ಕೈಗೆ ಕೆಂಪು ದಾರ ಕಟ್ಟಿದ್ದನೆಂದು ಕ್ರೈಸ್ತ ಶಾಲೆಯ ಶಿಕ್ಷಕನಿಂದ ಹಿಂದೂ ವಿದ್ಯಾರ್ಥಿಗೆ ಥಳಿತ !

  • ಬೊಕಾರೋ (ಜಾರ್ಖಂಡ್)ದಲ್ಲಿನ ಘಟನೆ

  • ದಾರಾ ತೆಗೆಯಲು ಅನಿವಾರ್ಯಗೊಳಿಸಿದರು !

ಬೊಕಾರೋ (ಜಾರ್ಖಂಡ್) – ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವ ಓರ್ವ ಹಿಂದೂ ವಿದ್ಯಾರ್ಥಿಯು ಕೈಯಲ್ಲಿ ಧಾರ್ಮಿಕ ದಾರ ಕಟ್ಟಿದ್ದರಿಂದ ಕಾರ್ಮೆಲ್ ಕಾನ್ವೆಂಟ್ ಶಾಲೆಯ ಶಿಕ್ಷಕನು ವಿದ್ಯಾರ್ಥಿಗೆ ಥಳಿಸಿ ದಾರ ಕತ್ತರಿಸಿದರು. ಅಮಿತ ಲಕಡಾ ಎಂದು ಈ ಶಿಕ್ಷಕನ ಹೆಸರಾಗಿದೆ, ಹುಡುಗನು ಬ್ಲೇಡಿನಿಂದ ದಾರಾ ಕತ್ತರಿಸುವಷ್ಟು ಶಿಕ್ಷಕರು ಒತ್ತಡ ಹೇರಿದರು. ‘ಈ ದಾರಾ ಎಂದರೆ ನಮ್ಮ ಧಾರ್ಮಿಕ ಪ್ರತೀಕವಾಗಿದೆ’, ಎಂದು ಸಂತ್ರಸ್ತ ವಿದ್ಯಾರ್ಥಿ ಲಕಡಾ ಇವರಿಗೆ ಹೇಳಲು ಪ್ರಯತ್ನಿಸಿದನು; ಆದರೆ ಲಕಡಾ ಇವರು ಅವನ ಯಾವುದೇ ಮಾತು ಕೇಳದೆ ಥಳಿಸಿದರು.

ಜುಲೈ ೧೮ ರಂದು ಈ ಘಟನೆ ನಡೆದಿದ್ದು ಭಾಜಪ ಮತ್ತು ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು ಈ ಘಟನೆಯನ್ನು ಗಂಭೀರವಾಗಿ ಆಕ್ಷೇಪಿಸಿದ್ದಾರೆ. ಆರೋಪಿ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಶಾಲೆಯ ಪ್ರಾಚಾರ್ಯರು ಸಿಸ್ಟರ್ ಜಯಸ್ ಕುಲ್ಲು ಇವರು ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಬೊಕಾರೋದ ಪೊಲೀಸ ಆಯುಕ್ತರು ಮತ್ತು ಹಿರಿಯ ಜಿಲ್ಲಾಧಿಕಾರಿ ಇವರ ಬಳಿ ಕೂಡ ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಕರಣದಲ್ಲಿ ಗಮನಹರಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಅವರು ಈ ಪ್ರಕರಣದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಆಶ್ವಾಸನೆ ಕೂಡ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ರಾಜ್ಯದಲ್ಲಿ ಹಿಂದೂದ್ರೋಹಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದರಲ್ಲಿ ಆಶ್ಚರ್ಯ ಏನೂ ಇಲ್ಲ !
  • ಕ್ರೈಸ್ತ ಶಾಲೆಗಳಲ್ಲಿ ಇಂತಹ ಹಿಂದುದ್ವೇಷದ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಇಂತಹ ಶಾಲೆಗಳನ್ನು ಸರಿದಾರಿಗೆ ತರುವುದಕ್ಕಾಗಿ ಸರಕಾರವು ಅದರ ಮೇಲೆ ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಹಿಂದುಗಳೇ ಸರಕಾರದ ಮೇಲೆ ಒತ್ತಡ ತರುವುದು ಆವಶ್ಯಕ !