ಗಾಝಿಯಾಬಾದನಲ್ಲಿ ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿ, ಮತಾಂತರಕ್ಕೆ ಪ್ರಯತ್ನ

ಗಾಝಿಯಾಬಾದನಲ್ಲಿ ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿ, ಮತಾಂತರಕ್ಕೆ ಪ್ರಯತ್ನ

ಗಾಝಿಯಾಬಾದ (ಉತ್ತರಪ್ರದೇಶ) – ಇಲ್ಲಿನ ವಿಜಯನಗರ ಕ್ಷೇತ್ರದಲ್ಲಿ `ಲವ್ ಜಿಹಾದ’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಓರ್ವ ಹಿಂದೂ ಹುಡುಗಿಗೆ ಮಸೀದಿಗೆ ಕರೆದೊಯ್ದು ಬಲವಂತವಾಗಿ ಗೋಮಾಂಸ ತಿನ್ನಿಸಿ ಮತಾಂತರಗೊಳಿಸಲು ಪ್ರಯತ್ನಿಸಲಾಯಿತು. ಖಾಲಿದ ಚೌಧರಿ ಎಂಬ ಮುಸ್ಲಿಂ ಯುವಕನು ಫೇಸಬುಕ್ ಸಹಾಯದಿಂದ ತಾನು ದೀಪಕ್ ಎಂದು ಸುಳ್ಳು ಹೇಳಿ ಸಂತ್ರಸ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದನು. ತದನಂತರ ಅವನು ಅವಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ, ಅವಳೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದನು ಮತ್ತು ಅದರ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದನು. ತದನಂತರ ಖಾಲಿದನ ಸತ್ಯ ಹೊರಬಂದಾಗ ಅವನು ಸಂತ್ರಸ್ತೆಗೆ ಅವಳ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದನು. ಅಷ್ಟೇ ಅಲ್ಲ ಮಸೀದಿಗೆ ಕರೆದೊಯ್ದು ಗೋಮಾಂಸವನ್ನು ತಿನ್ನಿಸಿದನು ಮತ್ತು ಮತಾಂತರಕ್ಕೆ ಪ್ರಯತ್ನಿಸಿದನು.

ಖಾಲಿದ ಚೌಧರಿಯು ಅವಳ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದರಿಂದ ಆಕೆ ಗರ್ಭಿಣಿಯಾದಳು. ಆಕೆ ಮತಾಂತರಗೊಳ್ಳಲು ನಿರಾಕರಿಸಿದಾಗ ಖಾಲಿದ್ ಅವಳಿಗೆ ಥಳಿಸಿದನು. ಇದರಿಂದ ಅವಳ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ. ಸಂತ್ರಸ್ಥೆ ಹುಡುಗಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಖಾಲಿದ್ ಚೌಧರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ಸಂಪಾದಕರ ನಿಲುವು

* ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಕೇವಲ ಹೆಸರಿಗೆ ಮಾತ್ರವಿದ್ದು, ಅದಕ್ಕೆ ಮತಾಂಧ ಮುಸಲ್ಮಾನರು ಸ್ವಲ್ಪವೂ ಅಂಜುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲು ಸರಕಾರವು ಮತಾಂಧರ ವಿರುದ್ಧ ಕಠಿಣ ಕ್ರಮವನ್ನು ಕೈಕೊಳ್ಳಬೇಕು !