿರುತ್ತವೆ. ಈ ಅನಿಷ್ಟ ಸ್ಪಂದನಗಳನ್ನು ತಡೆಗಟ್ಟಲು ನೆಲದ ಮೇಲೆ ರಂಗೋಲಿಯಿಂದ ಕೋನಗಳನ್ನು ಮತ್ತು ಶುಭಚಿಹ್ನೆಗಳನ್ನು ಬಿಡಿಸುತ್ತಾರೆ.

ದೇವತೆಯ ಹೆಸರಿನ ಅಥವಾ ದೇವತೆಯ ರೂಪದ ರಂಗೋಲಿಯನ್ನು ಬಿಡಿಸಬಾರದು. ಏಕೆಂದರೆ ರಂಗೋಲಿಗೆ ಸಗುಣ ಈಶ್ವರೀ ಶಕ್ತಿಯ ಬಂಧನವು ಬರುತ್ತದೆ. ಇದರಿಂದ ರಂಗೋಲಿಯ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಸ್ವಸ್ತಿಕ ಅಥವಾ ಚುಕ್ಕೆಗಳಿರುವ ರಂಗೋಲಿಗೆ ನಿರ್ಗುಣ ಶಕ್ತಿಯ ಆಧಾರವಿರುವುದರಿಂದ ಅದರ ಕ್ಷಮತೆಯು ಹೆಚ್ಚಾಗಿ, ಪ್ರಕಟ ಶಕ್ತಿಯಿಂದ ಹೆಚ್ಚು ಪ್ರಮಾಣದಲ್ಲಿ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ದೇವರ ಪೂಜೆಯ ಪೂರ್ವತಯಾರಿ’)