ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ‘ಹಿಂದೂಗಳ ದೇವಸ್ಥಾನಗಳು ಹಿಂದೆ ಬೌದ್ಧರ ಮಠಗಳಾಗಿದ್ದವು ಮತ್ತು ಅವುಗಳ ಸಮೀಕ್ಷೆಯಾಗಬೇಕು’, ಎಂಬ ಹೇಳಿಕೆಗೆ ಮಾಯಾವತಿಯವರಿಂದ ಮೌರ್ಯ ಇವರಿಗೆ ಪ್ರಶ್ನೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಕೆಲ ದಿನಗಳ ಹಿಂದೆ ‘ಬದ್ರೀನಾಥ ಈ ತೀರ್ಥಕ್ಷೇತ್ರ ಸೇರಿದಂತೆ ದೇಶದಲ್ಲಿನ ಹಿಂದೂಗಳ ಅನೇಕ ದೇವಸ್ಥಾನಗಳು ಹಿಂದೆ ಬೌದ್ಧರ ಮಠಗಳಾಗಿದ್ದವು. ಪುರಾತತ್ವ ಇಲಾಖೆಯಿಂದ ಇವೆಲ್ಲವುಗಳ ಸಮೀಕ್ಷೆಯಾಗಬೇಕು’ ಎಂದು ಬೇಡಿಕೆ ಮಾಡಿದ್ದರು. ಇದನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಇವರು ಟೀಕಿಸಿದ್ದಾರೆ. ಮಾಯಾವತಿ ಇವರು, ಮೌರ್ಯ ಇವರು ಕೆಲವು ವರ್ಷ ಭಾಜಪದ ಸರಕಾರದಲ್ಲಿ ಸಚಿವರಾಗಿದ್ದರು, ಆಗ ಅವರು ಸಮೀಕ್ಷೆಗಾಗಿ ಸರಕಾರವನ್ನು ಏಕೆ ಆಗ್ರಹಿಸಲಿಲ್ಲ ? ಚುನಾವಣೆಯ ಸಮಯದಲ್ಲಿ ಈ ರೀತಿಯ ಧಾರ್ಮಿಕ ವಿವಾದ ನಿರ್ಮಾಣ ಮಾಡುವುದು, ಇದು ಮೌರ್ಯ ಮತ್ತು ಸಮಾಜವಾದಿ ಪಕ್ಷ ಇವರ ರಾಜಕಾರಣವಾಗಿದೆ. ಬೌದ್ಧರು ಮತ್ತು ಮುಸ್ಲೀಮರು ಇದಕ್ಕೆ ಬಲಿ ಬೀಳುವುದಿಲ್ಲ ಎಂದಿದ್ದಾರೆ.
#BSP President #Mayawati on Sunday accused Samajwadi Party leader Swami Prasad Maurya of trying to drive a wedge between communities ahead of election with his comment on demolition ofhttps://t.co/AEZdiaohUP
— Economic Times (@EconomicTimes) July 30, 2023
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.