ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಅನ್ವಯಿಸಿ ! – ‘ಕೊಕೊಮಿ’ಯವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ

ಇಂಫಾಳ (ಮಣಿಪುರ) – ‘ಕೋರ್ಡಿನೆಟಿಂಗ ಕಮಿಟಿ ಎಂಡ್ ಮಣಿಪುರ ಇಂಟಿಗ್ರೇಟಿ’ (ಕೊಕೊಮಿ) ಈ ಇಂಫಾಳದ ಸಂಸ್ಥೆಯು ಮಣಿಪುರದಲ್ಲಿ ಆಮಲಿ ಪದಾರ್ಥಗಳ ವ್ಯಾಪಾರದಲ್ಲಿ ಭಾಗಿಯಾಗಿರುವ ಅಕ್ರಮ ವಲಸಿಗರನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದಲ್ಲಿ ‘ಎಸ.ಆರ.ಸಿ’ ಯ (ರಾಷ್ಟ್ರೀಯ ಪೌರತ್ವ ಕಾನುನೂ) ಅನುಷ್ಠಾನಕ್ಕೆ ಒತ್ತಾಯಿಸಿದ್ದಾರೆ. ಮಣಿಪುರದಲ್ಲಿ ಆಡಳಿತವು ಬದಲಾಗಬಾರದು. ಅಲ್ಲದೆ ಕುಕಿಗೆ ಪ್ರತ್ಯೇಕ ಆಡಳಿತವನ್ನು ನಡೆಸಲು ಅನುಮತಿಸಬಾರದು, ಎಂದು ಪ್ರಧಾನ ಮಂತ್ರಿ ಅವರಿಗೆ ನೀಡಿದ ಅರ್ಜಿಯಲ್ಲಿ ಹೇಳಲಾಗಿದೆ.
ಕೇಂದ್ರ ಸರಕಾರವು ‘ಕುಕಿ-ಜೋಮಿ ಗ್ರೂಪ’ನ ಕೆಲವು ನಾಯಕರೊಂದಿಗೆ ವಿದೇಶಿ ಅಂಶಗಳನ್ನು ಗುರುತಿಸಿ ಅವರನ್ನು ಮ್ಯಾನಮಾರ್‌ಗೆ ಕಳುಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಮಣಿಪುರದಲ್ಲಿನ ಹಿಂಸಾಚಾರದಲ್ಲಿ ಮ್ಯಾನಮಾರ್‌ನಿಂದ ವಲಸೆ ಬಂದವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಆಗ್ರಹವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು !